ಗೂಗಲ್​​ನಲ್ಲಿ ಈ ವಿಚಾರಗಳನ್ನು ತಪ್ಪಿಯೂ ಹುಡುಕಬೇಡಿ..!

ಗೂಗಲ್​​ನಲ್ಲಿ ಈ ವಿಚಾರಗಳನ್ನು ತಪ್ಪಿಯೂ ಹುಡುಕಬೇಡಿ..!

ಗೂಗಲ್​ ಒಂದು ಜನಪ್ರಿಯ ಸರ್ಚ್​ ಇಂಜಿನ್​ ಆಗಿದೆ. ಬಹುತೇಕ ಎಲ್ಲಾ ಇಂಟರ್ನೆಟ್​ ಬಳಕೆದಾರರು ಗೂಗಲ್​ನ್ನು ಬಳಕೆ ಮಾಡುತ್ತಾರೆ. ಯಾವುದೇ ವಿಚಾರವನ್ನು ತಿಳಿದುಕೊಳ್ಳಬೇಕು ಅಂದರೆ ಜನರು ಗೂಗಲ್ ಮಾಡಿ ನೋಡುತ್ತಾರೆ.

ಗೂಗಲ್​ ಕೂಡ ಜನರ ಪ್ರಶ್ನೆಗಳಿಗೆ ಕೆಲವೇ ಸೆಕೆಂಡ್​ಗಳಲ್ಲಿ ಉತ್ತರ ನೀಡುತ್ತದೆ.

ಆದರೆ ಈ ಗೂಗಲ್​​ನಲ್ಲಿ ನೀವು ಯಾವುದೇ ವಿಚಾರಗಳನ್ನು ಹುಡುಕುವ ಮುನ್ನ ಎಚ್ಚರವಾಗಿ ಇರಬೇಕು. ಏಕೆಂದರೆ ಕೆಲವು ವಿಚಾರಗಳು ನಿಮ್ಮನ್ನು ಜೈಲಿಗೆ ತಳ್ಳುವ ಸಾಧ್ಯತೆ ಕೂಡ ಇದೆ.

ಹಾಗಾದರೆ ಯಾವೆಲ್ಲ ವಿಚಾರಗಳನ್ನು ನೀವು ಗೂಗಲ್​ನಲ್ಲಿ ಸರ್ಚ್​ ಮಾಡಿದರೆ ಕಾನೂನಿನ ಉಲ್ಲಂಘನೆಯಾಗುತ್ತದೆ ಅನ್ನೋದನ್ನು ತಿಳಿದುಕೊಳ್ಳೋಣ:

ಚಲನಚಿತ್ರ ಪೈರಸಿ:

ಬಿಡುಗಡೆಗೂ ಮುನ್ನ ಪೈರಸಿ ಕಾಟಕ್ಕೆ ಒಳಗಾಗುವ ಸಿನಿಮಾಗಳು ಅಪರಾಧದ ಅಡಿಯಲ್ಲಿ ಬರುತ್ತದೆ. ಹೀಗಾಗಿ ಪೈರೇಟೆಡ್​ ಸಿನಿಮಾಗಳನ್ನು ಡೌನ್​ಲೋಡ್​ ಮಾಡಿ ವೀಕ್ಷಿಸುವುದೂ ಸಹ ಅಪರಾಧ ಎಂದು ಪರಿಗಣಿಸಲಾಗಿದೆ.

ಈ ಕಾನೂನನ್ನು ಉಲ್ಲಂಘನೆ ಮಾಡಿದರೆ 3 ವರ್ಷಗಳ ಜೈಲು ಶಿಕ್ಷೆ ಅಥವಾ 10 ಲಕ್ಷ ರೂಪಾಯಿವರೆಗೆ ದಂಡ ವಿಧಿಕೆಯಾಗಲಿದೆ.

ಬಾಂಬ್​ ತಯಾರಿಸುವುದು ಹೇಗೆ..?

ತಮಾಷೆಗೆಂದು ನೀವು ಗೂಗಲ್​ನಲ್ಲಿ ಬಾಂಬ್​ ತಯಾರಿಸುವುದು ಹೇಗೆ ಎಂದು ಸರ್ಚ್​ ಮಾಡಿದರೂ ಸಹ ನಿಮಗೆ ಜೈಲೂಟ ಫಿಕ್ಸ್​ ಆಗಬಹುದು.

ಈ ವಿಚಾರಗಳನ್ನು ಸೈಬರ್​ ಸೆಲ್​ ಮೇಲ್ವಿಚಾರಣೆ ಮಾಡುತ್ತಿರುತ್ತದೆ. ನೀವು ಈ ರೀತಿಯಾಗಿ ಗೂಗಲ್​ ಸರ್ಚ್​ ಮಾಡಿದಲ್ಲಿ ತಕ್ಷಣವೇ ನಿಮ್ಮ ವಿವರಗಳನ್ನು ಭದ್ರತಾ ಏಜೆನ್ಸಿಗೆ ರವಾನೆ ಮಾಡಲಾಗುತ್ತದೆ.

ಗರ್ಭಪಾತ ಮಾಡುವುದು ಹೇಗೆ..?

ಹೌದು..! ಗರ್ಭಪಾತ ಮಾಡುವ ಮಾರ್ಗವನ್ನು ಹುಡುಕಲು ನೀವು ಗೂಗಲ್​ ಮೊರೆ ಹೋಗಿದ್ದರೆ ಖಂಡಿತವಾಗಿಯೂ ತೊಂದರೆಗೆ ಸಿಲುಕಲಿದ್ದೀರಿ. ಭಾರತೀಯ ಕಾನೂನಿನ ಪ್ರಕಾರ ವೈದ್ಯರನ್ನು ಸಂಪರ್ಕಿಸದೇ ಗರ್ಭಪಾತ ಮಾಡುವುದು ಕಾನೂನಿನ ಉಲ್ಲಂಘನೆಯಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಸವರಾಜ ಬೊಮ್ಮಾಯಿ ಒಬ್ಬ ಕೋಮುವಾದಿ ಸಿಎಂ:ನಟ ಚೇತನ್ ಕಿಡಿ

Sat Dec 25 , 2021
ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಸರ್ಕಾರದ ನಿರ್ಧಾರಕ್ಕೆ ವಿರೋಧಿಸುವ ಸ್ವಾಮೀಜಿಗಳು ಬಸವತತ್ವದವರು ಅಲ್ಲ. ಕೆಲ ಸ್ವಾಮೀಜಿಗಳು ಸಸ್ಯಹಾರಿಗಳಿಗೆ ಪ್ರತ್ಯೇಕ ಶಾಲೆಗಳನ್ನ ಕೇಳುತ್ತೀರುವುದು ಬೇಸರದ ವಿಚಾರವಾಗಿದೆ ಎಂದು ನಟ ಚೇತನ್ ಹೇಳಿದ್ದಾರೆ.ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊಟ್ಟೆ ತಿನ್ನುವವರ ಶಾಲೆ, ಮಟನ್ ತಿನ್ನುವರ ಶಾಲೆ ಹೀಗೆ ಪ್ರತ್ಯೇಕ ಶಾಲೆಗಳಾಗಿ ಭಾಗ ಮಾಡುವುದೇ ಸ್ವಾಮೀಜಿಗಳ ಉದ್ದೇಶವೇ?. ಅನುಭವ ಮಂಟಪದಲ್ಲಿ ಸಹ ಮಾಂಸಾಹಾರಿಗಳು ಇದ್ದರು, ಇದನ್ನು ಸ್ವಾಮೀಜಿಗಳು ಅರಿತುಕೊಳ್ಳಬೇಕು. ಇಡಿ ರಾಜ್ಯವೇ ದೇಶಕ್ಕೆ ಮಾದರಿ ಆಗಬೇಕು […]

Advertisement

Wordpress Social Share Plugin powered by Ultimatelysocial