ಉಡುಪಿ: ಅಕಾಲಿಕ ಮಳೆಯಿಂದಾಗಿ ಭಾರೀ ಹೆಚ್ಚಳ ಕಂಡಿದ್ದ ತರಕಾರಿ ಬೆಲೆ ಈಗ ಕೊಂಚ ಇಳಿಮುಖವಾಗುತ್ತಿದ್ದರೂ ಕೆಲವು ತರಕಾರಿಗಳ ಬೆಲೆ ಮತ್ತಷ್ಟು ಏರಿದೆ.
ಕೊತ್ತಂಬರಿ ಸೊಪ್ಪು, ನುಗ್ಗೆಕಾಯಿ ದರ ಶತಕ ದಾಟಿದೆ. ಕೊತ್ತಂಬರಿ ಸೊಪ್ಪಿಗೆ 150 ರೂ.
ಇದ್ದರೆ ನುಗ್ಗೆಕಾಯಿ ದರ 120 ರೂ. ಇದೆ. ಒಮ್ಮೆಲೆ ಏರಿಕೆ ಕಂಡಿದ್ದ ಟೊಮೇಟೋ ದರ ಈಗ 70 ರೂ.ಗಳಿಗೆ ಬಂದು ನಿಂತಿದೆ.
ಪ್ರಸ್ತುತ ಕರಾವಳಿಗೆ ನಾಸಿಕ್ನಿಂದ ಟೊಮೇಟೊ ಆವಕವಾಗುತ್ತಿದೆ.
ಅಲಸಂಡೆ ಕೆ.ಜಿ.ಗೆ 90 ರೂ., ಬೀನ್ಸ್ 70 ರೂ., ಬೆಂಡೆಕಾಯಿ 45-50 ರೂ., ಹೀರೆ 60-70 ರೂ., ಕ್ಯಾರೆಟ್ 60 ರೂ., ಮೂಲಂಗಿ 40 ರೂ. ದರವಿದೆ.
ಇವುಗಳ ದರ ಇಳಿಕೆ
ಪ್ರಸ್ತುತ ದರ ಇಳಿಕೆಯಾಗಿರುವುದು ನಿಂಬೆಹಣ್ಣು, ಈರುಳ್ಳಿಗೆ ಮಾತ್ರ. ಈರುಳ್ಳಿ ದರ ಕೆ.ಜಿ.ಗೆ 15-20 ರೂ.ಗಳಿದ್ದರೆ ನಿಂಬೆಹಣ್ಣಿಗೆ 10 ರೂ. ಇದ್ದುದು 5 ರೂ.ಗಳಿಗೆ ಇಳಿದಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada