ಹುಡುಗ್ರ ಜೊತೆ ಸುತ್ತಾಡಿದ್ದಕ್ಕೆ ಬೈದ ಅಮ್ಮನನ್ನೇ ಕೊಂದ 17 ವರ್ಷದ ಪಾಪಿ ಮಗಳು..!

ಚೆನ್ನೈ : ಒಳ್ಳೆ ಬುದ್ದಿ ಹೇಳಿದ ಅಮ್ಮನನ್ನೇ 17 ವರ್ಷದ ಮಗಳನ್ನು ಕೊಲೆ ಮಾಡಿದ ಘಟನೆ ತಮಿಳುನಾಡಿನ ತೂತುಕುಡಿಯಲ್ಲಿ ನಡೆದಿದೆ. 17 ವರ್ಷದ ಬಾಲಕಿ ತನ್ನ ಇಬ್ಬರು ಗೆಳೆಯರ ಜೊತೆಗೂಡಿ ಈ ಕೃತ್ಯ ಎಸಗಿದ್ದಾಳೆ ಎಂದು ತಿಳಿದು ಬಂದಿದೆ.

ಬಾಲಕಿ ತನ್ನ ನೆರೆಹೊರೆಯ ಕೆಲವು ಯುವಕರೊಂದಿಗೆ ತಿರುಗಾಡುತ್ತಿದ್ದಳು, ಇದರಿಂದ ಮಗಳಿಗೆ ಅಮ್ಮ ಬುದ್ಧಿ ಹೇಳಿದ್ದಕ್ಕೆ ಆಕೆ ತನ್ನ ತಾಯಿಯ ಮೇಲೆ ಕೋಪಗೊಂಡಿದ್ದಳು.

ಇದೇ ಕಾರಣಕ್ಕೆ ಅಮ್ಮ-ಮಗಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಈ ಕಾರಣಕ್ಕೆ ತನ್ನ ತಾಯಿಯನ್ನೇ ಹತ್ಯೆ ಮಾಡಿದ್ದಾಳೆ.

ಬಾಲಕಿ ತನ್ನ ಏರಿಯಾದ ಕೆಲವು ಹುಡುಗರ ಜೊತೆ ಮಾತನಾಡಿಕೊಂಡು, ಓಡಾಡುತ್ತಾ ಇದ್ದುದಕ್ಕೆ ತಾಯಿ ಮುನಿಯಲಕ್ಷ್ಮಿ ತ್ನ ಮಗಳನ್ನು ಬೈಯುತ್ತಿದ್ದಳು ಹೊಡೆಯುತ್ತಿದ್ದಳು ಎನ್ನಲಾಗಿದೆ. .ಈ ಕಾರಣಕ್ಕೆ ತನ್ನ ಏರಿಯಾದ ಇಬ್ಬರು ಹುಡುಗರ ಸಹಾಯದಿಂದ ಆಕೆ ತನ್ನ ತಾಯಿಯನ್ನು ಕೊಲೆ ಮಾಡಿದ್ದಾಳೆ. ಅಂದಹಾಗೆ ಈ 7 ವರ್ಷದ ಬಾಲಕಿ, ಆಕೆಯ ತಂಗಿ ಮತ್ತು ತಮ್ಮ ಅಪ್ಪನೊಂದಿಗೆ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.ಬಂಧಿತ ಇಬ್ಬರು ಆರೋಪಿಗಳು ಆ ಬಾಲಕಿ ತಮಗೆ ಕರೆ ಮಾಡಿ ಕೊಲೆಗೆ ಸಂಚು ರೂಪಿಸಿದ್ದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಕುಟುಂಬ ಯೋಜನೆಯನ್ನು ಇಸ್ಲಾಂ ವಿರೋಧಿಸುವುದಿಲ್ಲ'

Tue Mar 29 , 2022
ನವದೆಹಲಿ: ‘ಕುಟುಂಬ ಯೋಜನೆಯ ಪರಿಕಲ್ಪನೆಯನ್ನು ಇಸ್ಲಾಂ ಧರ್ಮ ವಿರೋಧಿಸುವುದಿಲ್ಲ’ ಎಂದಿರುವ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌.ವೈ. ಖುರೇಷಿ, ‘ಜನಸಂಖ್ಯೆಯಲ್ಲಿ ಮುಸ್ಲಿಮರು ಹಿಂದೂಗಳನ್ನು ಹಿಂದಿಕ್ಕಬಹುದು ಎಂಬುದು ಕೇವಲ ಪ್ರಚಾರವಷ್ಟೇ’ ಎಂದು ಸೋಮವಾರ ಹೇಳಿದರು.ಇಂಡಿಯಾ ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ ತಮ್ಮ ಪುಸ್ತಕ ‘ದಿ ಪಾಪ್ಯುಲೇಷನ್‌ ಮಿಥ್‌: ಇಸ್ಲಾಂ, ಫ್ಯಾಮಿಲಿ ಪ್ಲಾನಿಂಗ್‌ ಅಂಡ್‌ ಪಾಲಿಟಿಕ್ಸ್‌ ಇನ್‌ ಇಂಡಿಯಾ’ ಕುರಿತ ಚರ್ಚೆಯಲ್ಲಿ ಅವರು ಮಾತನಾಡಿದರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://plಇay.google.com/store/apps/details?id=com.speed.newskannada Please […]

Advertisement

Wordpress Social Share Plugin powered by Ultimatelysocial