ಕಾಗವಾಡ: ಮೊನ್ನೇ ರಾತ್ರಿ ಬಿಜೆಪಿ (BJP) ಹೈ ಕಮಾಂಡ್ ಅಳೆದು ತೂಗಿ ಒಟ್ಟು 189 ಮತಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್ ಮಾಡಿ ಘೋಷಣೆಯನ್ನ ಹೊರಡಿಸಿತ್ತು ಇದಕ್ಕೆ ಸಂಬಂಧಿಸಿದಂತೆ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಶ್ರೀಮಂತ ಪಾಟೀಲ ಅವರು ಪ್ರತಿಕ್ರಿಯಿಸಿದ್ದಾರೆ ನನಗೆ ಟೀಕೆಟ್ ಪೈನಲ್ ಮಾಡಿದ್ದ ಹೈ ಕಮಾಂಡ್ ಹಾಗೂ ಬಿಜೆಪಿ (BJP) ಹಿರಿಯ ವರಿಷ್ಠರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.ನನ್ನ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ಮತಕ್ಷೇತ್ರದಲ್ಲಿ ಎಲ್ಲರೂ ಒಲವು ಸಹ ಬಿಜೆಪಿ (BJP) ಪಕ್ಷದ ಮೇಲೆಯಿದೆ ಎಂದರು.
ಅವರು ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದಲ್ಲಿರುವ ಸ್ವ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಜನರು ನಮಗೆ ಬಂದು ನಿಜಕ್ಕೂ ನೀವು ಊಹಿಸಲಾಗದಷ್ಟು ಅಭಿವೃದ್ಧಿ ಕಾರ್ಯಗಳನ್ನ ಮಾಡಿದ್ದಿರಿ, ಎಂದು ಜನರು ತಮ್ಮ ಅಭಿಪ್ರಾಯವನ್ನು ನಮ್ಮ ಜೋತೆ ಹಂಚಿಕೋಳ್ಳುತ್ತಿದ್ದಾರೆ, ಮತ್ತು ನಿಮ್ಮನ್ನು ಮತ್ತೊಮ್ಮೆ ಗೆಲ್ಲಿಸಿಕೊಂಡು ಬರುತ್ತೇವೆ, ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು. ಮುಂದಿನ ದಿನಮಾನಗಳಲ್ಲಿ ಶಿಕ್ಷಣಕ್ಕೆ ಇನ್ನಷ್ಟು ಹೆಚ್ಚು ಒತ್ತು ನೀಡಿ ಸವಳು- ಜವಳು ಅಭಿವೃದ್ಧಿ ಮಾಡುವುದರ ಜೋತೆಗೆ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲಿದ್ದೆನೆ, ಎಂದು ಶ್ರೀಮಂತ ಪಾಟೀಲ್ ಮಾತನಾಡಿದರು.
https://play.google.com/store/apps/details?id=com.speed.newskannada