ಟೋಲ್‌ಗಳಿಗೆ ನೀವೆಷ್ಟು ಪಾವತಿಸಬೇಕು?

 

 

ಬೆಂಗಳೂರು, ಫೆಬ್ರುವರಿ 11: ಬಹು ನಿರೀಕ್ಷಿತ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕೊನೆಯ ಹಂತದ ಕಾಮಗಾರಿ ನಡೆಯುತ್ತಿದ್ದು, ಮುಂದಿನ ತಿಂಗಳು ಸಾರ್ವಜನಿಕರಿಗೆ ಮುಕ್ತವಾಗುವ ಸಾಧ್ಯತೆ ಇದೆ. ಪ್ರಾರಂಭದ ಮೊದಲು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI), ರಸ್ತೆಯ ಮೊದಲ ಸ್ಟ್ರೆಚ್‌ನಲ್ಲಿ ಟೋಲ್‌ ದರಗಳನ್ನು ಅಂತಿಮಗೊಳಿಸಿದೆ ಎಂದು ವರದಿಯಾಗಿದೆ.

ಬೆಂಗಳೂರಿನಿಂದ ನಿಡಘಟ್ಟವರೆಗಿನ 56-ಕಿಮೀ ಉದ್ದದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಮೊದಲ ಪ್ಯಾಕೇಜ್ ಅನ್ನು ಬಳಸುವ ವಾಹನಗಳ ಟೋಲ್ ದರಗಳನ್ನು NHAI ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಇದು ಒಟ್ಟು ಎಕ್ಸ್‌ಪ್ರೆಸ್‌ವೇಯ 47 ಪ್ರತಿಶತವನ್ನು ಒಳಗೊಂಡಿದೆ.

ವಿವಿಧ ವಾಹನಗಳಿಗೆ ವಿವಿಧ ಟೋಲ್‌ ದರ

ಕಾರುಗಳು ಮತ್ತು ಇತರ ಲಘು ಮೋಟಾರು ವಾಹನಗಳು ಒಂದು ಮಾರ್ಗಕ್ಕೆ ರೂ 135 ಪಾವತಿಸಬೇಕಾಗುತ್ತದೆ. ಬಸ್‌ಗಳು 460 ರೂ ಮತ್ತು ಭಾರೀ ಮೋಟಾರು ವಾಹನಗಳು 750-900 ರೂಗಳ ನಡುವೆ ಪಾವತಿಸಬೇಕಾಗಬಹುದು ಎಂದು NHAI ಅಧಿಕಾರಿಗಳು ತಿಳಿಸಿದ್ದಾರೆ. ಉನ್ನತ ಅಧಿಕಾರಿಗಳಿಂದ ಅನುಮೋದನೆ ಪಡೆದು ಉದ್ಘಾಟನೆಗೂ ಮುನ್ನ ಈ ಬಗ್ಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ವಾಹನ ಸವಾರರಿಗೆ ಪಾಸ್‌ ಸೌಲಭ್ಯ

ವಾಹನ ಸವಾರರಿಗೆ ಹೆದ್ದಾರಿ ಪ್ರಾಧಿಕಾರವು ಪಾಸ್‌ಗಳನ್ನು ನೀಡಲಿದೆ. ಇದನ್ನು ಒಂದು ತಿಂಗಳಲ್ಲಿ 50 ಪ್ರಯಾಣಗಳಿಗೆ ಬಳಸಬಹುದು ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಟೋಲ್ ಸಂಗ್ರಹಕ್ಕಾಗಿ ಏಜೆನ್ಸಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ತೊಡಗಿದ್ದಾರೆ. ಎರಡು ಟೋಲ್ ಪ್ಲಾಜಾಗಳು ಕೆ ಶೆಟ್ಟಿಹಳ್ಳಿ ಬಳಿಯ ಗಾಣಗೂರು ಮತ್ತು ಇನ್ನೊಂದು ಕುಂಬಳಗೋಡು ಬಳಿ ಇರುತ್ತವೆ.

61 ಕಿಮೀ ಟೋಲ್ ಶುಲ್ಕ ಅಂತಿಮಗೊಳಿಸಲಾಗಿಲ್ಲ

ನಿಡಘಟ್ಟದಿಂದ ಮೈಸೂರುವರೆಗಿನ ಎರಡನೇ 61 ಕಿಮೀ ಟೋಲ್ ಶುಲ್ಕವನ್ನು ಇಲ್ಲಿಯವರೆಗೆ ಅಂತಿಮಗೊಳಿಸಲಾಗಿಲ್ಲ. ಪ್ರತಿ ಕಿ.ಮೀ.ಗೆ ಸರಾಸರಿ 3 ರಿಂದ 4 ರೂ. ಎಂದು ಹೇಳಿರುವ ರಾಜ್ಯ ಕಾಂಗ್ರೆಸ್ ನಾಯಕರು ಶುಕ್ರವಾರದಂದು ಒಟ್ಟು ಟೋಲ್‌ಗೆ ಕೇವಲ 800 ರೂ ಆಗುತ್ತದೆ ಎಂದು ಟೀಕಿಸಿದ್ದಾರೆ.

9000 ಕೋಟಿ ರೂ.ಗಳ ಯೋಜನೆ

9000 ಕೋಟಿ ರೂ.ಗಳ ಯೋಜನೆಯು ಕರ್ನಾಟಕದ ಎರಡು ಪ್ರಮುಖ ನಗರಗಳ ನಡುವಿನ 117 ಕಿಲೋಮೀಟರ್‌ಗಳ ಪ್ರಯಾಣದ ಸಮಯವನ್ನು 3 ಗಂಟೆಗಳಿಂದ 90 ನಿಮಿಷಗಳಿಗಿಂತ ಕಡಿಮೆಗೊಳಿಸುತ್ತದೆ. ಹೆದ್ದಾರಿಯನ್ನು ಆರು ಪಥದ ವಿಸ್ತರಣೆಯಾಗಿ ನಿರ್ಮಿಸಲಾಗಿದೆ. ಜೊತೆಗೆ ಎಕ್ಸ್‌ಪ್ರೆಸ್‌ವೇಯ ಎರಡೂ ಬದಿಗಳಲ್ಲಿ ಎರಡು ಪಥದ ಸರ್ವಿಸ್‌ ರಸ್ತೆಗಳನ್ನು ನಿರ್ಮಿಸಲಾಗಿದೆ. ಇದನ್ನು 10-ಲೇನ್ ಕಾರಿಡಾರ್ ಮಾಡಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಕೆಲಸ ಕೊಡಿ ಇಲ್ಲವೇ ದಯಾಮರಣ ಅವಕಾಶ ನೀಡಿ ಅಂತಾ ಮೊಬೈಲ್ ಟವರ್ ಏರಿದ ಜಲಮಂಡಳಿ ಗುತ್ತಿಗೆ ನೌಕರ..!

Sat Feb 11 , 2023
ಧಾರವಾಡ: ತಮ್ಮನ್ನು ಮತ್ತೆ ಜಲಮಂಡಳಿ ಕೆಲಸಕ್ಕೆ ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿ ನೌಕರರು ನಡೆಸುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ಇಂದು ಗುತ್ತಿಗೆ ಕಾರ್ಮಿಕನೊಬ್ಬ ಮೊಬೈಲ್ ಟವರ್ ಏರಿ ಪ್ರತಿಭಟನೆ ನಡೆಸಿದ್ದಾನೆ. ಜಲಮಂಡಳಿ ಗುತ್ತಿಗೆ ನೌಕರ ಮಲ್ಲಿಕಾರ್ಜುನ ತಳವಾರ ಎಂಬಾತ ಏಕಾಏಕಿ ದಾರವಾಡದ ಜುಬಿಲಿ ಸರ್ಕಲ್ ಬಳಿಯಿರುವ ಮೊಬೈಲ್ ಟವರ್ ಏರಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮೊದಲು ತಮ್ಮ ಬಾಕಿ ವೇತನ, ಮರಳಿ ಕೆಲಸಕ್ಕೆ ಸೇರಿದಂತೆ […]

Advertisement

Wordpress Social Share Plugin powered by Ultimatelysocial