ಬೆಂಗಳೂರು : ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ನಡುವೆ ಆಂತರಿಕ ಹೊಂದಣಿಕೆ ಇದೆ. ಅವ್ರು ಈ ಸರ್ಕಾರವನ್ನ ಕಾನೂನುಬಾಹಿರವಾಗಿ ನಡೆಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಐಪಿಎಸ್ ಅಧಿಕಾರಿ ಪಿ.
ರವೀಂದ್ರನಾಥ್ ರಾಜೀನಾಮೆಗೆ ಕುರಿತು ಮಾತನಾಡಿದ ಮಾಜಿ ಸಿಎಂ, ‘ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ನಡುವೆ ಆಂತರಿಕ ಹೊಂದಣಿಕೆ ಇದೆ. ಅವ್ರು ಈ ಸರ್ಕಾರವನ್ನ ಕಾನೂನುಬಾಹಿರವಾಗಿ ನಡೆಸುತ್ತಿದ್ದಾರೆ. ಅದಕ್ಕಾಗಿಯೇ ನಾನು ಅವರ ರಾಜೀನಾಮೆಯನ್ನ ಅಂಗೀಕರಿಸಬೇಡಿ. ಆದ್ರೆ, ಅವರಿಗೆ ಫ್ರೀ ಹ್ಯಾಂಡ್ ನೀಡಿ ಎಂದು ಈ ಸರ್ಕಾರವನ್ನ ವಿನಂತಿಸಿದ್ದೇನೆ’ ಎಂದರು.
‘ನಕಲಿ ದಾಖಲೆಗಳ ಸಹಾಯದಿಂದ ಹಲವಾರು ಜನರು ಮೀಸಲಾತಿ ಪ್ರಯೋಜನವನ್ನ ಪಡೆಯುತ್ತಿದ್ದಾರೆ. ನಿಜವಾದ ಫಲಾನುಭವಿಗಳನ್ನು ಈ ಸರ್ಕಾರವು ನಿಜವಾಗಿಯೂ ನಿರಾಶೆಗೊಳಿಸುತ್ತಿದೆ. ಈ ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ಇದ್ದರೆ, ಅವ್ರ ಈ ರಾಜೀನಾಮೆಯನ್ನ ತಿರಸ್ಕರಿಸಲಿ’ ಎಂದು ಆಗ್ರಹಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada