ಕನ್ನಡ ನಾಡಲ್ಲಿ ಕನ್ನಡಕ್ಕೆ ಬೆಲೆ ಇಲ್ಲದಂತಾಗಿದ್ದು, ಬೆಂಗಳೂರಿಬ ಪಬ್ ಒಂದರಲ್ಲಿ ಕನ್ನಡ ಸಾಂಗ್ ಹಾಕಿ ಎಂದು ಕೇಳಿದಕ್ಕೆ ಹಲ್ಲೆ ಮಾಡಲಾಗಿದೆ.ಕೋರಮಂಗಲ 80 ಫೀಟ್ ರಸ್ತೆಯಲ್ಲಿರು ಬದ್ಮಾಷ್ ಪಬ್ನಲ್ಲಿ ತಡರಾತ್ರಿ 12.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಕನ್ನಡ ಹಾಡು ಹಾಕಿ ಎಂದಿದ್ದಕ್ಕೆಯುವತಿ ಮೇಲೆ ಹಲ್ಲೆ ಮಾಡಿದ್ದಾನೆ. ಪಬ್ ಡಿಜೆ ಸಿದ್ಧಾರ್ಥ್@ಅಪೋಸಿಟ್, ಸಮಿತಾ, ಆಕೆಯ ಸಹೋದರ ನಂದಕಿಶೋರ್ ಮೇಲೆ ಹಲ್ಲೆ ನಡೆಸಿದ್ದಾನೆ.ಸಮಿತಾ ನಿನ್ನೆ ರಾತ್ರಿ ಬರ್ತ್ ಡೇ ಆಚರಿಸಲು ಪಬ್ಗೆ 15 ಮಂದಿ ಸ್ನೇಹಿತರ ಜೊತೆ ರಾತ್ರಿ 9ರ ಸುಮಾರಿಗೆ ಹೋಗಿದ್ದಾರೆ.ಕನ್ನಡ ಹಾಡು ಹಾಕುವಂತೆ ಡಿಜೆ ಬಳಿ ನಾಲ್ಕೈದು ಬಾರಿ ಕೇಳಿದ್ದಾರೆ. ಡಿಜೆಗಳು ತೆಲುಗು, ತಮಿಳು, ಹಿಂದಿ ಹಾಡು ಹಾಕಿದ್ದು, ಕನ್ನಡ ಹಾಡು ಹಾಕಲ್ಲ.. ಬೇಕಿದ್ರೆ ಹೊರಗಡೆ ಹೋಗಿ ಎಂದು ಸಮಿತಾ, ನಂದಕಿಶೋರ್ ಕಾಲರ್ ಹಿಡಿದು ಡಿಜೆ ಅವಾಜ್ ಹಾಕಿದ್ದಾನೆ. ಈ ವೇಳೆ ಸಮಿತಾ ಮತ್ತು ಡಿಜೆ ಟೀಮ್ ನಡುವೆ ವಾಗ್ವಾದ ನಡೆದಿದ್ದು, ತಳ್ಳಾಡಿ ಹಲ್ಲೆ ಮಾಡಿದ್ದಾರೆಂದು ಸಮಿತಾ ಸ್ನೇಹಿತರ ಆರೋಪ ಮಾಡುತ್ತಿದ್ದಾರೆ. ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಕನ್ನಡ ಹಾಡು ಕೇಳಿದ್ದಕ್ಕೆ ಕನ್ನಡ ನೆಲದಲ್ಲೇ ಹಲ್ಲೆಯಅಗಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada