RRR ಮುಂದೆ ಅಟ್ಯಾಕ್ ಫ್ಲಾಪ್. ಪತ್ರ ಬರೆದ ಜಾನ್ ಅಬ್ರಹಮ್..!!

 

RRR ಮುಂದೆ ಅಟ್ಯಾಕ್ ಫ್ಲಾಪ್. ಪತ್ರ ಬರೆದ ಜಾನ್ ಅಬ್ರಹಮ್..!!

ಬಾಲಿವುಡ್ ನಲ್ಲಿ ಅಟ್ಯಾಕ್ ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾದ ನಂತರ ಜಾನ್ ಅಬ್ರಹಾಂ ಅವರು ಭಾವತಾತ್ಮಕವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು ಧೀರ್ಘವಾದ ಪತ್ರ ಪರೆದಿದ್ದಾರೆ..

ಅಲ್ಲದೇ ನಾನು ಈ ಚಿತ್ರದ ಬಗ್ಗೆ ಹೆಮ್ಮೆಪಡುತ್ತೇನೆ ಎಂದಿದ್ದಾರೆ..

ಸೌತ್ ಸಿನಿಮಾ ಇಂಡಸ್ಟ್ರಿಯ ಮುಂದೆ ಬಾಲಿವುಡ್ ಮಕಾಡೆ ಮಲಗುತ್ತಿದೆ. ಈ ನಡುವೆ The Kashmir Files ನಂತಹ ಸಿನಿಮಾಗಳಿಂದ ಬಾಲಿವುಡ್ ಗೆ ಇನ್ನೂ ಜೀವವಿದೆ.

ಇತ್ತೀಚೆಗೆ ಬಾಲಿವುಡ್ ನಟ ಜಾನ್ ಅಬ್ರಹಮ್ ಅವರ ಅಟ್ಯಾಕ್ ಸಿನಿಮಾ ರಿಲೀಸ್ ಆಗಿದ್ದು ಬಾಕ್ಸ್ ಆಫೀಸ್ ನಲ್ಲಿ ದುಬಾಕ್ ಆಗಿದೆ.. ಅಂದ್ರೆ ಫ್ಲಾಪ್ ಆಗಿದೆ. ಅಂದ್ಹಾಗೆ ಈ ಸಿನಿಮಾ ಏಪ್ರಿಲ್ 1 ಕ್ಕೆ ರಿಲೀಸ್ ಆಗಿದ್ದು ,,, RRR ಹವಾದ ಮುಂದೆ ಮಕಾಡೆ ಮಲಗಿದೆ..

ಸಿನಿಮಾದ ಪ್ರಮೋಷನ್ ವೇಳೆ ಈ ನಟ ಸೌತ್ ಸಿನಿಮಾಗಳಲ್ಲಿ ನಟಿಸುವ ಪ್ರಶ್ನೆಗೆ ಉತ್ತರಿಸುತ್ತಾ ಒಂದ್ ರೀತಿ ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಕೇವಲವಾಗಿ ಮಾತನಾಡಿದಂತೆ ಇತ್ತು.. ಹೀಗಾಗಿ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿದ್ರು..

ನಾನು ಹಿಂದಿಯವನು.. ಬಾಲಿವುಡ್ ಹೀರೋ ನಾನು ಸೌತ್ ಸಿನಿಮಾಗಳಲ್ಲಿ ನಟಿಸಲ್ಲ ಎಂದಿದ್ರು.. ಇದಕ್ಕೆ ನೆಟ್ಟಗರು ಖಾರವಾಗಿಯೇ ಪ್ರತಿಕ್ರಿಯಿಸಿದ್ದರು.. ನಿಮನ್ಮ ಯಾರೂ ಸೌತ್ ಸಿನಿಮಾಗೆ ಬನ್ನಿ ಎಂದು ಕಾಯುತ್ತಾ ಕುಳಿತಿಲ್ಲ ಎಂದು ಕೆಲವರು ಹೇಳಿದ್ರೆ ,, ಕೆಲವರಂತೂ ನೀವ್ಯಾರಂತಾನೆ ಸೌತ್ ಜನರಿಗೆ ಗೊತ್ತಿಲ್ಲ ಎಂದೆಲ್ಲಾ ಟ್ರೋಲ್ ಮಾಡಟಿದ್ದರು..

ಸೌತ್ ಸಿನಿಮಾ ಮುಂದೆಯೇ ಅವರ ಅಟ್ಯಾಕ್ ಫ್ಲಾಪ್ ಆಗಿದ್ದು , ಸದ್ಯಕ್ಕೆ ಸೌತ್ ಸಿನಿಮಾ ಪವರ್ ಮತ್ತೊಮ್ಮೆ ಅವರ ಜೊತೆಗೆ ಬಾಲಿವುಡ್ ಮಂದಿಗೆ ಗೊತ್ತಾಗಿದೆ.. ಬಿಡುಗಡೆಯಾದ ಮೊದಲ ಐದು ದಿನಗಳಲ್ಲಿ ಚಿತ್ರವು ಅಂದಾಜು 12 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಅಂದ್ಹಾಗೆ ಜಾನ್ ಅಬ್ರಹಮ್ ಅವರ ಪತ್ರದಲ್ಲೇನಿದೆ..??

“ಚಿತ್ರಕ್ಕಾಗಿ ನಾವು ಯಾವುದೇ ಮೆಚ್ಚುಗೆಯನ್ನು ಸ್ವೀಕರಿಸಿದ್ದು, ಹೊಸ ಮತ್ತು ವಿಭಿನ್ನವಾದ ನಮ್ಮ ಪ್ರಯತ್ನವನ್ನ ಬೆಂಬಲಿಸಿದ ಪ್ರೇಕ್ಷಕರಿಗೆ ಬಹಳ ಧನ್ಯವಾದಗಳು. ಅಟ್ಯಾಕ್ ನಮ್ಮ ಕಡೆಯಿಂದ ಪ್ರಾಮಾಣಿಕ, ವಿನಮ್ರ ಪ್ರಯೋಗವಾಗಿದ್ದು, ಉದ್ಯಮಕ್ಕೆ ಹೊಸ ನೀಡಲು ಬಯಸಿದ್ದೆವು. ಈ ಸಿನಿಮಾಗೆ 3 ಸಾಂಕ್ರಾಮಿಕ ಅಲೆಗಳಿಂದ ಸವಾಲಾಗಿತ್ತು, ಆದರೆ ನಾವು ಬಯಸಿದ್ದನ್ನು ನಾವು ಪಡೆದುಕೊಂಡಿದ್ದೇವೆ” ಎಂದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ಹಿಜಾಬ್, ಹಲಾಲ್, ಮೈಕ್, ಮಾವು ಬಳಿಕ ಇದೀಗ ಮತ್ತೊಂದು ಧರ್ಮ ಸಂಘರ್ಷ!

Fri Apr 8 , 2022
ಬೆಂಗಳೂರು : ರಾಜ್ಯದಲ್ಲಿ ಹಿಜಾಬ್, ಹಲಾಲ್, ಮೈಕ್, ಮಾವು ಬಳಿಕ ಇದೀಗ ಮತ್ತೊಂದು ಧರ್ಮ ಸಂಘರ್ಷ ಅಭಿಯಾನ ಶುರುವಾಗಿದ್ದು, ತೀರ್ಥಯಾತ್ರೆ ಹೋಗುವಾಗ ಮುಸ್ಲಿಂ ಬಸ್ ಗಳಲ್ಲಿ ಹೋಗದಂತೆ ಹಿಂದೂ ಸಂಘಟನೆಗಳು ಅಭಿಯಾನ ಆರಂಭಿಸಲು ನಿರ್ಧರಿಸಿವೆ. ಮುಸ್ಲಿಮರ ಬಸ್ ಗಳಲ್ಲಿ ಹಿಂದೂಗಳು ತೀರ್ಥಯಾತ್ರೆಗೆ ಹೋಗಬೇಡಿ , ನಮ್ಮ ಧರ್ಮ, ದೇವರನ್ನು ನಂಬದವರ ಬಸ್ ಗಳಲ್ಲಿ ಪ್ರಯಾಣ ಬೇಡ, ಹಿಂದೂಗಳ ಬಸ್ ಗಳಲ್ಲಿ ತೀರ್ಥಯಾತ್ರೆಗೆ ಹೋಗಿ ಎಂದು ಮುಸ್ಲಿಂ ಬಸ್ ಬ್ಯಾನ್ ಗೆ […]

Advertisement

Wordpress Social Share Plugin powered by Ultimatelysocial