ಬಿಜೆಪಿ ಭ್ರಷ್ಟಾಚಾರ ಹಾಗೂ ಬಿ ರಿಪೋರ್ಟ್ ಸರ್ಕಾರ ಎಂಬ ಡಿ.ಕೆ.ಶಿವಕುಮಾರ ಹೇಳಿಕೆ ವಿಚಾರ
ಈಗ ಚುನಾವಣಾ ಹತ್ತಿರ ಬರುತ್ತಿದ್ದಂತೆಯೇ ಕಾಂಗ್ರೆಸ್ ನವರದ್ದು ಈ ರೀತಿ ಮಾಡುತ್ತಿದ್ದಾರೆ
ಕಾಂಗ್ರೆಸ್ ಪಕ್ಷ ಐಸಿಯುನಲ್ಲಿರೋದ್ರಿಂದ ಕೀಳು ಮಟ್ಟದ ಪ್ರಚಾರಕ್ಕೆ ಮುಂದಾಗಿದ್ದಾರೆ
ಹೀಗಾಗಿ ಅಲ್ಪಸ್ವಲ್ಪ ಜೀವ ಉಳಿಸಿಕೊಳ್ಳೋ ಸಲುವಾಗಿ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ
ಭ್ರಷ್ಟಾಚಾರದ ಬಗ್ಗೆ ಅವರು ತಾರ್ಕಿತ ಅಂತ್ಯ ಕಾಣಿಸಲಿ
ಇಷ್ಟೆಲ್ಲ ಮಾತನಾಡುವವರು ಅಧಿವೇಶನದಲ್ಲಿ ಯಾಕೆ ಈ ಬಗ್ಗೆ ಮಾತನಾಡಲಿಲ್ಲ
ನನ್ನನ್ನ ನೋಡಿದ್ರೆ ಬಿಜೆಪಿ ಹಾಗೂ ಮೋದಿಗೆ ಭಯ ಎಂಬ ಸಿದ್ಧರಾಮಯ್ಯ ಹೇಳಿಕೆ ವಿಚಾರ
ಸಿದ್ಧರಾಮಯ್ಯ ಅವರನ್ನ ಕಂಡರೆ ಒಬ್ಬ ಚಿಕ್ಕ ಬಾಲಕನೂ ಹೆದರುವುದಿಲ್ಲ
ಅವರನ್ನ ಕಂಡರೆ ಮೋದಿ ಹಾಗೂ ಬಿಜೆಪಿಯವರು ಹೆದರಲು ಹೇಗೆ ಸಾಧ್ಯ
ಭ್ರಷ್ಟಾಚಾರದ ಬಗ್ಗೆ ಮಾತನಾಡುವವರು ಒಂದೂ ಪ್ರಕರಣದ ಬಗ್ಗೆಯೂ ತಾರ್ಕಿಕ ಅಂತ್ಯಕ್ಕೆ ಮುಂದಾಗಲಿಲ್ಲ
ದೇಶವನ್ನ ಒಗ್ಗೂಡಿಸುವ ಕೆಲಸವನ್ನ ಆರ್ ಎಸ್ ಎಸ್ ಮಾಡುತ್ತಿದೆ
ಇಂತಹ ಆರ್ ಎಸ್ ಎಸ್ ಬಗ್ಗೆ ಮಾತನಾಡಿದ್ರೆ ಸಿದ್ಧರಾಮಯ್ಯ ಅವರ ವ್ಯಕ್ತಿತ್ವ ಇಡಿಮೆಯಾಗುತ್ತೆ
ಆರ್ ಎಸ್ ಎಸ್ ನ ಘನತೆ ಯಾವತ್ತೂ ಕಡಿಮೆಯಾಗಲ್ಲ
ಬಿಜೆಪಿಯಿಂದ ಜಗದೀಶ ಶೆಟ್ಟರ್ ಕಡೆಗಣನೆ ವಿಚಾರ
ನಮ್ಮ ಪಕ್ಷದಲ್ಲಿ ಯಾವತ್ತೂ ನನ್ನನ್ನ ಕಡೆಗಣನೆ ಮಾಡಿಲ್ಲ
ಅಂತಹ ಯಾವುದೇ ಪ್ರಶ್ನೆಯೇ ಉದ್ಭವಿಸಿಲ್ಲ
ಮಹದಾಯಿ ಬಗ್ಗೆ ಗೋವಾ ಸರ್ಕಾರ ವ್ಯರ್ಥ ವಾಗಿ ಮಾತನಾಡುತ್ತಿದೆ
ಹಿಂದೆಯೂ ಕೇಂದ್ರದಲ್ಲಿ , ಗೋವಾ ಹಾಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು
ಆಗ ಆ ಪಕ್ಷದವರಿಗೆ ಯಾವುದೇ ಕೆಲಸ ಮಾಡಲು ಆಗಲಿಲ್ಲ
ಈಗ ಬಿಜೆಪಿ ಸರ್ಕಾರ ಬಂದ ಮೇಲೆ ಒಂದಿಷ್ಟು ಕಾರ್ಯಗಳಾಗಿವೆ
ಬಿಜೆಪಿ ಮಹದಾಯಿ ವಿಚಾರದಲ್ಲಿ ಕೆಲಸಗಳನ್ನ ಮಾಡಿದೆ
ಕಾನೂನು ಪ್ರಕಾರ ಹೋರಾಟ ಮಾಡಿ ನಮ್ಮ ನೀರನ್ನ ನಾವು ಪಡೆದುಕೊಂಡಿದ್ದೇವೆ
ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡೋದು ಖಚಿತ ಇದರಲ್ಲಿ ಯಾವುದೇ ಸಂಶಯ ಇಲ್ಲ
ಕಾರ್ಯಕರ್ತರಲ್ಲಿಯೂ ಸಹ ಈ ಬಗ್ಗೆ ಯಾವುದೇ ಗೊಂದಲ ಇಲ್ಲ.
https://play.google.com/store/apps/details?id=com.speed.newskannada