ಪ್ರತಿದಿನ ಮಾಲೂರಿನ ಜನತೆ ಧೂಳಿನಲ್ಲಿ ನರಳಾಟ,
ಧೂಳು ತುಂಬಿದ ರಸ್ತೆಯಲ್ಲಿ ಪ್ರಯಾಣ ಮಾಡಲು ಬೇಸತ್ತ ಜನತೆ,
ಮನೆಯಿಂದ ಹೊರಗೆ ಹೋದ್ರೆ ಮೈ, ಬಟ್ಟೆ, ಕಣ್ಣು ತುಂಬಾ ಧೂಳು,
ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧ ಜನ ಅಸಮಾಧಾನ,
ಮಾಲೂರು ಪಟ್ಟಣದ ಮಾಸ್ತಿ ರಸ್ತೆ, ರೈಲ್ವೆ ಬ್ರಿಡ್ಜ್ ರಸ್ತೆಯವರಿಗೆ ಡಾಂಬರೀಕರಣ ಕೊರತೆ,
ಅವೈಜ್ಞಾನಿಕವಾಗಿ ರಸ್ತೆಯನ್ನು ಕಿತ್ತು ಹಾಕಿರೊ PWD ಅಧಿಕಾರಿಗಳು,
ಬಹುಚಕ್ರ ವಾಹನಗಳ ಸಂಚಾರದಿಂದ ಧೂಳು ಮೇಲೇಳುತ್ತಿದೆ,
ರಸ್ತೆಯಲ್ಲಿ ಸಂಚರಿಸಲು ಬೈಕ್ ಸವಾರರು ಹಾಗೂ ಪದಚಾರಿಗಳು ಪರದಾಟ,
ರಸ್ತೆ ಅಗಲೀಕರಣ ಕಾಮಗಾರಿ ಆರಂಭಗೊಂಡು ನಾಲ್ಕೈದು ತಿಂಗಳು ಕಳೆದು ಕಾಮಗಾರಿ ಪೂರ್ಣಗೊಂಡಿಲ್ಲ,
ಜನತೆಗೆ ಪ್ರತಿನಿತ್ಯ ಧೂಳಿನಲ್ಲೇ ಪ್ರಯಾಣ ಬೆಳೆಸುವ ಅನಿವಾರ್ಯ,
ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿ,
ರಸ್ತೆಯ ಅವ್ಯವಸ್ಥೆ ಕಂಡು PWD ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿರುವ ಜನತೆ,
ಧೂಳಿನಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ,
ರಸ್ತೆ ಬದಿಯ ಹೋಟೆಲ್ ಗಳು ಧೂಳು ಆವರಿಸಿಕೊಳ್ಳುತ್ತಿವೆ,
ತಿನ್ನೊ ಅನ್ನಕ್ಕು ಮಣ್ಣು ಹಾಕುತ್ತಿರೊ PWD ಅಧಿಕಾರಿಗಳು, ಗುತ್ತಿಗೆದಾರರು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: