ಕಾಸರಗೋಡಿನಲ್ಲಿ ಯುವತಿಗೆ ಮಾದಕ ವಸ್ತು ನೀಡಿ ಸಾಮೂಹಿಕ ಅತ್ಯಾಚಾರ

ಇಲ್ಲಿನ ವಿದ್ಯಾನಗರ ಪೊಲೀಸ್‌ ಠಾಣೆ ವ್ಯಾಪ್ತಿಯ 19 ವರ್ಷದ ಯುವತಿಗೆ ಮಾದಕ ವಸ್ತು ನೀಡಿ ಸಾಮೂಹಿಕ ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಘಟನೆಗೆ ಸಂಬಂಧಿಸಿ ಕಾಞಂಗಾಡ್‌ ಮೂಲದ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ಮಧೂರು ಪಟ್ಲ ನಿವಾಸಿ ಶೈನಿತ್‌ ಕುಮಾರ್‌ (30), ಉಪ್ಪಳ ಮಂಗಲ್ಪಾಡಿ ನಿವಾಸಿ ಮೋಕ್ಷಿತ್‌ ಶೆಟ್ಟಿ (43), ಉಳಿಯತ್ತಡ್ಕದ ಬಾಡಿಗೆ ಮನೆಯಲ್ಲಿ ವಾಸಿಸುವ ಪ್ರಶಾಂತ್‌ (27) ಎಂಬವರನ್ನು ಬಂಧಿಸಲಾಗಿದೆ. ಕಾಸರಗೋಡು ವಿದ್ಯಾನಗರ ಮಹಿಳಾ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಪಿ.ಚಂದ್ರಿಕಾ ನೇತೃತ್ವದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾಞಂಗಾಡ್‌ ನಿವಾಸಿ ಜಾಸ್ಮಿನ್‌ ಎಂಬ ಮಹಿಳೆಯನ್ನು ಕಸ್ಟಡಿಗೆ ಪಡೆಯಲಾಗಿದೆ. ಯುವತಿಯ ಹೇಳಿಕೆ ಆಧರಿಸಿ ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳ ಪತ್ತೆ ಕಾರ್ಯ ನಡೆಸಲಾಗುತ್ತಿದೆ.ವಿದ್ಯಾನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಯುವತಿ ದೌರ್ಜನ್ಯಕ್ಕೊಳಗಾಗಿದ್ದಾಳೆ. ಯುವತಿಯ ಸ್ನೇಹಿತನೂ ಈ ಪ್ರಕರಣದಲ್ಲಿ ಆರೋಪಿ ಆಗಿರುವುದಾಗಿ ಹೇಳಲಾಗಿದೆ. ಯುವತಿ ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದಾಗಲೇ ಆತ ಆಕೆಯೊಂದಿಗೆ ಸ್ನೇಹದಲ್ಲಿದ್ದು, ಹತ್ತನೇ ತರಗತಿಯ ಬಳಿಕ ಆತನನ್ನು ದೂರ ಮಾಡಿದ್ದಾಳೆ. ಇದರಿಂದ ಆಕೆಯ ಸಂಬಂಧಿಕೆಯಾದ ಮಹಿಳೆಯೊಬ್ಬಳ ಸಹಾಯದೊಂದಿಗೆ ಯುವತಿಯನ್ನು ಮತ್ತೆ ಬಲೆಗೆ ಹಾಕಿಕೊಂಡ ಯುವಕ ಆಕೆಯನ್ನು ಪುಸಲಾಯಿಸಿ ವಿವಿಧೆಡೆ ಕರೆದೊಯ್ದು ಮಾದಕ ವಸ್ತು ನೀಡಿ ಅತ್ಯಾಚಾರ ನಡೆಸಿದ್ದಾನೆಂದು ದೂರಲಾಗಿದೆ ಚೆರ್ಕಳ, ಕಾಸರಗೋಡು, ಮಂಗಳೂರು, ತ್ರಿಶೂರು ಮೊದಲಾದೆಡೆಗಳ ವಸತಿ ಗೃಹಗಳಿಗೆ ಕರೆದೊಯ್ದು ಅತ್ಯಾಚಾರ ನಡೆಸಿರುವುದಾಗಿ ಹೇಳಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡೆತ್‌ನೋಟ್‌ ಬರೆದಿಟ್ಟು ಮೂವರ ಸಾಮೂಹಿಕ ಆತ್ಮಹತ್ಯೆ

Sun Jan 1 , 2023
 ವೃದ್ಧ ತಾಯಿ ಜತೆ ಸೇರಿ ಇಬ್ಬರು ಅವಿವಾಹಿತ ಮಕ್ಕಳು ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾಲಕ್ಷ್ಮೀ ಲೇಔಟ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಯಶೋಧಾ (70), ಸುಮನಾ (41), ನರೇಶ್‌ (36) ಆತ್ಮಹತ್ಯೆ ಮಾಡಿಕೊಂಡವರು. ಮೂವರ ಸಾವಿನ ಕುರಿತು ಯಶೋಧ ಅವರ ಮತ್ತೊಬ್ಬ ಪುತ್ರಿ ಅಪರ್ಣಾ ಅನುಮಾನ ವ್ಯಕ್ತಪಡಿಸಿದ್ದಾರೆ ಯಶೋಧಾ ಅವರು ಅವಿವಾಹಿತ ಪುತ್ರ ನರೇಶ್‌, ಪುತ್ರಿ ಸುಮನಾ ಜತೆ ಕಳೆದ ನಾಲ್ಕು ತಿಂಗಳಿನಿಂದ ಮಹಾಲಕ್ಷ್ಮೀ ಲೇಔಟ್‌ನ […]

Advertisement

Wordpress Social Share Plugin powered by Ultimatelysocial