ಕೆ. ಪಿ. ರಾವ್ ಭಾರತೀಯ ಭಾಷೆಗಳು ಕಂಪ್ಯೂಟರಿನಲ್ಲಿ ಬೆಳಕು ಕಾಣುವುದಕ್ಕೆ ಪ್ರಮುಖ ಕೊಡುಗೆದಾರರಾದವರು.

 

ಕೆ. ಪಿ. ರಾವ್    ಭಾರತೀಯ ಭಾಷೆಗಳು ಕಂಪ್ಯೂಟರಿನಲ್ಲಿ ಬೆಳಕು ಕಾಣುವುದಕ್ಕೆ ಪ್ರಮುಖ ಕೊಡುಗೆದಾರರಾದವರು ನಮ್ಮ ಕನ್ನಡಿಗರಾದ ಕೆ. ಪಿ. ರಾವ್. ಇಂದಿನ ಕಂಪ್ಯೂಟರ್ ಯುಗದಲ್ಲಿ ನಾವು ನೀವುಗಳೆಲ್ಲಾ ಕನ್ನಡದಂತಹ ಭಾಷೆಗಳನ್ನು ಅತ್ಯಂತ ಸುಲಭವಾಗಿ ಉಪಯೋಗಿಸಲು ಸಾಧ್ಯವಾಗಿರುವುದು ಕೆ. ಪಿ. ರಾಯರು ಮಾಡಿದ ಭಗೀರಥ ಪ್ರಯತ್ನದ ದೆಸೆಯಿಂದಾಗಿದೆ.ಕಿನ್ನಿಕಂಬಳ ಪದ್ಮನಾಭ ರಾವ್ ಅವರು 1940ರ ಫೆಬ್ರುವರಿ 29ರಂದು ಮಂಗಳೂರು ಬಳಿಯ ಕಿನ್ನಿಕಂಬಳ ಗ್ರಾಮದಲ್ಲಿ ಜನಿಸಿದರು. ಕಿನ್ನಿಕಂಬಳದಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ನಡೆಸಿದ ರಾವ್ ಅವರು ಮುಂದೆ ಮಂಗಳೂರಿನಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು ವ್ಯಾಸಂಗ ನಡೆಸಿ 1959ರ ವರ್ಷದಲ್ಲಿ ಮಂಗಳೂರಿನ ಅಲೋಶಿಯಸ್ ಕಾಲೇಜಿನಿಂದ ಬಿ.ಎಸ್ಸಿ ಪದವಿ ಪಡೆದರು.ಮೊದಲಿಗೆ ಮುಂಬಯಿಯ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್(ಟಿಐಎಫ್‌ಆರ್)ನ ಅಣುಶಕ್ತಿ ವಿಭಾಗದಲ್ಲಿ ಸಂಶೋಧಕರಾಗಿ ಉದ್ಯೋಗ ಪ್ರಾರಂಭಿಸಿದ ಕೆ. ಪಿ. ರಾವ್ ಅವರು 1970ರ ದಶಕದಲ್ಲಿ ಟಾಟಾ ಪ್ರೆಸ್ನಲ್ಲಿ ತಾಂತ್ರಿಕ ನಿರ್ದೆಶಕರಾಗಿದ್ದರು. ಕಂಪ್ಯೂಟರುಗಳು ಅದಾಗ ತಾನೇ ಮುದ್ರಣ ಕ್ಷೇತ್ರಕ್ಕೆ ಕಾಲಿಡತೊಡಗಿದ್ದ ಕಾಲವದು. ಆ ಸಮಯದಲ್ಲಿ ಇರಾವತಂ ಮಹಾದೇವನ್ ಅವರು ಸಿಂಧೂ ಲಿಪಿಯನ್ನು ಅಧ್ಯಯನ ಮಾಡಿ ತಮ್ಮ ಪುಸ್ತಕವನ್ನು ಮುದ್ರಿಸುವ ಇಚ್ಛೆಯಿಂದ ಅಲ್ಲಿಗೆ ಬಂದರು. ಈ ಪುಸ್ತಕಕ್ಕಾಗಿ ಇಂಗ್ಲೀಷಿನ ಅಕ್ಷರಗಳ ಜೊತೆಗೆ ಸಿಂಧೂ ಲಿಪಿಯನ್ನೂ ಮುದ್ರಿಸಲು ಯಂತ್ರಗಳನ್ನು ಸಿದ್ಧಗೊಳಿಸಬೇಕಾದ ಸವಾಲು ಕೆ. ಪಿ. ರಾವ್ ಅವರಿಗೆ ಎದುರಾಯಿತು. ಕೆ. ಪಿ. ರಾವ್ ಅವರ ಸೃಜನಶೀಲ ಪ್ರಯತ್ನದಿಂದಾಗಿ ಸಿಂಧೂ ಲಿಪಿ ಕಂಪ್ಯೂಟರಿನಲ್ಲಿ ಮುದ್ರಣ ಕಂಡ ಪ್ರಥಮ ಭಾರತೀಯ ಲಿಪಿ ಎನಿಸಿತು.
ಕನ್ನಡದ ಬಗ್ಗೆ ಪ್ರೀತಿ ಹೊಂದಿದವರಾದ ಕೆ. ಪಿ. ರಾವ್ ಅವರು ಸಿಂಧೂ ಲಿಪಿಗೆ ಉಪಯೋಗಿಸಿದ ವಿಧಾನವನ್ನೇ ಕನ್ನಡ ಲಿಪಿಗೂ ಬಳಸಿದರಲ್ಲದೆ, ಸಿಂಧೂ ಭಾಷೆಗೆ ಉಪಯೋಗಿಸಿದ ಯಂತ್ರವನ್ನೇ ಬಳಸಿ ಕನ್ನಡ ಮುದ್ರಣ ಕಾರ್ಯದಲ್ಲೂ ಯಶಸ್ಸು ಸಾಧಿಸಿದರು.ಕೆ. ಪಿ. ರಾವ್ ಅವರು ಸರಳವಾಗಿರುವ ಇಂಗ್ಲಿಷ್ ಲಿಪಿ ಕೀಲಿಮಣೆಗೆ ಕನ್ನಡದಂತಹ ಕ್ಲಿಷ್ಟಭಾಷಾ ಪದ್ಧತಿಯನ್ನು ಸುಲಭವಾಗಿ ಉಪಯೋಗಿಸುವಂತೆ ಅಳವಡಿಸಿರುವುದು ಯಾರಿಗೇ ಆಗಲೀ ಮೆಚ್ಚುಗೆ ತರುವಂತಹ ಶ್ಲಾಘನೀಯ ಕಾರ್ಯವಾಗಿದೆ. ಇದನ್ನೇ ಕನ್ನಡ ಗಣಕ ಪರಿಷತ್ತು ಸಣ್ಣಪುಟ್ಟ ಬದಲಾವಣೆಗಳೊಂದಿಗೆ ತನ್ನ ‘ನುಡಿ’ ತಂತ್ರಾಶದಲ್ಲಿ ಅಳವಡಿಸಿಕೊಂಡಿತಲ್ಲದೆ, ಇದೇ ಕರ್ನಾಟಕ ಸರಕಾರದ ಅಧಿಕೃತ ಕೀಲಿಮಣೆ ವಿನ್ಯಾಸವೆಂದೂ ರೂಢಿಗೆ ಬಂತು. ಈ ವಿಶಿಷ್ಟ ಸಾಧನೆ ಇತರ ಭಾಷೆಗಳ ಉಪಯೋಗಕ್ಕೂ ಅನುವುಗೊಂಡಿತು.ಕೀಲಿಮಣೆ ವಿನ್ಯಾಸ ರೂಪಿಸುವುದರ ಜೊತೆಗೆ ಡಾಟ್ಮ್ಯಾಟ್ರಿಕ್ಸ್ ಪ್ರಿಂಟರಿನಲ್ಲಿ ಭಾರತೀಯ ಭಾಷೆಗಳನ್ನು ಮುದ್ರಿಸಲು ಅಗತ್ಯವಾದ ಡಾಟ್‌ಮ್ಯಾಟ್ರಿಕ್ಸ್ ಫಾಂಟುಗಳನ್ನು ಸೃಷ್ಟಿಸಿದವರೂ ಕೆ. ಪಿ. ರಾವ್ ಅವರೇ. ಜೊತೆಗೆ 1986ರ ವರ್ಷದಲ್ಲಿ ಈ ಫಾಂಟುಗಳನ್ನು ಉಪಯೋಗಿಸಲು ಅಗತ್ಯವಾದ ವರ್ಡ್ ಪ್ರೋಸೆಸರ್ ತಂತ್ರಾಶವನ್ನು ಸೃಜಿಸಿ ಅದಕ್ಕೆ ತಮ್ಮ ಗುರುಗಳಾದ ಸೇಡಿಯಾಪು ಕೃಷ್ಣಭಟ್ಟರ ಗೌರವಾರ್ಥ ‘ಸೇಡಿಯಾಪು ತಂತ್ರಾಂಶ’ ಎಂದು ಹೆಸರಿಸಿದರು. ಕಂಪ್ಯೂಟರ್ ಬಳಕೆ ಅಷ್ಟೊಂದು ವ್ಯಾಪಕವಾಗಿಲ್ಲದ ಅಂದಿನ ದಿನಗಳಲ್ಲಿ ‘ಸೇಡಿಯಾಪು ತಂತ್ರಾಂಶ’ ಅತ್ಯಂತ ಮಹತ್ವಪೂರ್ಣದ್ದಾಗಿತ್ತು. ತಮ್ಮ ಈ ಸೃಜನೆಯನ್ನು ಯಾವುದೇ ರೀತಿಯಲ್ಲೂ ವೈಯಕ್ತಿಕ ಲಾಭಕ್ಕೆ ಬಳಸಲಿಚ್ಛಿಸದ ರಾವ್ ಅವರು ಅದನ್ನು ಉಚಿತವಾಗಿ ಹಂಚಿಬಿಟ್ಟರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಖರ್ಗೆ ಕುರಿತ ಮೋದಿ ಹೇಳಿಕೆ ಕೀಳು ಮಟ್ಟದ ಪ್ರಚಾರ; ಎಂಬಿ ಪಾಟೀಲ್ ಕಿಡಿ!

Wed Mar 1 , 2023
ವಿಧಾನಸಭಾ ಚುನಾವಣೆಗೆ ಅನ್ನ, ಅಕ್ಷರ, ಆರೋಗ್ಯ, ಆಶ್ರಯ, ಅಭಿವೃದ್ಧಿ ಎಂಬುದೇ ನಮ್ಮ ಮುಖ್ಯ ಘೋಷಣೆಯಾಗಿದೆ. ಈ ಐದು ಅಂಶಗಳೊಂದಿಗೆ ಪ್ರಚಾರ ಆರಂಭಿಸುತ್ತೇವೆ ಎಂದು ಎಂಬಿ ಪಾಟೀಲ್ ತಿಳಿಸಿದರು.ಬೆಂಗಳೂರು: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಛತ್ತೀಸ್​ಗಢ ಅಧಿವೇಶನದಲ್ಲಿ ಕೊಡೆ ಹಿಡಿದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ  ಹೇಳಿರುವುದು ಕೀಳು ಮಟ್ಟದ ಪ್ರಚಾರದ ಗಿಮಿಕ್ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಟೀಕಿಸಿದರು. ಬಿಜೆಪಿ ಹಿರಿಯ ನಾಯಕ ಎಲ್​​ಕೆ […]

Advertisement

Wordpress Social Share Plugin powered by Ultimatelysocial