ನಂಜನಗೂಡು ನಗರದ ಅಂಬೇಡ್ಕರ್ ಭವನದಲ್ಲಿ ರೈತರ ಆಕ್ರೋಶ.
ಭೂ ಸ್ವಾದೀನ ಪ್ರಕ್ರಿಯೆ ವಿರೋಧಿಸಿ ರೈತರ ಪ್ರತಿಭಟನೆ.
ಮುದ್ದಹಳ್ಳಿ, ಎಲಚಗೆರೆ ಸಿಂಧುವಳ್ಳಿಪುರ ಗ್ರಾಮಗಳ ಒಟ್ಟು 448.38 ಎಕರೆ ಕೃಷಿ ಯೋಗ್ಯ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವ ಕೆಐಎಡಿಬಿ ಅಧಿಕಾರಿಗಳು.
ಧರ ನಿಗದಿಗೆ ಇಂದು ಅಂಬೇಡ್ಕರ್ ಭವನದಲ್ಲಿ ಸಭೆಯನ್ನು ಕರೆಯಲಾಗಿತ್ತು.
ಪೊಲೀಸ್ ಭದ್ರತೆಯಲ್ಲಿ ರೈತರನ್ನು ಒಳಗೆ ಬಿಡದೆ ಬೀಗವನ್ನು ಹಾಕಲಾಗಿತ್ತು.
ರೈತ, ದಲಿತ, ಕಾರ್ಮಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಿ ಶಾಸಕರಿಗೆ ಘೇರಾವ್ ಹಾಕಲಾಯಿತು
ನಮ್ಮ ಭೂಮಿ ನಾವು ಕೊಡುವುದಿಲ್ಲ ಎಂದು ಪಟ್ಟು ಹಿಡಿದ ರೈತರು.
ಅಂಬೇಡ್ಕರ್ ಭವನದ ಗೇಟ್ ಮುಚ್ಚಿ ಶಾಸಕರಿಗೆ ಘೇರಾವ್ ಮಾಡಿ
ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ ರೈತರು.
ಪೊಲೀಸರು ಮತ್ತು ರೈತರ ನಡುವೆ ತಳ್ಳಾಟ ನೂಕಾಟ.
ರೈತರು ಹಾಗೂ ಶಾಸಕರ ನಡುವೆ ಮಾತಿನ ಚಕಮಕಿ.
ಶಾಸಕರ ಬೆಂಬಲಿಗರು ಹಾಗೂ ರೈತರ ನಡುವೆ ವಾಗ್ವಾದ.
ಶಾಸಕರನ್ನು ಹಿಗ್ಗಾಮಗ್ಗ ತರಾಟೆಗೆ ತೆಗೆದುಕೊಂಡ ಮೂರು ಗ್ರಾಮಗಳ ರೈತರು.
ಕೂಡಲೇ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಕರೆ ನೀಡಲಾಗುತ್ತದೆ ಎಂದು ರೈತರ ಎಚ್ಚರಿಕೆ.
https://play.google.com/store/apps/details?id=com.speed.newskannada