ಮೇ 20 ರಿಂದ ಚಿತ್ರಮಂದಿರಗಳಲ್ಲಿ “ಕಂಡ್ಹಿಡಿ ನೋಡನ” ಚಿತ್ರ ಬಿಡುಗಡೆಗೂ ಮುನ್ನ ಟ್ರೇಲರ್ ಮಾಡುತ್ತಿದೆ ಭಾರಿ ಸದ್ದು.

ಶಶಿಕುಮಾರ್, ದಿವ್ಯಚಂದ್ರಧರ, ಯೋಗೇಶ್ ಕೆ ಗೌಡ ನಿರ್ಮಾಣದ, ಎಸ್ ಕೆ ನಾಗೇಂದ್ರ ಅರಸ್ ನಿರ್ದೇಶನದ ಮತ್ತು ಪ್ರಣವ ಸೂರ್ಯ ಅಭಿನಯದ
“ಕಂಡ್ಡಿಡಿ ನೋಡನ” ಚಿತ್ರ ಮೇ ಇಪ್ಪತ್ತರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ನಿರ್ಮಾಪಕರಾದ ಕೆ.ಮಂಜು, ರಮೇಶ್ ರೆಡ್ಡಿ ಹಾಗೂ ಸೋಗೂರು ಕುಮಾರ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ನಮ್ಮ ಸಿನಿಮಾ ಬಗ್ಗೆ ನಾವೇ ಜಾಸ್ತಿ ಹೇಳಿಕೊಳ್ಳುವುದು ಸೂಕ್ತವಲ್ಲ. ಜನ ಹೇಳಬೇಕು. ಟ್ರೇಲರ್ ಗೆ ಸಿಗುತ್ತಿರುವ ಪ್ರಶಂಸೆಗೆ ಮನ ತುಂಬಿ ಬಂದಿದೆ. ನಿರ್ದೇಶನಕ್ಕೆ ಅವಕಾಶ ಕೊಟ್ಟ ನಿರ್ಮಾಪಕರಿಗೆ, ಪ್ರಣವ್ ಸೂರ್ಯ ಅವರಿಗೆ ಧನ್ಯವಾದ ಎಂದರು ನಿರ್ದೇಶಕ ನಾಗೇಂದ್ರ ಅರಸ್

ನಾನು ನಟನಾಗಬೇಕೆಂದು ಆಸೆ ಹೊತ್ತು ಬಂದವನಲ್ಲ. ಉತ್ತಮ ತಂತ್ರಜ್ಞನಾಗಬೇಕೆಂಬುದೆ ನನ್ನ ಹಂಬಲ. ಅನಿರೀಕ್ಷಿತವಾಗಿ “ಸೈಕೋ ಶಂಕರ” ಚಿತ್ರದ ಮೂಲಕ ನಾಯಕನಾದೆ. ಇದು ನನ್ನ ಎರಡನೇ ಸಿನಿಮಾ.‌ ಕಥೆ ಚೆನ್ನಾಗಿದೆ. ಇಪ್ಪತ್ತನೇ ತಾರೀಖು ತೆರೆಗೆ ಬರುತ್ತಿದೆ. ನಮ್ಮ ತಂಡವನ್ನು ಹರಸಲು ಬಂದಿರುವ ಅತಿಥಿಗಳಿಗೆ ಧನ್ಯವಾದ. ನಿಮ್ಮ ಪ್ರೋತ್ಸಾಹವಿರಲಿ ಎಂದರು ನಾಯಕ ಪ್ರಣವ್ ಸೂರ್ಯ.

ನನ್ನ ಮೊದಲ ಚಿತ್ರ. ಚೆನ್ನಾಗಿ ಮೂಡಿಬಂದಿದೆ. ನಮ್ಮ ಚಿತ್ರವನ್ನು ಬೆಂಬಲಿಸಿ ಎಂದರು ನಾಯಕಿ ಪ್ರಿಯಾಂಕ.‌

ನನಗೆ ಚಿಕ್ಕ ವಯಸ್ಸಿನಿಂದ ಸಿನಿಮಾ ಮಾಡುವ ಆಸೆ. ಅದು ಈಗ ಕೂಡಿಬಂದಿದೆ. ಸ್ನೇಹಿತೆ ದಿವ್ಯ ಅವರು ಬಂದು ಈ ಸಿನಿಮಾ ಬಗ್ಗೆ ಹೇಳಿದಾಗ ಕಥೆ ಮೆಚ್ಚುಗೆಯಾಗಿ ನಿರ್ಮಾಣಕ್ಕೆ ಮುಂದಾದೆ ಎನ್ನುತ್ತಾರೆ ನಿರ್ಮಾಪಕ ಶಶಿಕುಮಾರ್.

ನಾನು ಮೂಲತಃ ವಿಜ್ಞಾನಿ. ಕಥೆ ಇಷ್ಟವಾಯಿತು. ಸಿನಿಮಾ ಮಾಡಿದ್ದೀವಿ ದಯವಿಟ್ಟು ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕಿ ದಿವ್ಯ ಚಂದ್ರಧರ್. ಮತ್ತೊಬ್ಬ ನಿರ್ಮಾಪಕ ಯೋಗೇಶ್ ಸಹ ಚಿತ್ರಕ್ಕೆ ಎಲ್ಲರ ಬೆಂಬಲ ಕೋರಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹಿ ವಿಜ್ಗೆ ಅಪರಿಚಿತರಿಂದ ಅತ್ಯಾಚಾರ ಬೆದರಿಕೆಗಳು!

Mon May 9 , 2022
ಮಹಿ ವಿಜ್‌ಗೆ ಅಪರಿಚಿತರಿಂದ ಅತ್ಯಾಚಾರ ಬೆದರಿಕೆಗಳು;ನಟಿ ವಿಡಿಯೋ ಶೇರ್ ಮಾಡಿ ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ನಟಿ ಮಹಿ ವಿಜ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ಗೆ ತೆಗೆದುಕೊಂಡು ಭಯಾನಕ ಘಟನೆಯನ್ನು ವರದಿ ಮಾಡಿದ್ದಾರೆ. ತನ್ನ ಮಗಳೊಂದಿಗೆ ಪ್ರಯಾಣಿಸುತ್ತಿದ್ದಾಗ,ಒಬ್ಬ ವ್ಯಕ್ತಿ ಮತ್ತು ಅವನ ಹೆಂಡತಿಯಿಂದ ತನಗೆ ಕೊಲೆ ಬೆದರಿಕೆಗಳು ಮತ್ತು ನಿಂದನೆಗಳು ಬಂದವು ಎಂದು ನಟಿ ಹೇಳಿಕೊಂಡಿದ್ದಾರೆ. ನಟಿ ಕಾರಿನ ಸಂಖ್ಯೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಸಹಾಯಕ್ಕಾಗಿ ಮುಂಬೈ ಪೊಲೀಸರನ್ನು ಟ್ಯಾಗ್ […]

Advertisement

Wordpress Social Share Plugin powered by Ultimatelysocial