ಚಿಂಪಾಂಜಿಗಳಿಂದಲೇ ಚಿಂಪಾಂಜಿಯ ಹತ್ಯೆ
ತನ್ನ ಜೀವಮಾನದ ಬಹುತೇಕ ಭಾಗವನ್ನು ಚಿಂಪಾಂಜಿ ಒಂದು ಮನುಷ್ಯರ ಮಧ್ಯದಲ್ಲಿದ್ದು ಕಳೆದಿತ್ತು. ಹೇ ಕೆಲವು ದಿನಗಳ ಹಿಂದೆ ಆ ಚಿಂಪಾಂಜಿಯನ್ನು ಇತರ ಚಿಂಪಾಂಜಿ ಗಳೊಂದಿಗೆ ಹೇಗೆ ಬದುಕಬೇಕು ಎಂದು ಕಲಿಸಲು ಕೀನ್ಯಾದ ಅಭಯಾರಣ್ಯಕ್ಕೆ ಕಳಿಸಿ ಕೊಡಲಾಗಿತ್ತು. ಆದರೆ ಆ ಚಿಂಪಾಂಜಿ ಗೆ ಆದರೆ ಚಿಂಪಾಂಜಿಗಳ ಜೊತೆ ಹೊಂದಿಕೊಂಡು ಹೋಗಲು ಕಷ್ಟವಾಗಿತ್ತು. ಇಷ್ಟಕ್ಕೆ ರೊಚ್ಚಿಗೆದ್ದ ಸಹ ಚಿಂಪಾಂಜಿಗಳು ಮನುಷ್ಯರ ಜೊತೆ ಇದು ಬೆಳೆದುಬಂದಿದ್ದ ಚಿಂಪಾಂಜಿಯನ್ನು ಹೊಡೆದುಕೊಂದುಹಾಕಿರುವ ಘಟನೆ ನಡೆದಿದೆ.
: ಹೆಲಿಕಾಪ್ಟರ್ ಪತನ! ಸತತ 12 ಗಂಟೆಗಳ ಕಾಲ ಸಮುದ್ರದ ಮಧ್ಯದಲ್ಲಿ ಈಜಿ ದಡ ಸೇರಿ ಬದುಕುಳಿದ ಸಚಿವ!
ಬರಾನ್ ಎಂಬ ಚಿಂಪಾಂಜಿಯನ್ನ ಇರಾನಿನ ರಾಜಧಾನಿ ಟೆಹ್ರಾನ್ನಲ್ಲಿರುವ ಎರಾಮ್ ಪಾರ್ಕ್ ಮೃಗಾಲಯದಿಂದ ಕೀನ್ಯಾದ ಲೈಕಿಪಿಯಾದಲ್ಲಿರುವ ಸ್ವೀಟ್ವಾಟರ್ಸ್ ಚಿಂಪಾಂಜಿ ಅಭಯಾರಣ್ಯಕ್ಕೆ ವರ್ಗಾಯಿಸಲಾಗಿತ್ತು. ಅಲ್ಲದೆ ಬರಾನ್ ನ್ನು 90 ದಿನಗಳ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು.
ಕ್ವಾರಂಟೈನ್ನಿಂದ ಬರಾನ್ ಬಿಡುಗಡೆಗೊಂಡ ಬಳಿಕ ಆಕೆಯನ್ನು ಅಭಯಾರಣ್ಯದಲ್ಲಿ ಬಿಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಇದರಲ್ಲಿ ಸಹ ಚಿಂಪಾಂಜಿಗಳು ಇದ್ದಕಡೆಗೆ ಬರಾನ್ ಪ್ರವೇಶ ಮಾಡಿದ್ದಾಳೆ.. ಇದರಿಂದ ರೊಚ್ಚಿಗೆದ್ದ ಇತರ ಚಿಂಪಾಂಜಿಗಳು ಬರಾನ್ ಗೆ ಚೆನ್ನಾಗಿ ಥಳಿಸಿ ಹಲ್ಲೆ ಮಾಡಿವೆ. ಇದರಿಂದ ಎಚ್ಚೆತ್ತ ಝೂಕೀಪರ್ಗಳು ಕೊನೆಗೆ ಚಿಂಪಾಂಜಿಗಳನ್ನು ಶಾಂತಗೊಳಿಸಿ ಬರಾನ್ ನ
ರಕ್ಷಣೆ ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಚಿಂಪಾಂಜಿ ಗಳಿಂದ ಹಲ್ಲೆಗೆ ಒಳಗಾಗಿದ್ದ ಚಿಂಪಾಂಜಿ ಸಾವಿಗೆ ಈಡಾಗಿದೆ.
ಮನುಷ್ಯರ ಜೊತೆಗೆ ಬೆಳೆದಿದ್ದ ಬರಾನ್
ಟೆಹ್ರಾನ್ನಲ್ಲಿರುವ ಎರಾಮ್ ಪಾರ್ಕ್ ನಲ್ಲಿ ಜನಿಸಿದ ಬರಾನ್ ನ್ನು ತಾಯಿ ಚಿಂಪಾಂಜಿ ತಿರಸ್ಕರಿಸಿದ ಕಾರಣ, ಮನುಷ್ಯರು ಬರಾನ್ ನ್ನು ಸಾಕಿ ಬೆಳೆಸಿದರು.. ಆದರೆ ಹೆಚ್ಚು ದಿನಗಳ ಕಾಲ ಹೀಗೆ ಮನುಷ್ಯರು ಸಾಕಿ ಬಳಸುವುದು ಸರಿಯಲ್ಲ ಎಂಬ ಕಾರಣಕ್ಕೆ ಬರಾನ್ ನ್ನು
ಕೀನ್ಯಾದ ಲೈಕಿಪಿಯಾದಲ್ಲಿರುವ ಸ್ವೀಟ್ವಾಟರ್ಸ್ ಚಿಂಪಾಂಜಿ ಅಭಯಾರಣ್ಯಕ್ಕೆ ಕಳಿಸಿ ಆಕೆಗೆ ಇತರ ಚಿಂಪಾಂಜಿ ಗಳಂತೆಯೇ ಬದುಕುವುದನ್ನು ಕಲಿಯಲು ಈ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಕೀನ್ಯಾದಲ್ಲಿ ಇತರ ಚಿಂಪಾಂಜಿಗಳು ಬರಾನ್ ನ್ನು ಹೊಡೆದು ಕೊಂದು ಹಾಕಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: