ವಿ.ಎಸ್.ಉಗ್ರಪ್ಪ ಗಂಡಸೇ ಆಗಿದ್ದರೆ ನನ್ನ ವಿರುದ್ಧ ಮಾಡಿರುವ ವಕ್ಫ್ ಆಸ್ತಿ ಕಬಳಿಕೆ ಆರೋಪ ಸಾಬೀತು ಪಡಿಸಲಿ !

ದಾವಣಗೆರೆ: ವಿ.ಎಸ್.ಉಗ್ರಪ್ಪ ಗಂಡಸೇ ಆಗಿದ್ದರೆ ನನ್ನ ವಿರುದ್ಧ ಮಾಡಿರುವ ವಕ್ಫ್ ಆಸ್ತಿ ಕಬಳಿಕೆ ಆರೋಪ ಸಾಬೀತು ಪಡಿಸಲಿ ಎಂದು ವಿಧಾನ ಪರಿಷತ್ತು ಸದಸ್ಯ ಸಿ.ಎಂ. ಇಬ್ರಾಹಿಂ ನೇರ ಸವಾಲು ಹಾಕಿದ್ದಾರೆ.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಈ ಹಿಂದೇ ಅನ್ವರ್ ಮಾನಪ್ಪಾಡಿ ಅವರ ನೇತೃತ್ವದಲ್ಲಿ ಸಿದ್ಧಪಡಿಸಿರುವ ವರದಿಯನ್ನು ಸಿಬಿಐಗೆ ಕೊಡಲಿ.ಉಗ್ರಪ್ಪನ ಮದುವೆ ಮಾಡಿಸಿದ್ದು ನಾನೇ. ಎಂಎಲ್ ಸಿ ಮಾಡಿದ್ದು ನಾನು. ನಾನು ಕಾರು ಕೂಡಾ ಕೊಟ್ಟಿದ್ದೆ. ಆದರೆ ಅದನ್ನು ಮರೆತಿದ್ದಾರೆ. ಅವರು ವಕೀಲರು, ನಾನು ಅವರ ಕಕ್ಷಿದಾರನಾಗಿದ್ದೆ. ಆದರೆ, ವಕೀಲನಾದ ವ್ಯಕ್ತಿ ಕಕ್ಷಿದಾರನ ಪರ ಇರಬೇಕು. ಅದನ್ನ ಬಿಟ್ಟು ಕಕ್ಷಿದಾರನ ವಿರುದ್ಧವೇ ವಾದ ಮಾಡುವುದು ಎಷ್ಟು ಸರಿ ಎಂದು ವ್ಯಂಗ್ಯವಾಡಿದರು. ಉಗ್ರಪ್ಪ ಡಿ.ಕೆ.ಶಿವಕುಮಾರ್ ಬಗ್ಗೆ ಕೂಡ ಮಾತನಾಡಿದ್ದಾರೆ. ಸಸ್ಪೆಂಡ್ ಮಾಡಿಲ್ಲ. ಆದರೆ, ಮುಸ್ಲಿಂರನ್ನು ಸಸ್ಪೆಂಡ್ ಮಾಡಿದ್ದಾರೆ. ಕಾಂಗ್ರೆಸ್‌ ನಲ್ಲಿ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಅಲ್ಲಿ ಯಾರೂ ಇರಲ್ಲ ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

PKL:ಪಾಟ್ನಾ ಪೈರೇಟ್ಸ್ ಮತ್ತು ದಬಾಂಗ್ ಡೆಲ್ಲಿ 2 ಸ್ಥಾನಗಳನ್ನು ಸೀಲ್ ಮಾಡುವ ಗುರಿ ಹೊಂದಿದೆ;

Sun Feb 13 , 2022
ಸೋಮವಾರ ಇಲ್ಲಿ ನಡೆಯಲಿರುವ ಪ್ರೊ ಕಬಡ್ಡಿ ಲೀಗ್‌ನಲ್ಲಿ ಲೀಗ್‌ನ ನಾಯಕರಾದ ಪಾಟ್ನಾ ಪೈರೇಟ್ಸ್ ಮತ್ತು ಕೆಳ ಸ್ಥಾನದಲ್ಲಿರುವ ತೆಲುಗು ಟೈಟಾನ್ಸ್ ವಿರುದ್ಧ ಸೆಣಸಲಿದೆ. ಸೋಮವಾರ ಇಲ್ಲಿ ನಡೆಯಲಿರುವ ಪ್ರೊ ಕಬಡ್ಡಿ ಲೀಗ್‌ನಲ್ಲಿ ಲೀಗ್‌ನ ನಾಯಕರಾದ ಪಾಟ್ನಾ ಪೈರೇಟ್ಸ್ ಮತ್ತು ಕೆಳ ಸ್ಥಾನದಲ್ಲಿರುವ ತೆಲುಗು ಟೈಟಾನ್ಸ್ ವಿರುದ್ಧ ಸೆಣಸಲಿದೆ. ಟ್ರಿಪಲ್ ಪಂಗಾ ರಾತ್ರಿಯು ವ್ಯತಿರಿಕ್ತ ಪ್ರಚಾರಗಳನ್ನು ಸಹಿಸಿಕೊಂಡಿರುವ ಎರಡು ತಂಡಗಳ ನಡುವಿನ ಘರ್ಷಣೆಯೊಂದಿಗೆ ಪ್ರಾರಂಭವಾಗುತ್ತದೆ. ಪಟ್ನಾ ತಂಡವು ಉತ್ತಮ ದಾಳಿ ಮತ್ತು […]

Advertisement

Wordpress Social Share Plugin powered by Ultimatelysocial