ಮಹದಾಯಿ ವಿಚಾರದಲ್ಲಿ ಬಿಜೆಪಿಯವ್ರು ಉತ್ತರ ಕರ್ನಾಟಕದ ಜನರಿಗೆ ದ್ರೋಹ, ಮೋಸ ಮಾಡುತ್ತಿದ್ದಾರೆ.
ತ್ರಿಬಲ್ ಇಂಜಿನ್ ಸರ್ಕಾರ ಜನರಿಗೆ ನ್ಯಾಯ ಒದಗಿಸಬೇಕು.
ಜನ ನಮಗೆ ಬೆಂಬಲ ನೀಡುತ್ತಾರೆ ಅಂತಾ ತರಾತುರಿಯಲ್ಲಿ ಡೇಟ್ ಇಲ್ಲದೆ ಇರುವ ಕಾಗದ ತೋರಿಸಿದ್ದಾರೆ.
ರಾಜಕೀಯ ಲಾಭಕೊಸ್ಕರ ಸುಳ್ಳು ಹೇಳುತ್ತಿದ್ದಾರೆ.
ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ, ಸುಳ್ಳು ಹೇಳಿ ಚಾಕಲೆಟ್ ಕೊಡುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ ಎರಡನೆ ತಾರೀಕು ನಮ್ಮ ಪ್ರತಿಭಟನೆ, ಜನರ ಧ್ವನಿ ಹೋರಾಟ ನಿಲ್ಲಲ್ಲ.
ನಮ್ಮ ಸರ್ಕಾರ ಮುಂದೆ ಬಂದೇ ಬರುತ್ತೆ.
ಕಳಸಾ- ಬಂಡೂರಿಗೆ ನ್ಯಾಯ ಕೊಟ್ಟೇ ಕೊಡ್ತೀವಿ.
ಸುಳ್ಳು ಪೇಪರ್ ತೋರಿಸಿ ಐವಾಷ್ ಮಾಡುತ್ತಿದ್ದಾರೆ.
ಮಹದಾಯಿ ಕಾಮಗಾರಿ ಪ್ರಾರಂಭಿಸದೆ, ಜನರಿಗೆ ದ್ರೋಹ ಮಾಡುತ್ತಿದ್ದಾರೆ.
ಮೀಸಲಾತಿ ವಿಚಾರ*
ಸರ್ವರಿಗೂ ಸಮಬಾಳು, ಸಮಪಾಲು.
ಜನಸಂಖ್ಯೆ ಆಧಾರದ ಮೇಲೆ ಎಲ್ಲರೂ ತಮ್ಮ ಹಕ್ಕು ಕೇಳ್ತಾರೆ.
ಮೀಸಲಾತಿ ಅಂತಾ ಹೇಳಿ ಬಿಜೆಪಿಯವರು ಚಾಕಲೇಟ್ ಕೊಡುವ ಕೆಲಸ ಮಾಡುತ್ತಿದ್ದಾರೆ.
ಇಂದು ಸಂಜೆ ಸಿದ್ದರಾಮಯ್ಯ, ಮುಖಂಡರ ಜೊತೆ ಚರ್ಚಿಸಿ ನಮ್ಮ ಪಕ್ಷದ ಅಚಲ ನಿರ್ಧಾರ ಪ್ರಕಟಿಸುತ್ತೇವೆ.
ಜಾರಿಯಾಗದ ಮೀಸಲಾತಿ ತಂದು ಕರ್ನಾಟಕವನ್ನು ಲಿಟಿಗೇಷನ್ ರಾಜ್ಯ ಮಾಡುತ್ತಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada