ಕೂದಲು ಉದುರುವ ಸಮಸ್ಯೆ ಇಲ್ಲದಿರುವವರೇ ಇಲ್ಲವೇನೋ. ಕೂದಲು ಉದುರದಂತೆ ಮನೆಯಲ್ಲೇ ಕೇಶ ತೈಲವನ್ನು ಹೇಗೆ ತಯಾರಿಸುವುದು ನೋಡೋಣ ಬನ್ನಿ
ಕೊಬ್ಬರಿ ಎಣ್ಣೆಗೆ, ಹರಳೆಣ್ಣೆ ಬೆರೆಸಿ. ಇದರ ಜೊತೆಗೆ ಎರಡು ಹಿಡಿಯಷ್ಟು ಭೃಂಗರಾಜ ಎಲೆಯನ್ನು ಹಾಕಿ. ಇದರಲ್ಲಿ ಔಷಧಿ ಗುಣಗಳಿವೆ.
ಇದರ ಜೊತೆಗೆ ಅರಕೆ ಸೊಪ್ಪಿನ ಗಿಡದ ಹೂವನ್ನು ಒಂದು ಹಿಡಿಯಷ್ಟು ಸೇರಿಸಿ.
ಅದಕ್ಕೆ 4 ರಿಂದ 5 ಬೆಟ್ಟದ ನೆಲ್ಲಿ ಕಾಯಿಯ ರಸ ತೆಗೆದು ಹಾಕಿ. ಇದರ ಜೊತೆಗೆ ಮಂದಾರ ಹೂವು, ಮದರಂಗಿ ಸೊಪ್ಪಿನಿಂದ ಹಿಡಿಯಷ್ಟು ರಸ ತೆಗೆದಿಡಿ. ಇವೆಲ್ಲಾ ರಸವನ್ನು ಕೊಬ್ಬರಿ ಎಣ್ಣೆ ಮತ್ತು ಹರಳೆಣ್ಣೆಗೆ ಬೆರೆಸಿ ಕುದಿಸಿ ನೀರಿನಂಶ ಹೋಗಿ ಎಣ್ಣೆ ಉಳಿಯುವವರೆಗೂ ಕುದಿಸಿ. ನಂತರ ತಣ್ಣಗಾದ ಮೇಲೆ
ಈ ಎಣ್ಣೆಯನ್ನು ನಿರಂತರವಾಗಿ ತಲೆ ಕೂದಲಿಗೆ ಹೆಚ್ಚುವುದರಿಂದ ನಿದ್ರಾಹೀನತೆ, ಕಣ್ಣಿನ ಸಮಸ್ಯೆಗಳು ದೂರವಾಗುತ್ತವೆ ಅಲ್ಲದೆ ಕೂದಲು ಉದುರುವುದು ನಿಂತು ದಟ್ಟವಾದ ಕೂದಲು ಬೆಳೆಯುವುದು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada