ಶ್ರೀ ಕನಕ ಸಮುದಾಯ ಸೇವಾ ಟ್ರಸ್ಟ್ ಲೋಕಾರ್ಪಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಕನಕ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಮಾಜಿ ಸಚಿವರಾದಂತಹ ವರ್ತೂರು ಪ್ರಕಾಶ್ ಹಾಗೂ ಸಮುದಾಯದ ಮುಖಂಡರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಸಾಧಕರಿಗೆ ಸನ್ಮಾನಿಸಿದರು ನಂತರ ಮಾತನಾಡಿದಂತಹ ವರ್ತೂರು ಪ್ರಕಾಶ್ ನಮ್ಮ ಸಮುದಾಯದವರು ಮೊದಲು ನಾವು ಸಂಘಟಿತರಾಗಬೇಕು ಆಗಲೇ ಸಾಮಾಜಿಕವಾಗಿ ಆರ್ಥಿಕವಾಗಿ ನಾವು ಮುಂದುವರಿಯಬಹುದು ಈ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ 17 ಸಾವಿರ ಸಮುದಾಯದ ಮತಗಳಿದ್ದು ಯಾವುದೇ ಪಕ್ಷದ ಗೆಲುವಿಗೆ ನಮ್ಮ ಮತಗಳೇ ನಿರ್ಣಾಯಕ ಮತಗಳಾಗಬೇಕು ಆಗಲೇ ನಾವು ರಾಜಕೀಯವಾಗಿ ಬೆಳೆಯಲು ಸಾಧ್ಯ ಎಂದು ತಿಳಿಸಿದರು ನಮ್ಮ ಸಮುದಾಯದ ಹಲವು ಮುಖಂಡರನ್ನು ಹಲವು ರೀತಿಯಲ್ಲಿ ಕಡೆಗಣಿಸುವಂತಹ ಹುನ್ನಾರಗಳು ನಡೆಯುತ್ತಿವೆ ಆದ್ದರಿಂದ ಸಮುದಾಯದ ಎಲ್ಲರೂ ಸಹ ಸಂಘಟಿತರಾಗಬೇಕು ಮೊದಲು ಎಂದು ನೆರೆದಿದ್ದ ಸಮುದಾಯದ ಎಲ್ಲಾ ಜನಾಂಗದವರಿಗೂ ಕಿವಿಮಾತು ಹೇಳಿದರು.