HEALH TIPS:ಕಣ್ಣು ದೇಹದ ಅತ್ಯಂತ ಸೂಕ್ಷ್ಮ ಹಾಗೂ ಅತ್ಯಮೂಲ್ಯ ಅಂಗ ಅದನ್ನು ಕಾಪಾಡಲು ಸುಲಭ ಉಪಾಯ;

ಕಣ್ಣು ದೇಹದ ಅತ್ಯಂತ ಸೂಕ್ಷ್ಮ ಹಾಗೂ ಅತ್ಯಮೂಲ್ಯ ಅಂಗ. ನಮ್ಮ ಸುತ್ತ ಇರುವ ಜಗತ್ತು ಮತ್ತು ಬಣ್ಣಗಳನ್ನು ನೋಡಲು ಕಣ್ಣುಗಳು ಬೇಕೇಬೇಕು. ಗಂಭೀರ ಸಮಸ್ಯೆ ಬರುವವರೆಗೂ ನಾವು ಕಣ್ಣನ್ನು ನಿರ್ಲಕ್ಷಿಸುತ್ತೇವೆ. ಕಣ್ಣಿನ ಆರೋಗ್ಯ ಮತ್ತು ದೃಷ್ಟಿಶಕ್ತಿಯನ್ನು ಉಳಿಸಿಕೊಳ್ಳಲು ನಾವು ಕಾಳಜಿ ವಹಿಸಬೇಕು.

ಆರೋಗ್ಯಕರ ಡಯಟ್ ಮಾಡಿ : ಕಣ್ಣುಗಳಿಗಾಗಿ ಆರೋಗ್ಯಕರ ಪೌಷ್ಠಿಕ ಆಹಾರ ಸೇವಿಸಬೇಕು. ಸೊಪ್ಪು, ಮೊಳಕೆಕಾಳು, ನಟ್ಸ್, ಕಿತ್ತಳೆ, ನಿಂಬೆ ಹಣ್ಣನ್ನು ಹೆಚ್ಚಾಗಿ ಸೇವಿಸಬೇಕು.

ಧೂಮಪಾನ ಬಿಟ್ಟುಬಿಡಿ : ಆರೋಗ್ಯಕರ ಕಣ್ಣುಗಳು ನಿಮ್ಮದಾಗಬೇಕೆಂದರೆ ಧೂಮಪಾನ ತ್ಯಜಿಸಿ. ಧೂಮಪಾನದ ನಿಮ್ಮ ಅಕ್ಷಿಪಟಲ ತೊಂದರೆಗೊಳಗಾಗುತ್ತದೆ, ಕಣ್ಣಿನ ದೃಷ್ಟಿಯ ನರಕ್ಕೂ ಅಪಾಯ ಖಚಿತ.

ಸರಿಯಾಗಿ ನಿದ್ರಿಸಿ : ನಿದ್ರೆಯ ಕೊರತೆಯಿಂದ ನಿಮ್ಮ ಕಣ್ಣುಗಳಿಗೆ ಆಯಾಸವಾಗಬಹುದು. ಇದ್ರಿಂದ ತುರಿಕೆ ಮತ್ತು ಕಣ್ಣುಗಳಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ನಿಮ್ಮ ಕಣ್ಣುಗಳಿಗೆ ಅಗತ್ಯ ಪೋಷಕಾಂಶಗಳ ಜೊತೆಗೆ ಸರಿಯಾದ ನಿದ್ದೆ ಕೂಡ ಅಗತ್ಯ.

ನಿಯಮಿತವಾಗಿ ಕಣ್ಣುಗಳನ್ನು ಪರೀಕ್ಷಿಸಿ : ನಿಮ್ಮ ದೃಷ್ಟಿ ಸ್ಟ್ರಾಂಗ್ ಆಗಿರಬೇಕೆಂದ್ರೆ ಆಗಾಗ ನಿಮ್ಮ ಕಣ್ಣುಗಳನ್ನು ವೈದ್ಯರ ಬಳಿ ಪರೀಕ್ಷಿಸಿಕೊಳ್ಳಿ. ಗ್ಲುಕೋಮಾ, ದೃಷ್ಟಿಹೀನತೆ, ಅಕ್ಷಿಪಟಲದ ಸಮಸ್ಯೆಯಿದ್ದರೆ ಬೇಗನೆ ಪತ್ತೆ ಮಾಡಬಹುದು. ಪ್ರತಿಯೊಬ್ಬರೂ ಬಿಸಿಲಿಗೆ ಹೋಗುವ ಸಂದರ್ಭದಲ್ಲಿ ಸನ್ ಗ್ಲಾಸ್ ಅಥವಾ ಸ್ಪೋರ್ಟ್ಸ್ ಗಾಗಲ್ ಗಳನ್ನು ಧರಿಸಬೇಕು. ನೇರವಾಗಿ ಸೂರ್ಯನ ಬೆಳಕನ್ನು ನೋಡಬಾರದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದ ಆರ್ಥಿಕತೆ ಬಗ್ಗೆ ಮಾಜಿ ಗೌರ್ನರ್ ರಘುರಾಮ್ ರಾಜನ್ ಅವರು ಮಾತನಾಡಿದೇನ್ನು?

Mon Jan 24 , 2022
ಭಾರತದ ಆರ್ಥಿಕತೆ ಬಗ್ಗೆ ಮಾಜಿ ಗೌರ್ನರ್ ರಘುರಾಮ್ ರಾಜನ್ ಅವರು ಮಾತನಾಡಿದ್ದು ದೇಶದ ಆರ್ಥಿಕತೆಯಲ್ಲಿ ಕೆಲವು ಆಶಾದಾಯಕ ಅಂಶಗಳಿದ್ದು, ಅಂತೆಯೇ ಕೆಲವು ಸವಾಲುಗಳೂ ಇವೆ ಸರ್ಕಾರ ವೆಚ್ಚಗಳೆಡೆಗೆ ಹೆಚ್ಚು ಜಾಗರೂಕವಾಗಿರಬೇಕು ಎಂದು ಹೇಳಿದ್ದಾರೆ. ಆರ್ಥಿಕ ಕ್ಷೇತ್ರದಲ್ಲಿ ತಮ್ಮ ಸ್ಪಷ್ಟ ದೃಷ್ಟಿಕೋನಗಳಿಂದಲೇ ಖ್ಯಾತಿ ಪಡೆದಿರುವ ರಘುರಾಮ್ ರಾಜನ್, ಕೊರೋನಾ ಪ್ಯಾಂಡಮಿಕ್ ನಿಂದ ಹೊಡೆತ ತಿಂದಿರುವ ಆರ್ಥಿಕತೆ ಕೆ-ರೂಪದ ಚೇತರಿಕೆಯನ್ನು ತಡೆಯುವುದಕ್ಕೆ ಹೆಚ್ಚಿನದ್ದನ್ನು ಮಾಡಬೇಕಿದೆ ಎಂದು ಪಿಟಿಐ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. […]

Advertisement

Wordpress Social Share Plugin powered by Ultimatelysocial