ಪೂಜಾ ವಿಚಾರಕ್ಕೆ ಅರ್ಚಕನನ್ನೇ ಓಡಾಡಿಸಿ ಹಲ್ಲೆ ಮಾಡಿದ ಕಂಪ್ಲಿಕೊಪ್ಪ ಗ್ರಾಮಸ್ಥರು.

ಮಠದ ಪೂಜೆ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಹಾಗೂ ಅರ್ಚಕನ ನಡುವೇ ಮಾರಾಮಾರಿ ನಡೆದ ಘಟನೆ ಹುಬ್ಬಳ್ಳಿ ತಾಲೂಕಿನ ಕಂಪ್ಲಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಕಳೆದ ಐವತ್ತಕ್ಕೂ ಹೆಚ್ಚು ವರ್ಷಗಳಿಂದ ಬಸವಣ್ಣ ದೇವಸ್ಥಾನದ ಪ್ರಕಾಶ್ ಮುಳುಗಂದಮಠ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ‌. ಇವರ ಕಾರ್ಯವೈಖರಿ ಬಗ್ಗೆ ಬೇಸತ್ತ ಗ್ರಾಮಸ್ಥರು ಅರ್ಚಕರನ್ನು ಪೂಜೆ ಮಾಡದಂತೆ ಹೇಳಿದ್ದಾರೆ.

ಇವತ್ತು ಮಠದ ಪೂಜೆ ವಿಷಯವಾಗಿ ಗ್ರಾಮಸ್ಥರು ಅರ್ಚಕರ ನಡುವೆ ಮಾತಿಗೆ ಮಾತು ನಡೆದಿದೆ. ಇದು ವಿಕೋಪಕ್ಕೆ ತಿರುಗಿ
ದೇವಸ್ಥಾನದಲ್ಲಿಯೇ ಅರ್ಚಕೊಂದಿಗೆ ಗ್ರಾಮಸ್ಥರ ಗಲಾಟೆ ಮಾಡಿಕೊಂಡಿದ್ದಾರೆ.
ಅರ್ಚಕ ಪ್ರಕಾಶ್ ಮುಳುಗಂದಮಠಗೆ ಥಳಿಸಿದ್ದಾರೆ.
ಓಡೋಡಿ ಬಂದು ಹಾರಿ ಹಾರಿ ಒದ್ದು ಹಲ್ಲೆ ಮಾಡಿದ್ದಾರೆ.
ಹಲ್ಲೆ ಮಾಡಿರೋ ವಿಡಿಯೋ ಸ್ಥಳೀಯರ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಕಳೆದ ಹಲವು ವರ್ಷಗಳಿಂದ ಪೂಜೆ ವಿವಾದ ನಡೆಯುತ್ತಿದೆ.
ದೇವಸ್ಥಾನಕ್ಕೆ ಬೇರೆ ಅರ್ಚಕನನ್ನು ನೇಮಿಸಲು ಗ್ರಾಮಸ್ಥರು ಮುಂದಾಗಿದ್ದಾರೆ.
ಆದ್ರೆ ನಾನೇ ಪೂಜೆ ಮಾಡ್ತೀನಿ ಎಂದು ಮುಳುಗಂದಮಠ ಪಟ್ಟು ಹಿಡಿದಿದ್ದಾರೆ. ಇದೇ ವಿಚಾರಕ್ಕೆ ಹಲವು ಬಾರಿ ವಾಗ್ವಾದ ನಡೆದು
ಇಂದು ಅಧಿಕಾರಿಗಳ ಗ್ರಾಮ ವಾಸ್ತವ್ಯ ಇರೋ ವೇಳೆನೇ ಗ್ರಾಮಸ್ಥರು ಅರ್ಚಕರು ನಡುವೆ ಹೊಡೆದಾಡಿಕೊಂಡಿದ್ದಾರೆ.
ಅರ್ಚಕನ ಮಗನಿಗೂ ಗ್ರಾಮಸ್ಥರು ಥಳಿಸಿದ್ದಾರೆ. ಗ್ರಾಮೀಣ ಪೊಲೀಸರು ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆರೆಗೆ ಬಿದ್ದು ಇಬ್ಬರು ಯುವಕರ ದುರ್ಮರಣ ಪ್ರಕರಣ!

Tue Feb 21 , 2023
ಕೆರೆಗೆ ಬಿದ್ದು ಇಬ್ಬರು ಯುವಕರ ದುರ್ಮರಣ ಪ್ರಕರಣ ವೈನ್ಸ್ ಮಾಲಿಕರ ವಿರುದ್ಧ ಪೋಷಕರ ಆಕ್ರೋಶ ತೆರಕಣಾಂಬಿಯ ದಿಶಾ ವೈನ್ಸ್ ಮಾಲೀಕರ ವಿರುದ್ದ ಆಕ್ರೋಶ ದಿಶಾ ವೈನ್ಸ್ ಪರವಾನಗಿ ರದ್ದುಗೊಳಿಸುವಂತೆ ಒತ್ತಾಯ ಪಾನಮತ್ತರಾಗಿ ಕಾರ್ತಿಕ್ (26) ವಿನೋಧ ( 30 ) ಎಂಬ ಯುವಕರು ಸಾವನ್ನಪ್ಪಿದ್ರು ವೈನ್ಸ್ ಅಂಗಡಿ ಮುಂದೆಯೇ ಕಲ್ಯಾಣಿ ಕೊಳವಿದೆ ವೈನ್ಸ್ ಮಾಲೀಕರ ಅಜಾಗರುಕತೆಯೇ ಯುವಕರ ಸಾವಿಗೆ ಕಾರಣ ಮೃತ ಯುವಕರ ಪೋಷಕರ ಆರೋಪ ಪುರಾತತ್ವ ಕುರುಹುಗಳಿದ್ರು ಇಲ್ಲಿ […]

Advertisement

Wordpress Social Share Plugin powered by Ultimatelysocial