Saif Ali Khan | Akshay Kumar: ಬಾಲಿವುಡ್ ತಾರೆಯರಾದ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಸೆಲೆಬ್ರಿಟಿ ಜೋಡಿಗಳೆಂದರೆ ಹೆಸರಾದವರು. ಮದುವೆಗೂ ಮೊದಲು ಅವರು ಅವರ ಪ್ರೇಮ ಕತೆ ಶುರುವಾಗಿದ್ದು ಹೇಗೆ? ಸೈಫ್ಗೆ ಆಗ ಸಿಕ್ಕಿದ ಹಿತೋಪದೇಶ ಏನು? ಇಲ್ಲಿದೆ ಸೈಫ್- ಕರೀನಾ ಪ್ರೇಮ ಪುರಾಣ | ಬಾಲಿವುಡ್ನಲ್ಲಿ ತೆರೆಯ ಮೇಲಿನ ಪ್ರೇಮಕತೆಗಳಂತೆ ತೆರೆಯ ಹಿಂದಿನ ಪ್ರೇಮ ಕತೆಗಳಿಗೂ ಬರವಿಲ್ಲ. ತಾರಾ ಜೋಡಿಗಳು ಜತೆಯಾಗಿ ಸುತ್ತಾಡುವುದು, ಕೆಲ ಕಾಲದ ನಂತರ ದೂರಾಗುವುದು, ಮತ್ತೆ ಒಂದಾಗುವುದು ಇದೆಲ್ಲಾ ನಡೆಯುತ್ತಲೇ ಇರುತ್ತದೆ. ಇಂತಹ ತಾರಾ ಜೋಡಿಗಳಲ್ಲಿ ಮುಖ್ಯವಾಗಿ ಸುದ್ದಿಯಾಗುವವರು ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ . ಮೊದಲ ಪತ್ನಿ ಅಮೃತಾರಿಂದ ಬೇರ್ಪಟ್ಟ ನಂತರ ಸೈಫ್ 2012ರಲ್ಲಿ ಕರೀನಾ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೆ ಈರ್ವರ ಪ್ರೇಮ ಕತೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಅಷ್ಟೇ ಅಲ್ಲ. ಬಾಲಿವುಡ್ನ ಖ್ಯಾತ ನಟನೋರ್ವ ‘ಕರೀನಾ ಸಿಕ್ಕಾಪಟ್ಟೆ ಡೇಂಜರ್’ ಎಂದು ಸೈಫ್ಗೆ ಎಚ್ಚರಿಕೆಯನ್ನೂ ನೀಡಿದ್ದರು. ಈ ಎಲ್ಲಾ ಮಜವಾದ ಕತೆಯನ್ನು ಕರೀನಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇದು ಅಭಿಮಾನಿಗಳ ಹುಬ್ಬೇರಿಸುವಂತೆ ಮಾಡಿದ್ದು, ಸೆಲೆಬ್ರಿಟಿಗಳ ಬದುಕಲ್ಲೂ ಇಂತಹ ಕತೆಗಳು ಇರುತ್ತವಾ ಎಂದುಕೊಂಡಿದ್ದಾರೆ. ಸೈಫ್ಗೆ ಎಚ್ಚರಿಕೆ ನೀಡಿದ್ದು ಯಾರು? ಅದಕ್ಕೆ ಸೈಫ್ ಉತ್ತರವೇನಾಗಿತ್ತು? ಇಲ್ಲಿದೆ ಕುತೂಹಲಕರ ಮಾಹಿತಿ.ಅಕ್ಷಯ್ ಪತ್ನಿ ಟ್ವಿಂಕಲ್ ಖನ್ನಾ ಬರಹಗಾರ್ತಿಯೂ ಹೌದು. ಯುಟ್ಯೂಬ್ ಚಾನಲ್ ಒಂದಕ್ಕೆ ಟ್ವಿಂಕಲ್ ಹಾಗೂ ಕರೀನಾ ಜತೆಯಾಗಿ ಕುಳಿತು ಮಾತನಾಡಿ ಒಂದಷ್ಟು ವಿಚಾರ ಹಂಚಿಕೊಂಡಿದ್ದಾರೆ. ಅದರಲ್ಲಿ ಕರೀನಾ ಪ್ರೇಮ ಪುರಾಣ ಹೊರಬಿದ್ದಿದೆ. ಅಷ್ಟೇ ಅಲ್ಲ. ಈ ಪ್ರೇಮ ಪ್ರಕರಣದಲ್ಲಿ ಸೈಫ್ಗೆ ಎಚ್ಚರಿಕೆ ನೀಡಿದ್ದು ಟ್ವಿಂಕಲ್ ಪತಿ ಅಕ್ಷಯ್ ಕುಮಾರ್! ಇದನ್ನೆಲ್ಲಾ ಹೇಳಿಕೊಂಡು ನಕ್ಕಿದ್ದಾರೆ ಕರೀನಾ
ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಸಂಬಂಧ ಪ್ರಾರಂಭವಾಗಿದ್ದು ಹೇಗೆ?
2008ರಲ್ಲಿ ‘ತಾಶಾನ್’ ಚಿತ್ರಕ್ಕಾಗಿ ಕರೀನಾ ಹಾಗೂ ಸೈಫ್ ಜತೆಯಾಗಿ ಕೆಲಸ ಮಾಡುತ್ತಿದ್ದರು. ವಾಸ್ತವವಾಗಿ ಎಲ್ಲವೂ ಸರಿಯಿದ್ದಿದ್ದರೆ ಸೈಫ್ ಹಾಗೂ ಕರೀನಾ ಅದಕ್ಕೂ ಮೊದಲೇ ಕೆಲವು ಚಿತ್ರಗಳಲ್ಲಿ ಜತೆಯಾಗಿ ನಟಿಸಬೇಕಿತ್ತು. ಆದರೆ ಕರೀನಾ ಆ ಆಫರ್ನೆಲ್ಲಾ ತಿರಸ್ಕರಿಸಿದ್ದರಂತೆ. ನಂತರ ‘ತಾಶಾನ್’ಗಾಗಿ ಈ ಜೋಡಿ ತೆರೆ ಹಂಚಿಕೊಂಡರು
.ಅಕ್ಷಯ್ ಸೈಫ್ಗೆ ನೀಡಿದ್ದ ಸಲಹೆ ಏನು
?ಶೂಟಿಂಗ್ ಸೆಟ್ನಲ್ಲಿ ಈ ಸಂದರ್ಭದಲ್ಲಿ ಅಕ್ಷಯ್ ಹಾಗೂ ಸೈಫ್ ಮಾತನಾಡಿಕೊಂಡಿದ್ದನ್ನು ಕರೀನಾ ಸ್ಮರಿಸಿಕೊಂಡಿದ್ದಾರೆ. ‘ಖಿಲಾಡಿ’ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಅಕ್ಷಯ್ಗೆ ಸೈಫ್ ಹಾಗೂ ಕರೀನಾ ಪರಸ್ಪರ ಕನೆಕ್ಟ್ ಆಗುತ್ತಿದ್ದಾರೆ ಎಂಬ ಅನುಮಾನ ಬಂದಿತ್ತಂತೆ. ಸೆಟ್ನಲ್ಲಿ ಸೈಫ್ರನ್ನು ಬದಿಗೆ ಕರೆದಿದ್ದ ಅಕ್ಷಯ್ ಕಿವಿಮಾತು ಹೇಳಿದ್ದರಂತೆ. ”ನೋಡು, ಇದನ್ನು ಗಂಭೀರವಾಗಿ ಕೇಳಿಸಿಕೊ. ಕರೀನಾ ಅಪಾಯಕಾರಿ (ಡೇಂಜರಸ್) ಹುಡುಗಿ ಮತ್ತು ಅಪಾಯಕಾರಿ ಕುಟುಂಬದಿಂದ (ಕಪೂರ್ ಫ್ಯಾಮಿಲಿ) ಬಂದವಳು. ಆಕೆಯೊಂದಿಗೆ ಎಡವಟ್ಟು ಮಾಡಿಕೊಳ್ಳಬೇಡ” ಎಂದು ಹಿತೋಪದೇಶ ಮಾಡಿದ್ದರಂತೆ. ಅಕ್ಷಯ್ ನುಡಿ ಹೇಗಿತ್ತೆಂದರೆ ತಪ್ಪು ವ್ಯಕ್ತಿಯಲ್ಲಿ ಸೈಫ್ ಸಂಬಂಧ ಬೆಳೆಸಲು ನೋಡುತ್ತಿದ್ದಾರೆ ಎನ್ನುವುದಾಗಿತ್ತು ಎಂದು ಕರೀನಾ ತಮಾಷೆ ಮಾಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us:
Tue Feb 1 , 2022
ಕನ್ನಡದ ಸೂಪರ್ಸ್ಟಾರ್ ಕಿಚ್ಚ ಸುದೀಪ್ ಸೋಮವಾರ ಚಿತ್ರರಂಗದಲ್ಲಿ 26 ವರ್ಷಗಳನ್ನು ಪೂರೈಸಿದ್ದು, ಈ ಸಂದರ್ಭದಲ್ಲಿ ಅವರು ತಮ್ಮ ಪತ್ನಿ ಈ ವರ್ಷಗಳಲ್ಲಿ ಮಾಡಿದ ತ್ಯಾಗಕ್ಕೆ ಧನ್ಯವಾದ ಅರ್ಪಿಸಿದರು. “ನೀವು ಈ 26 ವರ್ಷಗಳಲ್ಲಿ ಅನುಗ್ರಹದಿಂದ ನಡೆದುಕೊಂಡಿದ್ದೀರಿ ಮತ್ತು ನೀವು ಮಾಡಿದ ಎಲ್ಲಾ ತ್ಯಾಗಗಳಿಗೆ ನಾನು ಸಾಕಷ್ಟು ಧನ್ಯವಾದ ಹೇಳಲಾರೆ” ಎಂದು ನಟ ತನ್ನ ಪತ್ನಿ ಪ್ರಿಯಾ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಉದ್ದೇಶಿಸಿ ಬರೆದಿದ್ದಾರೆ. “ಅಂತಹ ಶಕ್ತಿಯಾಗಿದ್ದಕ್ಕಾಗಿ ಮತ್ತು [ನಿಮ್ಮ] ಕೆಲಸಕ್ಕೆ […]