ತಿರುವನಂತಪುರಂ,ಡಿ.29- ತಾಯಿಯ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಸಂಬಂಧಿಯೊಬ್ಬನನ್ನು ಆಕೆಯ ಇಬ್ಬರು ಹೆಣ್ಣು ಮಕ್ಕಳು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಬಾವಿಗೆ ಬಿಸಾಡಿ, ಪೊಲೀಸರಿಗೆ ಶರಣಾಗಿರುವ ಘಟನೆ ಕೇರಳದ ಅಂಬಾಲವಯಲ್ ಪ್ರದೇಶದಲ್ಲಿ ನಡೆದಿದೆ.
ಮುಹಮ್ಮದ್ ಕೊಯ ಕೊಲೆಯಾದ ವ್ಯಕ್ತಿ.
ಮೊಹಮ್ಮದ್ ಕೊಯ ಈ ಇಬ್ಬರು ಹುಡುಗಿಯರ ತಂದೆಯ ಚಿಕ್ಕಮ್ಮನ ಪತಿಯಾಗಿದ್ದು, ಈತ ತನ್ನ ತಾಯಿಯ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದರು. ಮನವಿ ಮಾಡಿದರೂ ಕೇಳದಿದ್ದಾಗ ಕೊಡಲಿಯಿಂದ ಕೊಲೆ ಮಾಡಿ, ದೇಹವನ್ನು ಬಾವಿಗೆ ಬಿಸಾಕಿದ್ದಾಗಿ ಬಾಲಕಿಯರು ಪೊಲೀಸರಿಗೆ ತಿಳಿಸಿದ್ದಾರೆ.
ಕೊಲೆಯಾದ ವ್ಯಕ್ತಿಯ ಕುಟುಂಬ ಮತ್ತು ಬಾಲಕಿಯರ ಕುಟುಂಬ ಒಂದೇ ಮನೆಯಲ್ಲಿದ್ದರೂ ಮನೆ ಇಬ್ಬಾಗವಾಗಿ ಪ್ರತ್ಯೇಕವಾಗಿ ವಾಸುತ್ತಿದ್ದರು.
ಈ ಹುಡುಗಿಯರು ಮೊಹಮ್ಮದ್ನಿಂದ ತುಂಬಾ ಕಿರುಕುಳ ಅನುಭವಿಸಿದ್ದರು. ಇವರ ಕುಟುಂಬ ತುಂಬಾ ದಿನಗಳಿಂದ ತೊಂದರೆ ಅನುಭವಿಸುತ್ತಿತ್ತು. ಹೀಗಾಗಿ ನೊಂದಿದ್ದ ಹುಡುಗಿಯರು ಆತನನ್ನು ಕೊಲೆ ಮಾಡಿದ್ದಾರೆ ಎಂದು ಸ್ಥಳೀಯರು ಹೇಳಿಕೆ ನೀಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: