‘ಕೆಜಿಎಫ್ ಚಾಪ್ಟರ್ 2’ ಚಿತ್ರವು ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ನೀಡುತ್ತಿದೆ.

ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ನಟಿಸಿರುವ ‘ಕೆಜಿಎಫ್ ಚಾಪ್ಟರ್ 2’ ಚಿತ್ರವು ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ನೀಡುತ್ತಿದೆ. ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಪರದೆಗಳಲ್ಲಿ ತೆರೆಗೆ ಬಂದಿರುವ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾ ಒಂದೊಂದೇ ದಾಖಲೆಗಳನ್ನು ಬದಿಗೆ ಸರಿಸಿ ಮುನ್ನುಗ್ಗುತ್ತಿದೆ.

ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ ಕೆಜಿಎಫ್ ಚಾಪ್ಟರ್ 2 ಚಿತ್ರವು 9.7 ಐಎಂಡಿಬಿ ರೇಟಿಂಗ್ ಪಡೆದುಕೊಂಡಿದೆ. ಚಿತ್ರದಲ್ಲಿ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. 

ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ವಿಜಯ್ ಕಿರಗಂದೂರು ನಿರ್ಮಸಿರುವ ‘ಕೆಜಿಎಫ್ ಚಾಪ್ಟರ್ 2’ ಚಿತ್ರವು ಕೇವಲ ಎರಡು ದಿನದಲ್ಲಿ 300 ಕೋಟಿ ರೂ ಕ್ಲಬ್ ಸೇರಿದೆ ಎಂದು ವರದಿ ತಿಳಿಸಿದೆ. ಐದು ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆ ಕಂಡಿರುವ ಚಿತ್ರವು ಮೊದಲ ದಿನದಲ್ಲಿ 165.37 ಕೋಟಿ ರೂ ಗಳಿಸಿದ್ದರೆ, ಎರಡನೇ ದಿನ 139.25 ಕೋಟಿ ರೂ ಗಳಿಸಿದೆ.

‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಹಿಂದಿ ವರ್ಷನ್ ಬಾಲಿವುಡ್ ನ ಎಲ್ಲಾ ದಾಖಲೆಗಳನ್ನು ಮುರಿದಿತ್ತು. ಹಿಂದಿ ಭಾಷೆಯಲ್ಲಿನ ಮೊದಲ ದಿನದ ದಾಖಲೆ ಮುರಿದಿದ್ದ ಯಶ್ ಸಿನಿಮಾ ಎರಡನೇ ದಿನವೂ ಹಲವಾರು ದಾಖಲೆಗಳನ್ನು ಬರೆದಿದೆ.

‘ಕೆಜಿಎಫ್ ಚಾಪ್ಟರ್ 2’ ಹಿಂದಿ ವರ್ಷನ್ ಕೇವಲ ಎರಡೇ ದಿನದಲ್ಲಿ ನೂರು ಕೋಟಿ ಕ್ಲಬ್ ಸೇರಿದೆ. ಚಿತ್ರವು ಮೊದಲ ದಿನ 53.95 ಕೋಟಿ ರೂ. ಗಳಿಸಿದ್ದರೆ, ಎರಡನೇ ದಿನ 46.79 ಕೋಟಿ ರೂ ಗಳಿಸಿದೆ. ಈ ಮೂಲಕ ಎರಡೇ ದಿನದಲ್ಲಿ ‘ಕೆಜಿಎಫ್ ಚಾಪ್ಟರ್ 2’ ಹಿಂದಿ ವರ್ಷನ್ 100.74 ಕೋಟಿ ರೂ ಗಳಿಸಿದೆ.ಇದೇ ವೇಳೆ ಬಾಹುಬಲಿ 2 ಮತ್ತು ದಂಗಲ್ ಚಿತ್ರಗಳ ದಾಖಲೆಯನ್ನು ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ ಮುರಿದಿದೆ. ಬಾಹುಬಲಿ 2 ಚಿತ್ರದ ಹಿಂದಿ ವರ್ಷನ್ ಎರಡನೇ ದಿನ 40.50 ಕೋಟಿ ರೂ ಗಳಿಸಿದ್ದರೆ, ಅಮೀರ್ ಖಾನ್ ರ ದಂಗಲ್ ಚಿತ್ರವು ಎರಡನೇ ದಿನ 34.82 ಕೋಟಿ ರೂ ಗಳಿಸಿತ್ತು. ಈ ಎಲ್ಲಾ ದಾಖಲೆ ಅಳಿಸಿರುವ ‘ಕೆಜಿಎಫ್ ಚಾಪ್ಟರ್ 2’ ಎರಡನೇ ದಿನದಲ್ಲಿ 46.79 ಕೋಟಿ ರೂ ಗಳಿಸಿಕೊಂಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಈಗ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದರಾಗಿದ್ದಾರೆ.

Sat Apr 16 , 2022
 ರಾಜ್ಯಸಭಾ ಸದಸ್ಯರಾಗಿ ತಾವು ಪಡೆಯುವ ಸಂಬಳವನ್ನು ಬಡ ರೈತರ ಹೆಣ್ಣು ಮಕ್ಕಳಿಗೆ ನೀಡುವುದಾಗಿ ಹರ್ಭಜನ್ ಘೋಷಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಭಜ್ಜಿ, ವೇತನವನ್ನು ರೈತರ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಕಲ್ಯಾಣಕ್ಕಾಗಿ ನೀಡುವುದಾಗಿ ಹೇಳಿದ್ದಾರೆ. ನನ್ನ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ನಾನು ರಾಜಕೀಯಕ್ಕೆ ಸೇರಿದ್ದೇನೆ, ಮತ್ತು ನನ್ನಿಂದ ಸಾಧ್ಯವಿರುವ ಎಲ್ಲಾ ಪ್ರಯತ್ನವನ್ನೂ ಮಾಡುತ್ತೇನೆ ಅಂತ ಭರವಸೆ ಕೊಟ್ಟಿದ್ದಾರೆ. ಹರ್ಭಜನ್ ಸಿಂಗ್, ಪಂಜಾಬ್‌ನಿಂದ ಎಎಪಿಯ ರಾಜ್ಯಸಭಾ ಸದಸ್ಯರಾಗಿ […]

Advertisement

Wordpress Social Share Plugin powered by Ultimatelysocial