ಯು.ಪಿ.ಎಸ್.ಸಿಯಲ್ಲಿ ಹುಬ್ಬಳ್ಳಿ ಯುವತಿಯ ಸಾಧನೆ: ಹೆತ್ತವರ‌ ಕನಸನ್ನು ಸಾಕಾರಗೊಳಿಸಿದ ಸಾಧಕಿ…!

ಹುಬ್ಬಳ್ಳಿ: ಆ ಯುವತಿ ತನ್ನ ಕನಸನ್ನು ನನಸಾಗಿಸಿಕೊಳ್ಳುವುದು ಮಾತ್ರವಲ್ಲದೆ ವಾಣಿಜ್ಯನಗರಿ ಕೀರ್ತಿಯನ್ನು ಹೆಚ್ಚಿಸಿದ್ದಾಳೆ. ಆ ಯುವತಿಯ ಸಾಧನೆಗೆ ಕುಟುಂಬ ಮಾತ್ರವಲ್ಲದೆ ಊರಿಗೆ ಊರೇ ಸಂಭ್ರಮದಲ್ಲಿ ಮುಳುಗಿದೆ. ಹಾಗಿದ್ದರೇ ಯಾರು ಆ ಯುವತಿ..? ಅವಳು ಮಾಡಿದ ಸಾಧನೆ ಆದರೂ ಏನು ಅಂತೀರಾ ಈ ಸ್ಟೋರಿ ನೋಡಿ..

ಕೇಂದ್ರೀಯ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ಹುಬ್ಬಳ್ಳಿಯ ದೊಡ್ಡಮನಿ ಕಾಲೋನಿಯ ನಿವಾಸಿ, ನಿವೃತ್ತ ರೈಲ್ವೆ ಗಾರ್ಡ್ ನ ಪುತ್ರಿ ತಹಸೀನಭಾನು ದವಡಿ 923 ಅಂಕ ಪಡೆದು 482 ನೇ ರ್‍ಯಾಂಕ್‌ ಗಳಿಸಿ ಸಾಧನೆ ಮಾಡಿದ್ದಾರೆ. ಹೌದು..ಹುಬ್ಬಳ್ಳಿಯ ಸೌಥ್ ವೆಸ್ಟರ್ನ್ ರೈಲ್ವೆ ಹುಮನ್ ವೇಲಫೇರ್ ಆರ್ಗನೈಸೇಷನ್‌ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ತಹಸೀನಭಾನು, ಪ್ರೌಢ ಶಿಕ್ಷಣವನ್ನು ಫಾತೀಮಾ ಶಾಲೆಯಲ್ಲಿ ಪಡೆದುಕೊಂಡಿದ್ದಾರೆ. ವಿದ್ಯಾನಗರದ ವಿದ್ಯಾನಿಕೇತನದಲ್ಲಿ ಪಿಯುಸಿ ಶಿಕ್ಷಣ, ಧಾರವಾಡದ ಅಗ್ರಿ ಯುನಿವರ್ಸಿಟಿಯಲ್ಲಿ ಪದವಿ ಶಿಕ್ಷಣ ಪಡೆದು, ಬಳಿಕ ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕೆಂಬ ಹಂಬಲದಲ್ಲಿದ್ದಾಗ ಕರ್ನಾಟಕ ಸರ್ಕಾರ ವತಿಯಿಂದ ಯುಪಿಎಸ್‌ಸಿ ಪರೀಕ್ಷೆ ತರಬೇತಿಗೆ ಆಯ್ಕೆಯಾಗಿ ಪ್ರೋತ್ಸಾಹ ಧನದೊಂದಿಗೆ ತರಬೇತಿ ಪಡೆದು ಇಂತಹ ಮಹತ್ವದ ಸಾಧನೆಯನ್ನು ಮಾಡಿದ್ದಾರೆ.  ತಹಶೀನಬಾನು ದವಡಿ(ಯು ಪಿ ಎಸ್ ಸಿ ಯಲ್ಲಿ ಸಾಧನೆ ಮಾಡಿದ ಯುವತಿ)

ಇನ್ನೂ ಪ್ರಥಮ ಬಾರಿಗೆ 2019 ಯುಪಿಎಸ್‌ಸಿ ಪರೀಕ್ಷೆ ಎದುರಿಸಿದ ಅವರು, ಎರಡನೇ ಪ್ರಯತ್ನದಲ್ಲಿ ಉತ್ತಮ ರ್‍ಯಾಂಕ್‌ ನೊಂದಿಗೆ ಯಶಸ್ಸು ಸಾಧಿಸಿದ್ದಾರೆ. 2022 ರ ಲೋಕಸೇವಾ ಆಯೋಗವು ದೇಶಾದ್ಯಂತ 620 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಅದರಲ್ಲಿ 482 ನೇ ರ್‍ಯಾಂಕ್‌ ನೊಂದಿಗೆ ಕರ್ನಾಟಕದಲ್ಲಿ ಆಯ್ಕೆಯಾದವರಲ್ಲಿ ಇವರೂ ಒಬ್ಬರು. ತಹಸೀನಭಾನು ದವಡಿ ಮಿಡಲ್ ಕ್ಲಾಸ್ ಕುಟುಂಬದಲ್ಲಿ ಜನಿಸಿದ್ದು, ಅವರ ತಂದೆ ಖಾದರಭಾಷಾ ವೃತ್ತಿಯಲ್ಲಿ ರೈಲ್ವೆ ಇಲಾಖೆಯಲ್ಲಿ ಗಾರ್ಡ್ ಆಗಿದ್ದರು. ತಾಯಿ ಹಸೀನಾ ಬೇಗಂ ಗೃಹಿಣಿ. ಇಂದು ತಹಸೀನಭಾನು ದವಡಿ ಯುಪಿಎಸ್ ಸಿಯಲ್ಲಿ ಆಯ್ಕೆಯಾಗಿ ಮೊದಲ ಬಾರಿಗೆ ತವರೂರಿಗೆ ಆಗಮಿಸಿದರು. ಈ ವೇಳೆ ಕುಟುಂಬಸ್ಥರಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಪಾಲಕರು ತಮ್ಮ ಮಗಳ ಸಾಧನೆ ಮೆಚ್ಚಿ ಸಿಹಿ ತಿನ್ನಿಸಿ ಸಂಭ್ರಮಿಸಿದರು.  ಖಾದರಬಾಷಾ ದವಡಿ(ಯುವತಿಯ ತಂದೆ) ಹಮ್ಮಿದ್ ಕೊಪ್ಪದ(ಅಂಜುಮನ್ ಸಂಸ್ಥೆ ಅಧ್ಯಕ್ಷ)ಒಟ್ಟಿನಲ್ಲಿ ಕಷ್ಟದ ಸಂದರ್ಭದಲ್ಲಿಯೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ಹೆತ್ತವರೇ ನನಗೆ ಪ್ರೇರಣೆ. ಪ್ರತಿನಿತ್ಯ ಸತತ ಪರೀಕ್ಷಾ ಪೂರ್ವ ತಯಾರಿ ನಡೆಸುತ್ತಿದ್ದೆ. ಕೇವಲ ಓದು ಮಾತ್ರವಲ್ಲ, ಅದರ ಜೊತೆಗೆ ಸಾಮಾಜಿಕ ಜ್ಞಾನ ನನಗೆ ಸಹಕಾರಿಯಾಯಿತು. ಶೈಕ್ಷಣಿಕ ವಿಭಾಗದಲ್ಲಿ ಕೆಲಸ ಮಾಡುವ ಹಂಬಲ ಹೊಂದಿದ್ದೇನೆ ಅಂತ ತಹಸೀನಭಾನು ದವಡಿ ತಿಳಿಸಿದ್ದು, ಇವರ ಸಾಧನೆ ಆಕಾಶದೆತ್ತರಕ್ಕೆ ಬೆಳೆಯಲಿ ಎಂಬುವುದು ಸ್ಪೀಡ್ ನ್ಯೂಸ್ ಆಶಯ…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಾನು ಹುಟ್ಟಿ ಬೆಳೆದ ಊರಿನ ಡಿಜಿಟಲ್ ಗ್ರಂಥಾಲಯಕ್ಕೆ 5ಸಾವಿರ ಪುಸ್ತಕಗಳನ್ನು ಉಚಿತವಾಗಿ ನೀಡಿದ ಎಮ್ ಕಷ್ಣಮೂರ್ತಿ...

Sat Jun 4 , 2022
ಕೊರಟಗೆರೆ :- ತಾಲ್ಲೂಕಿನ ತಾನು ಹುಟ್ಟಿ ಬೆಳೆದ ತನ್ನದೇ ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಹುಲಿಕುಂಟೆ ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯಕ್ಕೆ 5ಸಾವಿರ ಪುಸ್ತಕಗಳನ್ನು ಉಚಿತವಾಗಿ ನೀಡಿದ ಸರ್ಕಾರಿ ಕೆಲಸದಿಂದ ನಿವೃತ್ತಿ ಹೊಂದಿರುವ ಎಮ್. ಕೃಷ್ಣಮೂರ್ತಿ .. ಎಮ್ . ಕೃಷ್ಣಮೂರ್ತಿ ರವರು ಮಾತನಾಡಿ :- ನಾನು ಹುಟ್ಟಿ ಬೆಳೆದ ಈ ಊರಿಗೆ ಏನಾದರೂ ಸಹಾಯ ಮಾಡಬೇಕು ಎಂಬುದೇ ನನ್ನ ಆಶಯ ಅದರಂತೆ ಗ್ರಂಥಾಲಯದಲ್ಲಿ ಓದುವ ಮಕ್ಕಳಿಗೆ ಅನುಕೂಲವಾಗಲಿ ಎಂದು ಸುಮಾರು […]

Advertisement

Wordpress Social Share Plugin powered by Ultimatelysocial