ಹರಿಪ್ರಸಾದ್ ವಿರುದ್ಧ ಬಿ.ಸಿ.ಪಾಟೀಲ್ ವ್ಯಂಗ್ಯ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಕಿಲ್ ಇಂಡಿಯಾ ಯೋಜನೆಯನ್ನು ಕಿಲ್ ಇಂಡಿಯಾ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಟೀಕಿಸಿರುವ ವಿಚಾರ ಕುರಿತು ಸಚಿವ ಬಿ ಸಿ ಪಾಟೀಲ್ ಮೈಸೂರಿನಲ್ಲಿ ವ್ಯಂಗ್ಯವಾಡಿದ್ದಾರೆ.
ಹರಿಪ್ರಸಾದ್ ಪ್ರಧಾನಮಂತ್ರಿಯನ್ನು ಟೀಕಿಸುವಂತಹ ದೊಡ್ಡ ಮಟ್ಟಕ್ಕೆ ಬೆಳೆದಿರುವ ವ್ಯಕ್ತಿಯಲ್ಲ. ಹಾಗಾಗಿ ಅವರ ಹೇಳಿಕೆಗೆ ಉತ್ತರಿಸುವ ಅವಶ್ಯಕತೆಯಿಲ್ಲ. ಸುಳ್ಳನ್ನು ಒಂದು ಬಾರಿ ಹೇಳಬಹುದು ಎಂದು ಸೂಚ್ಯವಾಗಿ ತಿಳಿಸಿದರು.
ನರೇಂದ್ರ ಮೋದಿ ನೇತೃತ್ವದಲ್ಲಿ 2014ರಲ್ಲಿ ಬಿಜೆಪಿ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂತು. 2019ರ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂತು. ನರೇಂದ್ರ ಮೋದಿ ಪ್ರಧಾನಿಯಾಗುವ ಮುನ್ನಾ ದೇಶದ ಅರ್ಥ ವ್ಯವಸ್ಥೆ 7ನೇ ಸ್ಥಾನದಲ್ಲಿತ್ತು. ನರೇಂದ್ರಮೋದಿ ಪ್ರಧಾನಿಯಾದ ನಂತರ 5ನೇ ಸ್ಥಾನಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ 3ನೇ ಸ್ಥಾನಕ್ಕೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾದ ಶಾಸಕರನ್ನು ವೇಶ್ಯೆಯರಿಗೆ ಹೋಲಿಸಿರುವ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ವಿರುದ್ದ ಸಚಿವ ವಾಗ್ದಾಳಿ ನಡೆಸಿದ ಅವರು, ಅವರ ಹೇಳಿಕೆಯೇ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಬೇರೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಲಾಭವಾಗುತ್ತದೆ ಎಂದು ಭಾವಿಸಿದ್ದರೆ ಅವರಿಗಿಂತ ಮೂರ್ಖ ಬೇರೊಬ್ಬನಿಲ್ಲ ಎನಿಸುತ್ತದೆ ಎಂದು ಲೇವಡಿ ಮಾಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುಣಸೆ ಹಣ್ಣನ್ನು ಅದರ ರುಚಿಗಾಗಿ ಅನೇಕರು ತಿನ್ನುತ್ತಾರೆ.

Sun Jan 22 , 2023
ಹುಣಸೆ ಹಣ್ಣನ್ನು ಅದರ ರುಚಿಗಾಗಿ ಅನೇಕರು ತಿನ್ನುತ್ತಾರೆ. ಆದರೆ, ಹುಣಸೆಹಣ್ಣು ಕೆಲವು ಜನರಿಗೆ ತುಂಬಾ ಅಪಾಯಕಾರಿ. ಹಲ್ಲಿನ ಸಮಸ್ಯೆ ಇರುವವರು ಹುಣಸೆಹಣ್ಣು ತಿನ್ನಬಾರದು. ನಿಮ್ಮ ದೈನಂದಿನ ಜೀವನದಲ್ಲಿ ನೀವು ಹುಣಸೆಹಣ್ಣನ್ನು ಸೇವಿಸಿದರೆ, ಈಗಲೇ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿ. ಹೀಗೆ ಮಾಡುವುದರಿಂದ ಹಲ್ಲಿನ ಸಮಸ್ಯೆ ದೂರವಾಗುತ್ತದೆ. ಅಲರ್ಜಿಗಳು ಸಹ ಸಮಸ್ಯೆಯಾಗಬಹುದು ಹೆಚ್ಚು ಹುಣಸೆಹಣ್ಣು ತಿನ್ನುವುದು ಸಹ ಅಲರ್ಜಿಯನ್ನು ಉಂಟುಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ರಿಂಗ್ವರ್ಮ್, ತುರಿಕೆ, ಊತ, ತಲೆತಿರುಗುವಿಕೆ ಮುಂತಾದ ತೊಡಕುಗಳ ಅಪಾಯವೂ […]

Advertisement

Wordpress Social Share Plugin powered by Ultimatelysocial