ಹಿಜಾಬ್​ ವಿವಾದದ ತುರ್ತು ವಿಚಾರಣೆಗೆ ʼಸುಪ್ರೀಂʼ ನಿರಾಕರಣೆ

ಶಾಲಾ – ಕಾಲೇಜುಗಳಲ್ಲಿ ಹಿಜಾಬ್​ ಧರಿಸುವಂತಿಲ್ಲ ಎಂಬ ರಾಜ್ಯ ಹೈಕೋರ್ಟ್ ಆದೇಶದ ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಹೋಳಿ ಹಬ್ಬದ ರಜೆಯ ಬಳಿಕ ಈ ಮೇಲ್ಮನವಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸುಪ್ರೀಂ ಹೇಳಿದೆ.

ರಾಜ್ಯದಲ್ಲಿ ಭಾರೀ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದ ಹಿಜಾಬ್​ ಪ್ರಕರಣದ ವಿಚಾರಣೆ ನಡೆಸಿದ್ದ ರಾಜ್ಯ ಹೈಕೋರ್ಟ್ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿತ್ತು.

ಇದಾದ ಬಳಿಕ ಸುಪ್ರಿಂ ಮೆಟ್ಟಿಲೇರಿದ್ದ ಅರ್ಜಿದಾರರು ತುರ್ತು ವಿಚಾರಣೆ ನಡೆಸುವಂತೆ ಕೋರಿದ್ದರು. ಸೋಮವಾರವೇ ತುರ್ತು ವಿಚಾರಣೆ ನಡೆಯಬೇಕು ಎಂಬ ಮನವಿಯನ್ನು ಸಿಜಿಐ ಎನ್​.ವಿ. ರಮಣ ತಿರಸ್ಕರಿಸಿದ್ದಾರೆ.

ಈ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸುವ ಅಗತ್ಯವಾದರೂ ಏನಿದೆ..? ನಾಳೆಯಿಂದ ಹೋಳಿ ರಜೆ ಆರಂಭವಾಗಲಿದೆ ಎಂದು ಸಿಜೆಐ ಎನ್​.ವಿ. ರಮಣ ಹೇಳಿದ್ದಾರೆ ಎನ್ನಲಾಗಿದೆ. ಹೋಳಿ ಹಬ್ಬದ ಬಳಿಕ ಸುಪ್ರಿಂ ಕೋರ್ಟ್ ಹಿಜಾಬ್​ ವಿವಾದದ ಮೇಲ್ಮನವಿಯನ್ನು ಕೈಗೆತ್ತಿಕೊಳ್ಳಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಲ್ಮಾನ್ ಖಾನ್ ನಿಮಗೆ ಇಷ್ಟವಿಲ್ಲದಿದ್ದರೆ ಅವರ ಮುಖದ ಮೇಲೆ ನೋಡುತ್ತೀರಿ ಎಂದು ರಾಧೆ ಶ್ಯಾಮ್ ತಾರೆ ಪೂಜಾ ಹೆಗ್ಡೆ!

Wed Mar 16 , 2022
ಸಲ್ಮಾನ್ ಖಾನ್ ಮತ್ತು ಪೂಜಾ ಹೆಡ್ಗೆ ಅಭಿನಯದ ಕಭಿ ಈದ್ ಕಭಿ ದೀಪಾವಳಿ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಘೋಷಣೆಯಾದಾಗಿನಿಂದಲೂ ಪ್ರೇಕ್ಷಕರು ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಕಳೆದ ವಾರ, ನಿರ್ಮಾಪಕರು ಅಂತಿಮವಾಗಿ ಫರ್ಹಾದ್ ಸಾಮ್ಜಿ ನಿರ್ದೇಶನದ ಸಾಹಸವನ್ನು ಡಿಸೆಂಬರ್ 30, 2022 ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದರು. ಈ ಪ್ರಕಟಣೆಯು ಪ್ರೇಕ್ಷಕರ ಆಸಕ್ತಿಯನ್ನು ಕೆರಳಿಸಿದೆ ಮತ್ತು ಪೂಜಾ ಕೂಡ ಉತ್ಸುಕರಾಗಿದ್ದಾರೆ. ನಟಿ ಸಲ್ಮಾನ್ ಖಾನ್ ಅವರ ಪ್ರೇಮಕತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ […]

Advertisement

Wordpress Social Share Plugin powered by Ultimatelysocial