ಹಿಂದೂ ಸಂಘಟನೆ ಕಾರ್ಯಕರ್ತನ ಕೊಲೆಗೆ ಪ್ರತೀಕಾರ; ಸೇಡಿಗಾಗಿ ಹಾಡಹಗಲೇ ಕೊಚ್ಚಿ ಕೊಂದರು..

ಮಂಗಳೂರು: ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತನ ಕೊಲೆಗೆ ಪ್ರತೀಕಾರವಾಗಿ ಇಂದು ಪ್ರಮುಖ ಆರೋಪಿಯೊಬ್ಬನನ್ನು ಹಾಡಹಗಲೇ ಕೊಚ್ಚಿ ಕೊಲೆ ಮಾಡಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರ್ಲಂಪಾಡಿ ಎಂಬಲ್ಲಿ ಈ ಕೊಲೆ ನಡೆದಿದೆ.ಪುತ್ತೂರು ತಾಲೂಕು ಅರ್ಯಾಪು ನಿವಾಸಿ ಚರಣ್ (28) ಎಂಬಾತ ಕೊಲೆಗೀಡಾದವ. ಈತ ಹಿಂದೂ ಜಾಗರಣ ವೇದಿಕೆಯ ಕಾರ್ತಿಕ್​ ಮೇರ್ಲ ಎಂಬಾತನನ್ನು ಕೊಲೆಗೈದ ಪ್ರಮುಖ ಆರೋಪಿಯಾಗಿದ್ದ. 2019ರ ಸೆ. 4ರಂದು ಗಣೇಶೋತ್ಸವದ ಪೆಂಡಾಲ್​ನಲ್ಲಿ ಕಾರ್ತಿಕ್​ನನ್ನು ಕೊಲೆ ಮಾಡಲಾಗಿತ್ತು.ಕಾರ್ತಿಕ್ ಕೊಲೆಗೆ ಸಂಬಂಧಿಸಿದಂತೆ ಸಹೋದರರಾದ ಕಿರಣ್, ಚರಣ್ ಹಾಗೂ ಪ್ರಿತೇಶ್ ಎಂಬ ಮತ್ತೊಬ್ಬಾತನನ್ನು ಪೊಲೀಸರು ಬಂಧಿಸಿದ್ದರು. ಚರಣ್ ಹಾಗೂ ಕಿರಣ್ ಎರಡು ವರ್ಷಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದು, ಚರಣ್ ಪೆರ್ಲಂಪಾಡಿಯಲ್ಲಿ ಮೆಡಿಕಲ್ ಶಾಪ್ ಆರಂಭಿಸಲು ಸಜ್ಜಾಗಿದ್ದ.ಭಾನುವಾರ ಅದರ ಶುಭಾರಂಭ ನಡೆಯಲಿದ್ದ ಹಿನ್ನೆಲೆಯಲ್ಲಿ ಶನಿವಾರ ಅಂಗಡಿಗೆ ಬೇಕಾದ ಸಾಮಗ್ರಿಗಳನ್ನು ಜೋಡಿಸುವ ಕಾರ್ಯದಲ್ಲಿ ಚರಣ್ ನಿರತರಾಗಿದ್ದ. ಸಂಜೆ ವೇಳೆಗೆ ಎರಡು ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ತಲ್ವಾರ್‌ನಿಂದ ಚರಣ್ ಮೇಲೆ ದಾಳಿ ಮಾಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದರು ಎಂದು ಪ್ರತ್ಯಕ್ಷದರ್ಶಿಗಳು ವಿಜಯವಾಣಿಗೆ ತಿಳಿಸಿದ್ದಾರೆ. ಕಾರ್ತಿಕ್ ಮೇರ್ಲ ಹತ್ಯೆಗೆ ಪ್ರತೀಕಾರವಾಗಿ ಈ ಕೊಲೆ ನಡೆದಿದೆ ಎನ್ನಲಾಗಿದ್ದು, ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮದುವೆಯಾದ ನಂತರ ಮಹಿಳೆಯರ ದೇಹ, ಬಣ್ಣ, ರೂಪದಲ್ಲಿ ಈ ಬದಲಾವಣೆಗಳು ಬರುತ್ತವೆ ಯಾಕೆ ಗೊತ್ತಾ.?

Sun Jun 5 , 2022
ಮದುವೆಯಾದ ನಂತರ ಎಲ್ಲಾ ಹುಡುಗಿಯರ ಜೀವನದಲ್ಲಿ ಹಲವಾರು ಬದಲಾವಣೆಗಳು ಬರುತ್ತವೆ.ಯಾಕೆಂದರೆ ಮದುವೆಯ ನಂತರ ಹುಡುಗಿಯ ಮನೆ ಬದಲಾಗುತ್ತದೆ. ವಾಸ್ತವವಾಗಿ, ಮದುವೆಯು ಅಂತಹ ಒಂದು ಬಂಧವಾಗಿದೆ, ಇದರಲ್ಲಿ ಹುಡುಗಿ ತನ್ನ ಮನೆಯನ್ನು ತೊರೆದು ಹೊಸ ಕನಸುಗಳೊಂದಿಗೆ ಹೊಸ ಮನೆಗೆ ಪ್ರವೇಶಿಸುತ್ತಾಳೆ.ಮದುವೆಯ ನಂತರ ಹುಡುಗಿಯರ ಜೀವನದಲ್ಲಿ ಯಾವ ರೀತಿಯ ಬದಲಾವಣೆಗಳು ಬರುತ್ತವೆ ಎಂದು ತಿಳಿಯೋಣ ಮಹಿಳೆಯರ ದೇಹದಲ್ಲಿ ಹಾರ್ಮೋನುಗಳು ಹೆಚ್ಚಾಗುತ್ತವೆ: ತಮ್ಮ ಮದುವೆಯ ಬಗ್ಗೆ ಸಂತೋಷವಾಗಿರುವ ಮಹಿಳೆಯರು ತಮ್ಮ ದೇಹದಲ್ಲಿ ಸಂತೋಷದ ಹಾರ್ಮೋನ್‌ಗಳನ್ನು […]

Advertisement

Wordpress Social Share Plugin powered by Ultimatelysocial