ಬೈಲಹೊಂಗಲ ಪಟ್ಟಣದ ಗಣಾಚಾರಿ ಕಲ್ಯಾಣ ಮಂಟಪದ ಪೃಥ್ವಿ ಉದ್ಯಾನವನದಲ್ಲಿ ಡಿ.4 ರಂದು ನಗೆಹಬ್ಬ ಕಾರ್ಯಕ್ರಮ ನಡೆಯಲಿದೆ ಎಂದು ಕಾಡಾ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ ತಿಳಿಸಿದರು
ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಡಾಕ್ಟರ್ ವಿಶ್ವನಾಥ್ ಪಾಟೀಲ್ ಅಭಿಮಾನಿ ಬಳಗದಿಂದ ಡಿ. 4ರಂದು ಸಂಜೆ 5:30ಕ್ಕೆ ಬೈಲಹೊಂಗಲ ಪಟ್ಟಣದ ಗಣಾಚಾರಿ ಕಲ್ಯಾಣ ಮಂಟಪದ ಪೃಥ್ವಿ ಉದ್ಯಾನವನದಲ್ಲಿ ಹಾಸ್ಯ ಕಲಾವಿದ ಪ್ರಾಣೇಶ್ ತಂಡದವರಿಂದ ನಗೆ ಹಬ್ಬ ಸಮಾರಂಭ ನಡೆಯಲಿದೆ,ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆಯ ಸಂಯುಕ್ತ ಆಶ್ರಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಕೆಗೆ ಸೂಕ್ತ ಡಿಜಿಟಲ್ ಕೈಪಿಡಿಯಾಗಿರುವ ಮಾಸ್ಟರ್ ಮೈಂಡ್ ಆನ್ಲೈನ್ ಪತ್ರಿಕೆಯ ತರಬೇತಿ ಕ್ಲಾಸುಗಳಿಗೆ ಚಾಲನೆ ನೀಡಲಾಗುವುದು.
ಮುಖ್ಯ ಅತಿಥಿಗಳಾಗಿ ಕೃಷಿ ರತ್ನ ಪ್ರಶಸ್ತಿ ಪುರಸ್ಕೃತರಾದ ಡಾ. ಖಾದರ್ ಅಲಿ ಅವರಿಂದ ಭಾರತದ ಸಿರಿಧಾನ್ಯಗಳ ಕುರಿತು ಉಪನ್ಯಾಸ ನಡೆಯಲಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: