ಹೋಟೆಲ್ ನಲ್ಲಿ ತಿಂಡಿಗೆ ಕುಳಿತಲ್ಲೇ ಕುಸಿದು ಬಿದ್ದು ವಿದ್ಯಾರ್ಥಿ ಸಾವು

ಮೈಸೂರು: ಉಪಹಾರಕ್ಕೆಂದು ಹೋಟೆಲ್ ಗೆ ತೆರಳಿದ ವಿದ್ಯಾರ್ಥಿ ಕುಳಿತಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಹುಣಸೂರಿನಲ್ಲಿ ನಡೆದಿದೆ.ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನ ನಾಲ್ಕನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ, ನಂಜಾಪುರ ಗ್ರಾಮದ ನಿವಾಸಿ ನಿತಿನ್ ಕುಮಾರ್(25) ಮೃತಪಟ್ಟ ದುರ್ದೈವಿಯಾಗಿದ್ದು, ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.ಈತ ಹುಣಸೂರು ಪಟ್ಟಣದ ಟಿಫಾನಿಸ್ ಹೋಂ ಎಂಬ ಹೋಟೆಲ್ ಗೆ ತಿಂಡಿ ತಿನ್ನಲು ತೆರಳಿದ್ದು, ಹೋಟೆಲ್ ನಲ್ಲಿ ಕುಳಿತ ವೇಳೆ ಸಫ್ಲೈಯರ್ ಬಳಿಗೆ ಬಂದಿದ್ದು, ಆತನೊಂದಿಗೆ ತನಗೆ ಬೇಕಾದ ತಿಂಡಿಯನ್ನು ಆರ್ಡರ್ ಮಾಡಿದ್ದಾನೆ.ಆದರೆ ಸಫ್ಲೈಯರ್ ತಿಂಡಿ ತಂದು ಕೊಡುವ ವೇಳೆಗೆ ಆತ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಇದು ಹೋಟೆಲ್ ನಲ್ಲಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೋಲಾರ: ಮಾಲೂರು ತಾಲೂಕಿನ ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇಗುಲ!

Wed Feb 9 , 2022
ಕೋಲಾರ: ಮಾಲೂರು  ತಾಲೂಕಿನ ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇಗುಲ  ‘ಚಿಕ್ಕ ತಿರುಪತಿ’ಯೆಂದು  ಹೆಸರುವಾಸಿ. ಆಂಧ್ರದ ತಿರುಪತಿ ದೇಗುಲಕ್ಕೆ ಹೋಗಲಾರದ ಸಾವಿರಾರು ಭಕ್ತರು  ನಿತ್ಯ ಇಲ್ಲಿಗೆ ಭೇಟಿ ನೀಡುತ್ತಾರೆ ಜೊತೆಗೆ ಆಂಧ್ರ, ತಮಿಳುನಾಡು, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆಯಿಂದ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ವಾರಾಂತ್ಯದಲ್ಲಿ ಇಲ್ಲಿಗೆ ಬರೋ ಭಕ್ತರು ತಮ್ಮ ತಲೆ ಕೂದಲ ಹರಕೆಯನ್ನು ದೇವರಿಗೆ ಸಮರ್ಪಣೆ ಮಾಡುವುದುಂಟು. ದೇವರ ಹರಕೆ ತೀರಿಸುವ ಭಕ್ತರು ಸ್ನಾನದ  ಬಿಸಿ ನೀರಿಗಾಗಿ  ಪರದಾಡುವಂತಾಗಿದೆ. […]

Advertisement

Wordpress Social Share Plugin powered by Ultimatelysocial