.
ಈ ಸಿನಿಮಾವು 2018 ರಲ್ಲಿ ಪ್ರಾರಂಭಗೊಂಡಿತ್ತು. ಈ ಚಿತ್ರವು ಬಿಜಾಪುರ ಮತ್ತು ದೊಡ್ಡಬಳ್ಳಾಪುರ ಸುತ್ತಮುತ್ತಲಿನಲ್ಲಿ ಮೊದಲ ಶೆಡ್ಯೂಲ್ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ಹಳ್ಳಿ ಹುಡುಗರ ಸಾಹಸ ‘ಬೆಟ್ಟದ ದಾರಿ’ ಚಿತ್ರೀಕರಣದ ಮೊದಲ ಶೆಡ್ಯೂಲ್ ಪೂರ್ಣಗೊಳಿಸಿದೆ . ಈ ಹಿಂದೆ ‘ಬಂಗಾರಿ ಮತ್ತು ಶಿವನಪಾದ’ ನಿರ್ದೇಶಿಸಿದ್ದ, ನಿರ್ದೇಶಕ ಮಹಾ ಚಂದ್ರು ಹೇಳುತ್ತಾರೆ.
ರಾಜ್ಯದಲ್ಲಿನ ನೀರಿನ ಸಮಸ್ಯೆಯಂತಹ ಪ್ರಸ್ತುತ ಸಮಸ್ಯೆಗಳನ್ನು ನಾವು ಕಥೆಯ ಪ್ರಮುಖ ಕಥಾವಸ್ತುವಾಗಿ ಆರಿಸಿಕೊಂಡಿದ್ದಾರೆ. ಕರ್ನಾಟಕ ಜೀವನಶೈಲಿಯನ್ನು ಒಳಗೊಂಡಿದೆ. ಉತ್ತರ ಕರ್ನಾಟಕದಲ್ಲಿ ಜನರು ನೀರಿನ ಸಮಸ್ಯೆಯಿಂದ ಹಲವು ವರ್ಷಗಳಿಂದ ಹೇಗೆ ನರಳುತ್ತಿದ್ದಾರೆ. ಎಂಬುವುದನ್ನು ಈ ಚಿತ್ರ ಕಥೆಯಲ್ಲಿ ತೋರಿಸಲಾಗಿದೆ. ಹಾಗಾಗಿ ಮಕ್ಕಳನ್ನು ಬಳಸಿಕೊಂಡು ಪ್ರಸ್ತುತ ಸಮಾಜದೊಂದಿಗೆ ಪರಿಸ್ಥಿತಿಯನ್ನು ಹಂಚಿಕೊಳ್ಳುವ ಪ್ರಯತ್ನಿಸಿದ್ದೇವೆ ಎಂದು ಮ. ಚಂದ್ರು ತಿಳಿಸಿದ್ದಾರೆ. ಈ ಸಿನಿಮಾವು ಮಾ. 4 ರಂದು ಬಿಡುಗಡೆಯಾಗಲಿದೆ.
ಚಂದ್ರಕಲಾ ಟಿ.ಆರ್ ಮತ್ತು ಮಂಜುನಾಥ್ ನಾಯಕ್ ನಿರ್ಮಾಪಕರು, ನಂದಕುಮಾರ್ ಛಾಯಾಗ್ರಹಣ, ವೀರ್ ಸಮರ್ಥ್ ಸಂಗೀತ, ಅರ್ಜುನ್ (ಕಿಟ್ಟಿ) ಸಂಕಲನ, ಡಾ.ವಿ.ನಾಗೇಂದ್ರ ಪ್ರಸಾದ್, ಕೆ.ಕಲ್ಯಾಣ್, ವಿಜಯ ಬರಮಸಾಗರ ಸಾಹಿತ್ಯ, ಕಂಬಿ ರಾಜ್ ನೃತ್ಯ, ಸತೀಶ್ ಕಲಾ ನಿರ್ದೇಶನ ತಾಂತ್ರಿಕ ತಂಡವಿದೆ.
ತಾರಾಗಣದಲ್ಲಿ ಮಾಸ್ಟರ್ ನಿಶಾಂತ್ ಟಿ ರಾಥೋಡ್, ಮಾಸ್ಟರ್ ಅಂಕಿತಾ ನವನಿದಿ, ಬೇಬಿ ಲಕ್ಷ್ಮಿ ಶ್ರೀ, ಮಾಸ್ಟರ್ ರಂಗಸ್ವಾಮಿ, ಮಾಸ್ಟರ್ ವಿಘ್ನೇಶ್ , ಬೇಬಿ ಮಾನ್ಯತಾ, ಮಾಸ್ಟರ್ ರೋಹಿತ್ ಗೌಡ, ರಮೇಶ್ ಭಟ್, ಬ್ಯಾಂಕ್ ಜನಾರ್ದನ್, ಉಮೇಶ್, ಮೈಸೂರು ಮಲ್ಲೇಶ್ ಇದ್ದಾರೆ. , ನಿಶ್ಚಿತಾ ರಾಘವೇಂದ್ರ, ಗಂಗಾಧರ ಗೌಡ, ಆರ್ ನಾಗೇಶ್ ಮತ್ತಿತರರು ತಾರಾಗಣದಲ್ಲಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada