ಬಹುನಿರೀಕ್ಷಿತ ಸಿನಿಮಾ ಕಸ್ತೂರಿ ಮಹಲ್ ಇಂದು ರಾಜ್ಯಾದ್ಯಂತ ಬಿಡುಗಡೆಯಾಯಿಗಿದೆ.ಚಿತ್ರದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ ಶಾನ್ವಿ ಶ್ರೀವಾಸ್ತವ..ಹಾಗೂ ಪ್ರಮುಖ ಪಾತ್ರದಲ್ಲಿ ನಟ ರಂಗಾಯಣ ರಘು ಕಾಣಿಸಿಕೊಂಡಿದ್ದು, ಸಿನಿಮಾ ಕಥೆಯನ್ನ ಕಿಟ್ಟಪ್ಪ ಎಂಬ ಪಾತ್ರದ ಮೂಲಕ ತೆಗೆದುಕೊಂಡು ಹೋಗುವ ಕಾರ್ಯವನ್ನ ನಿರ್ದೇಶಕರು ಬಹಳ ಅಚ್ಚುಕಟ್ಟಾಗಿ ತೆರೆ ಮೇಲೆ ಮೂಡಿಸಿದ್ದಾರೆ.
ಇನ್ನೂ ದಿನೇಶ್ ಬಾಬು ನಿರ್ದೇಶನದ ಹಾರರ್ ಸಿನಿಮಾವಾಗಿದ್ದು .ಕಸ್ತೂರಿ ಮಹಲ್ ಚಿತ್ರದ ನಿರ್ಮಾಣವನ್ನ ರವೀಶ್ ಆರ್ ಸಿ ಮಾಡಿದ್ದಾರೆ. ಬೆಂಗಳೂರಿನ ಅನುಪಮ ಥಿಯೇಟರ್ ನಲ್ಲಿ ಹಬ್ಬದ ಸಂಭ್ರಮದ ಜೊತೆಗೆ ಮೊದಲ ದಿನವೇ ಚಿತ್ರಕ್ಕೆ ಅಭಿಮಾನಿಗಳಿಂದ ಅದ್ಧೂರಿ ವೆಲ್ ಕಮ್ ಸಿಕ್ಕಿದೆ. ತಮಟೆ ಬಡಿದು, ಕುಣಿದು ಕುಪ್ಪಳಿಸಿದ ಫ್ಯಾನ್ಸ್, ಮತ್ತೊಂದೆಡೆ ಟಿಕೆಟ್ ಗಾಗಿ ಸಾಲು ಸಾಲುಗಿ ಜನರು ನಿಂತುಕೊಂಡಿದ್ದರು.ಅಭಿಮಾನಿಗಳ ಜೊತೆ ಸಿನಿಮಾ ನೋಡಲು ಥಿಯೇಟರ್ ಗೆ ಹಲವು ಪೋಷಕ ಪಾತ್ರಧಾರಿಗಳು ಆಗಮಿಸಿದ್ದರು.
ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿರುವ ಕಸ್ತೂರಿ ಮಹಲ್ ಸಿನಿಮಾ.ರಾಜ ಮನೆತನದ ಒಂದು ಹುಡಗಿ ತನ್ನ ಪ್ರೀತಿಗಾಗಿ ಏನೆಲ್ಲ ಮಾಡಲು ಸಾದ್ಯ… ಹಾಗೂ ತನ್ನ ಪ್ರೇಮಕ್ಕೆ ಆಗಿರುವ ಅನ್ಯಾಯ ಸೇಡು ಅವಳು ಆತ್ಮವಾಗಿ ಕಾಡುವ ಜೀವಂತ ಕಥೆ ಎನ್ನಬಹುದು. ಕನ್ನಡ ಚಿತ್ರರಂಗದಲ್ಲಿ ಬಹಳ ದಿನಗಳ ನಂತರ ಕಾಣಿಸಿಕೊಂಡ ಹಾರರ್ ಸಿನಿಮಾ ಇದಾಗಿದೆ.ನೋಡುಗರನ್ನ ಸೆಳೆಯುವ ಕಥಾಹಂದರವನ್ನ ಒಳಗೊಂಡಿದೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada