ಚೆನ್ನೈ : ಒಳ್ಳೆ ಬುದ್ದಿ ಹೇಳಿದ ಅಮ್ಮನನ್ನೇ 17 ವರ್ಷದ ಮಗಳನ್ನು ಕೊಲೆ ಮಾಡಿದ ಘಟನೆ ತಮಿಳುನಾಡಿನ ತೂತುಕುಡಿಯಲ್ಲಿ ನಡೆದಿದೆ. 17 ವರ್ಷದ ಬಾಲಕಿ ತನ್ನ ಇಬ್ಬರು ಗೆಳೆಯರ ಜೊತೆಗೂಡಿ ಈ ಕೃತ್ಯ ಎಸಗಿದ್ದಾಳೆ ಎಂದು ತಿಳಿದು ಬಂದಿದೆ.
ಬಾಲಕಿ ತನ್ನ ನೆರೆಹೊರೆಯ ಕೆಲವು ಯುವಕರೊಂದಿಗೆ ತಿರುಗಾಡುತ್ತಿದ್ದಳು, ಇದರಿಂದ ಮಗಳಿಗೆ ಅಮ್ಮ ಬುದ್ಧಿ ಹೇಳಿದ್ದಕ್ಕೆ ಆಕೆ ತನ್ನ ತಾಯಿಯ ಮೇಲೆ ಕೋಪಗೊಂಡಿದ್ದಳು.
ಇದೇ ಕಾರಣಕ್ಕೆ ಅಮ್ಮ-ಮಗಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಈ ಕಾರಣಕ್ಕೆ ತನ್ನ ತಾಯಿಯನ್ನೇ ಹತ್ಯೆ ಮಾಡಿದ್ದಾಳೆ.
ಬಾಲಕಿ ತನ್ನ ಏರಿಯಾದ ಕೆಲವು ಹುಡುಗರ ಜೊತೆ ಮಾತನಾಡಿಕೊಂಡು, ಓಡಾಡುತ್ತಾ ಇದ್ದುದಕ್ಕೆ ತಾಯಿ ಮುನಿಯಲಕ್ಷ್ಮಿ ತ್ನ ಮಗಳನ್ನು ಬೈಯುತ್ತಿದ್ದಳು ಹೊಡೆಯುತ್ತಿದ್ದಳು ಎನ್ನಲಾಗಿದೆ. .ಈ ಕಾರಣಕ್ಕೆ ತನ್ನ ಏರಿಯಾದ ಇಬ್ಬರು ಹುಡುಗರ ಸಹಾಯದಿಂದ ಆಕೆ ತನ್ನ ತಾಯಿಯನ್ನು ಕೊಲೆ ಮಾಡಿದ್ದಾಳೆ. ಅಂದಹಾಗೆ ಈ 7 ವರ್ಷದ ಬಾಲಕಿ, ಆಕೆಯ ತಂಗಿ ಮತ್ತು ತಮ್ಮ ಅಪ್ಪನೊಂದಿಗೆ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.ಬಂಧಿತ ಇಬ್ಬರು ಆರೋಪಿಗಳು ಆ ಬಾಲಕಿ ತಮಗೆ ಕರೆ ಮಾಡಿ ಕೊಲೆಗೆ ಸಂಚು ರೂಪಿಸಿದ್ದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada