ಕಾಶಿ ವಿಶ್ವನಾಥ ಶೆಟ್ಟಿ ಸಾಹಿತ್ಯ ಕ್ಷೇತ್ರದ ಸಾಧಕರು.

 

 

 

ಕಾಶಿ ವಿಶ್ವನಾಥ ಶೆಟ್ಟಿ ಸಾಹಿತ್ಯ ಕ್ಷೇತ್ರದ ಸಾಧಕರು.ಕಾಶಿ ವಿಶ್ವನಾಥ ಶೆಟ್ಟಿಯವರು 1928ರ ಫೆಬ್ರವರಿ 24ರಂದು ತುಮಕೂರಿನಲ್ಲಿ ಜನಿಸಿದರು. ತಂದೆ ಕೃಷ್ಣ ಶೆಟ್ಟಿ, ತಾಯಿ ಸೀತಾಲಕ್ಷ್ಮಮ್ಮ. ಪ್ರಾರಂಭಿಕ ಶಿಕ್ಷಣ ತುಮಕೂರಿನಲ್ಲಿ ನಡೆಯಿತು. ಮೈಸೂರು ಮಹಾರಾಜಾ ಕಾಲೇಜಿನಿಂದ ಬಿ.ಎ. (ಆನರ್ಸ್) ಹಾಗೂ ಎಂ.ಎ. ಪದವಿ ಗಳಿಸಿದರು.ಕಾಶಿ ವಿಶ್ವನಾಥ ಶೆಟ್ಟಿಯವರು ಶಾಲೆಯಲ್ಲಿ ಓದುತ್ತಿದ್ದಾಗಲೇ ಸಾಹಿತ್ಯದ ಬಗ್ಗೆ ಒಲವು ಮೂಡಿ ಸಾಹಿತ್ಯ ಚಟುವಟಿಕೆಗಳಿಗಾಗಿ ‘ವಿಶ್ವ ಸಂಘ’ ಎಂಬ ಸಂಘವನ್ನು ಸ್ಥಾಪಿಸಿದರು. ಸಂಘವನ್ನು ಉದ್ಘಾಟಿಸಿದವರು ಪ್ರಸಿದ್ಧ ಪತ್ರಕರ್ತರಾಗಿದ್ದ ತಿ.ತಾ.ಶರ್ಮರು. ಇವರ ಸಾಹಿತ್ಯ ಚಟುವಟಿಕೆಗಳ ಅತ್ಯುತ್ಸಾಹವನ್ನು ಮೆಚ್ಚಿ ಮಾತನಾಡಿದಾಗ ವಿಶ್ವನಾಥ ಶೆಟ್ಟರಿಗೆ ಹೊಸ ಹುರುಪು ಬಂದು ಅನೇಕ ಕಾರ್ಯಕ್ರಮಗಳನ್ನೇರ್ಪಡಿಸಿದರು. ಇಂಟರ್ ಮೀಡಿಯಟ್ ನಂತರ ತುಮಕೂರು ಕಾಲೇಜಿನಲ್ಲಿ ಪದವಿ ತರಗತಿಗಳು ಪ್ರಾರಂಭವಾಗಿದ್ದರೂ ಕುವೆಂಪು, ಡಿ.ಎಲ್.ಎನ್., ಎಸ್.ವಿ.ಪರಮೇಶ್ವರ ಭಟ್ಟ. ಕ.ವೆಂ.ರಾಘವಾಚಾರ್ಯ ಮುಂತಾದವರುಗಳು ತರಗತಿಗಳನ್ನು ತೆಗೆದು ಕೊಳ್ಳುತ್ತಿದ್ದುದರಿಂದ ಪದವಿ ಪಡೆಯಲು ಮೈಸೂರನ್ನೇ ಆಯ್ಕೆಮಾಡಿಕೊಂಡರು.ಕಾಶಿ ವಿಶ್ವನಾಥ ಶೆಟ್ಟಿಯವರು ಎಂ.ಎ. ಪದವಿ ಪಡೆದ ನಂತರ ಕೆಲಕಾಲ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಕೆಲಸಮಾಡಿದರು. ನಂತರ ಅಧ್ಯಾಪಕ ಹುದ್ದೆಯು ತುಮಕೂರಿನ ಕಾಲೇಜಿನಲ್ಲಿಯೇ ದೊರೆತಿದ್ದರಿಂದ ತುಮಕೂರನ್ನೇ ಆಯ್ಕೆ ಮಾಡಿಕೊಂಡು ಕೆಲ ವರ್ಷಗಳ ನಂತರ ಚಿಕ್ಕಮಗಳೂರಿಗೆ ವರ್ಗವಾಗಿ ಅಲ್ಲಿಯೇ ನಿವೃತ್ತರಾದರು.ಕಾಶಿ ವಿಶ್ವನಾಥ ಶೆಟ್ಟಿಯವರು ಕಾಲೇಜು ದಿನಗಳಲ್ಲಿಯೇ ಸಾಹಿತ್ಯ ಕೃಷಿ ಆರಭಿಸಿದರು. ‘ಕಾಶೀ ಕಾವೇರಿ’ ಪ್ರಕಟಗೊಂಡ ಇವರ ಮೊದಲ ಕವನ ಸಂಕಲನ. ತೀ.ನಂ.ಶ್ರೀ. ಯವರು ಇವರ ಕಾವ್ಯದ ದೃಷ್ಟಿ, ನಿರರ್ಗಳ ಶೈಲಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ನಂತರ ಪ್ರಕಟಗೊಂಡ ಕವನ ಸಂಕಲನಗಳು ಮಾವು ಮಲ್ಲಿಗೆ, ರಾಗ ಯೋಗ, ಮೇಘಮಾಲೆ, ಚಂದ್ರಿಕಾ ಚಂದ್ರಮ, ಮುಗುಳು ಮಿಂಚು, ಸಮರ್ಪಣಾ, ದ್ರಾಕ್ಷಿ ಮದಿರಾಕ್ಷಿ, ಮುಂತಾದವುಗಳು. ಸೀತಕ್ಕನ ಸಮರ, ಸಮಾಗಮ, ಜೀವಕ್ಕೆ ಜೀವ, ಅಭಾಗಿನಿ, ಭಗ್ನ ಹೃದಯ ಕಾದಂಬರಿಗಳು. ಭವ್ಯ ಭಾರತ ಪರಂಪರೆ, ಧರ್ಮನಂದನ, ಉತ್ಕೃಷ್ಟ ಭಾರತ, ಸಂಘಮಿತ್ರ, ಏಕಲವ್ಯ, ಮಹಾಭೀಷ್ಕ್ರಮಣ ಇವರ ನಾಟಕಗಳು. ಗೃಹದೇವತೆ, ಬ್ರಹ್ಮಗಂಟು, ಶರಣು ಶನಿದೇವ, ಆಚಾರದ ಬೆನ್ನಲ್ಲಿ ಇವರ ಕಥಾ ಸಂಕಲನಗಳು. ಸ್ವಾಮಿ ಶಿವಾನಂದ ಸರಸ್ವತಿ, ಶ್ರೀ ಲಕ್ಷ್ಮೀನರಸಿಂಹ ಸೋಮಯಾಜಿ, ವೀರ ಸಾವರ್ಕರ್ ಮುಂತಾದವು ಜೀವನ ಚರಿತ್ರೆಗಳು. ಕುಮಾರ ವಾಲ್ಮೀಕಿ, ರುದ್ರ ಭಟ್ಟ, ಕನ್ನಡ ಶತಕ ಸಾಹಿತ್ಯ, ಕನ್ನಡದಲ್ಲೊಂದು ಕ್ರೈಸ್ತಯುಗ, ಕನ್ನಡ ಕವಯಿತ್ರಿಯರು, ವಚನಕಾರ್ತಿಯರು, ವಾಸವಿ ಮುಂತಾದ ಕೃತಿಗಳನ್ನು ರಚಿಸಿದ್ದಲ್ಲದೆ ಎಲಿಯಟ್ಟನ ಮರ್ಡರ್ ಇನ್ ದಿ ಕ್ಯಾಥಡ್ರಲ್ ನಾಟಕವನ್ನು ‘ದೇಗುಲದಲ್ಲಿ ಕೊಲೆ’ ಎಂದು ಅನುವಾದಿಸಿದ್ದರು. ಕುವೆಂಪು ಸಾಹಿತ್ಯ ಸಂಬಂಧಿ ಸಂಪುಟವಾದ ‘ಉಪಾಯನ ಕೃತಿ ಕರಂಡ’ ನೆನಪಿನ ಸಂಚಿಕೆಯ ಸಂಪಾದಕರಾಗಿ ದುಡಿದಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿ. ಟಿ. ಎಸ್. ರಾವ್ ಕಲಾಸಾಧಕ.

Sun Feb 26 , 2023
  ವಿ. ಟಿ. ಎಸ್. ರಾವ್ ಕಲಾಸಾಧಕರಾಗಿ ಹೆಸರು.ವಿ. ಟಿ. ಎಸ್. ರಾವ್ ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ನಾಮಗೊಂಡ್ಲು ಗ್ರಾಮದಲ್ಲಿ 1935ರ ಫೆಬ್ರವರಿ 24ರಂದು ಜನಿಸಿದರು. ತಂದೆ ತಿಮ್ಮರಸು. ತಾಯಿ ಗೌರಮ್ಮ. ರಾವ್ ಮೈಸೂರಲ್ಲಿ ಓದಿದರು. ಶಾಲಾ ದಿನಾಚರಣೆಯ ಸಂದರ್ಭದಲ್ಲಿ ರಚಿಸಿದ ವೀಣಾಪಾಣಿ ಚಿತ್ರಕ್ಕೆ ಅಮೆರಿಕದ ರೆಡ್‌ಕ್ರಾಸ್ ಸೊಸೈಟಿಯ ರಾಲ್ಫ್‌ಬುಂಜೆ ಯವರಿಂದ ಬಹುಮಾನ ಸ್ವೀಕರಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದರು.ವಿ. ಟಿ. ಎಸ್. ರಾವ್ […]

Advertisement

Wordpress Social Share Plugin powered by Ultimatelysocial