ಕೊರಟಗೆರೆ :- ಪಟ್ಟಣದ ಮದುಗಿರಿ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ತಡರಾತ್ರಿ ಖತರ್ನಾಕ್ ಕಳ್ಳರು ದೇವಸ್ಥಾನದ ಆವರಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾ ಗಳ ದಿಕ್ಕನ್ನ ಬದಲಿಸಿ ಬಾಗಿಲ ಬೀಗವನ್ನು ಮುರಿದು ದೇವರ ಮಂದಿದ್ದ ಎರಡು ಉಂಡಿಗಳನ್ನು ಕಳ್ಳತನ ಮಾಡಿದ್ದಾರೆ…
ನಂತರ ಹುಂಡಿಗಳನ್ನು ದೇವಸ್ಥಾನದ ಮುಂದಿರುವ ಖಾಲಿ ಜಾಗದಲ್ಲಿ ಹುಂಡಿಗಳ ಬೀಗವನ್ನು ಮುರಿದು ಹಣವನ್ನು ತೆಗೆದುಕೊಂಡು ಹುoಡಿಗಳನ್ನು ಅಲ್ಲಿಯೇ ಬಿಟ್ಟು ಪರರಿಯಾಗಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ…
ದೇವಸ್ಥಾನದ ಆಡಳಿತ ಮಂಡಳಿ ಹೇಳುವಂತೆ ಸುಮಾರು ಮೂರು ತಿಂಗಳಿಂದ ಹುಂಡಿ ಹಣವನ್ನು ತೆಗೆದಿರಲಿಲ್ಲ ಸುಮಾರು 80,000 ಹಣವಿತ್ತು ಎಂದು ತಿಳಿಸಿದ್ದಾರೆ..
ವಿಷಯ ತಿಳಿದ ಕೊರಟಗೆರೆಯ ಪೊಲೀಸ್ ಠಾಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ…
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: