ಒಂದ್ಕಡೆ ಸಿಸಿಎಲ್ ಆದರೆ, ಇನ್ನೊಂದು ಕಡೆ ಕೆಸಿಸಿ ಪಂದ್ಯಾವಳಿಗಳು ನಡೆಯಲಿವೆ.

ಸಿನಿಮಾರಂಗದಲ್ಲೂ ಈಗ ಸೆಲೆಬ್ರೆಟಿ ಕ್ರಿಕೆಟ್ ಜ್ವರ ಜೋರಾಗಿದೆ. ಒಂದ್ಕಡೆ ಸಿಸಿಎಲ್ ಆದರೆ, ಇನ್ನೊಂದು ಕಡೆ ಕೆಸಿಸಿ ಪಂದ್ಯಾವಳಿಗಳು ನಡೆಯಲಿವೆ. ಈಗಾಗಲೇ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ಸಿಸಿಎಲ್ ಮತ್ತೆ ಆರಂಭ ಆಗಿದೆ. ಈಗಾಗಲೇ ಕಳೆದ ಶನಿವಾರ ಹಾಗೂ ಭಾನುವಾರ ಪಂದ್ಯಗಳು ಪಂದ್ಯಗಳು ನಡೆದಿವೆ.ಭಾರತೀಯ ಚಿತ್ರರಂಗದ ಎಂಟು ತಂಡಗಳು ಈ ಸಿಸಿಎಲ್ ಪಂದ್ಯಾವಳಿಯಲ್ಲಿ ಭಾಗವಹಿಸಿವೆ. 2023ರ ಸಿಸಿಎಲ್ ಕಪ್ ಅನ್ನು ಗೆಲ್ಲವು ಎಂಟೂ ತಂಡಗಳು ಅಖಾಡಕ್ಕೆ ಇಳಿದಿವೆ. ಕ್ರಿಕೆಟ್ ಜೊತೆ ಜೊತೆಗೆ ಮನರಂಜನೆಯನ್ನೂ ನೀಡುವ ಈ ಲೀಗ್ 2011ರಲ್ಲಿ ಶುರುವಾಗಿತ್ತು. ಭಾರತದ ಪ್ರಮುಖ ಚಿತ್ರರಂಗದ ಕಲಾವಿದರನ್ನು ಒಟ್ಟಿಗೆ ಸೇರಿಸುವ ಪ್ರಯತ್ನ ಇದಾಗಿತ್ತು. ಕೋವಿಡ್‌ ಕಾರಣದಿಂದ ಈ ಲೀಗ್ ಕೆಲವು ದಿನಗಳು ನಿಂತಿತ್ತು. ಈಗ ಮತ್ತೆ ಆರಂಭ ಆಗಿದೆ.2023 ಸಾಲಿನ ಸಿಸಿಎಲ್ ಈಗಾಗಲೇ ಶುರುವಾಗಿದೆ. ನಿರಂತರವಾಗಿ ಮುಂದಿನ ಶನಿವಾರ ಹಾಗೂ ಭಾನುವಾರ ಎರಡು ದಿನಗಳ ಕಾಲ ತಾರೆಯರು ಮೈದಾನಕ್ಕಿಳಿದು ಕ್ರಿಕೆಟ್ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಈ ಬಾರಿ ಯಾವ ತಂಡ ಅಖಾಡಕ್ಕಿಳಿದಿದೆ? ಕರ್ನಾಟಕ ಬುಲ್ಡೋಜರ್ ಯಾವ ಸ್ಥಾನದಲ್ಲಿದೆ? ಯಾವ ತಂಡ ಎಷ್ಟು ಪಂದ್ಯ ಗೆದ್ದಿದೆ? ಮುಂದಿನ ಪಂದ್ಯಗಳು ಎಲ್ಲೆಲ್ಲಿ ನಡೆಯುತ್ತವೆ ಅನ್ನೋದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.2023 ಸಿಸಿಎಲ್‌ನಲ್ಲಿ ಮುಂಬೈ ಹೀರೋಸ್, ಕರ್ನಾಟಕ ಬುಲ್ಡೋಜರ್ಸ್, ಚೆನ್ನೈ ರಿನೋಸ್, ತೆಲುಗು ವಾರಿಯರ್ಸ್, ಕೆರಳ ಸ್ಟ್ರೈಕರ್ಸ್, ಬೆಂಗಾಲ್ ಟೈಗರ್ಸ್, ಪಂಜಾಬ್ ದೇ ಶೇರ್,ಭೋಜ್ಪುರಿ ದಬಾಂಗ್ಸ್ ಒಟ್ಟು ಎಂಟು ತಂಡಗಳು ಭಾಗವಹಿಸುತ್ತಿವೆ. ಈ ಎಂಟೂ ತಂಡಗಳು ಪ್ರತಿ ಶನಿವಾರ ಹಾಗೂ ಭಾನುವಾರ ಸುಮಾರು ಒಟ್ಟು 19 ಪಂದ್ಯಗಳನ್ನು ಆಡುತ್ತಿದೆ. ಫೈನಲ್ ಪಂದ್ಯ ಮಾರ್ಚ್ 19ರಂದು ನಡೆಯಲಿದೆ. ಸುದೀಪ್, ಸೊಹೇಲ್ ಖಾನ್, ರಿತೇಶ್ ದೇಶ್‌ಮುಖ್, ಸುನೀಲ್ ಶೆಟ್ಟಿ, ಅಖಿಲ್ ಅಕ್ಕಿನೇನಿ ಸೇರಿದಂತೆ ಭಾರತೀಯ ಚಿತ್ರರಂಗ ದಿಗ್ಗಜರು ಅಖಾಡಕ್ಕಿಳಿದು ಬ್ಯಾಟ್ ಬೀಸುತ್ತಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಿರುಪತಿ ಬಾಲಾಜಿ ದರ್ಶನ ಪಡೆಯಲು ಮುಂಬೈನಿಂದ ತಿರುಪತಿ ರೈಲು ಪ್ರವಾಸ ಪ್ಯಾಕೇಜ್ ಅನ್ನು ಭಾರತೀಯ ರೈಲ್ವೆ ಪ್ರಾರಂಭಿಸಿದೆ ಇಲ್ಲಿ ಇದೆ ಮಾಹಿತಿ !

Wed Feb 22 , 2023
ಮುಂಬೈ, ಫೆಬ್ರವರಿ 21: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಲು ಯೋಜಿಸುತ್ತಿರುವ ಮುಂಬೈನ ಭಕ್ತರು ಈಗ ಮತ್ತೊಂದು ಆರಾಮದಾಯಕ ಆಯ್ಕೆಯನ್ನು ಹೊಂದಿದ್ದಾರೆ. ತಿರುಪತಿ ಬಾಲಾಜಿ ದರ್ಶನ ಪಡೆಯಲು ಮುಂಬೈನಿಂದ ತಿರುಪತಿ ರೈಲು ಪ್ರವಾಸ ಪ್ಯಾಕೇಜ್ ಅನ್ನು ಭಾರತೀಯ ರೈಲ್ವೆ ಪ್ರಾರಂಭಿಸಿದೆ. ಹೆಸರಾಂತ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲು ‘ತಿರುಪತಿ ಬಾಲಾಜಿ ದರ್ಶನ’ ಎಂಬ ರೈಲ್ ಟೂರ್ ಪ್ಯಾಕೇಜ್ ಅನ್ನು ಭಾರತೀಯ ರೈಲ್ವೆ ನೀಡಿದೆ. ಮುಂಬೈನಿಂದ […]

Advertisement

Wordpress Social Share Plugin powered by Ultimatelysocial