ವಿಷ್ಣು ವಾಮನ್ ಶಿರ್ವಾಡ್ಕರ್ ಅವರು ಕುಸುಮಾಗ್ರಾಜ್ ಎಂಬ ಅವರ ಕಾವ್ಯನಾಮದಿಂದ ಜನಪ್ರಿಯರಾಗಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಇವರು ಮರಾಠಿ ಕವಿ, ನಾಟಕಕಾರ, ಕಾದಂಬರಿಕಾರ ಮತ್ತು ಸಣ್ಣ ಕಥೆಗಾರರಾಗಿ ಹೆಸರಾಗಿದ್ದವರು.ಕುಸುಮಾಗ್ರಜ್ 1912ರ ಫೆಬ್ರುವರಿ 27ರಂದು ನಾಸಿಕ್ನಲ್ಲಿ ಗಜಾನನ ರಂಗನಾಥ ಶಿರ್ವಾಡ್ಕರ್ ಆಗಿ ಜನಿಸಿದರು. ಅವರು 1930ರ ದಶಕದಲ್ಲಿ ಕೆಲವು ಕವನಗಳನ್ನು ಈ ಹೆಸರಿನಲ್ಲಿ ಪ್ರಕಟಿಸಿದ್ದರು. 1930ರ ದಶಕದಲ್ಲಿ ದತ್ತು ಸ್ವೀಕಾರದ ದೆಸೆಯಿಂದ ಅವರ ಹೆಸರು ವಿಷ್ಣು ವಾಮನ್ ಶಿರ್ವಾಡ್ಕರ್ ಎಂದು ಬದಲಾಯಿತು. ನಂತರ ಅವರು ‘ಕುಸುಮಾಗ್ರಜ್’ ಎಂಬ ಹೆಸರನ್ನು ಅಳವಡಿಸಿಕೊಂಡರು. ಕುಸುಮಾಗ್ರಜ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಿಂಪಲ್ಗಾಂವ್ನಲ್ಲಿ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ನಾಸಿಕ್ನ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ ಪಡೆದರು. ಮುಂಬೈ ವಿಶ್ವವಿದ್ಯಾನಿಲಯದಿಂದ ಮೆಟ್ರಿಕ್ಯುಲೇಷನ್ ಪಾಸಾದರು. ಅವರು ಕೊಲ್ಲಾಪುರದ ರಾಜಾರಾಂ ಕಾಲೇಜಿನೊಂದಿಗೆ ಸಂಬಂಧ ಹೊಂದಿದ್ದರು. ಖ್ಯಾತ ವಿಮರ್ಶಕ ಕೇಶವ ರಂಗನಾಥ್ ಶಿರ್ವಾಡ್ಕರ್ (1926-2018) ಅವರ ಕಿರಿಯ ಸಹೋದರ.ಶಿರ್ವಾಡ್ಕರ್ ಅವರು ನಾಸಿಕ್ನ ಎಚ್ಪಿಟಿ ಕಲಾ ಕಾಲೇಜಿನಲ್ಲಿದ್ದಾಗ ಅವರ ಕವಿತೆಗಳು ರತ್ನಾಕರ್ ಪತ್ರಿಕೆಯಲ್ಲಿ ಪ್ರಕಟವಾದವು. 1932ರಲ್ಲಿ, 20ನೇ ವಯಸ್ಸಿನಲ್ಲಿ, ಶಿರ್ವಾಡ್ಕರ್ ಅವರು ನಾಸಿಕ್ನ ಕಲಾರಾಮ್ ದೇವಾಲಯದಲ್ಲಿ ಅಸ್ಪೃಶ್ಯರಿಗೆ ಪ್ರವೇಶವನ್ನು ಅನುಮತಿಸುವ ಬೇಡಿಕೆಯನ್ನು ಬೆಂಬಲಿಸಲು ಸತ್ಯಾಗ್ರಹದಲ್ಲಿ ಭಾಗವಹಿಸಿದರು.
1933ರಲ್ಲಿ ಶಿರ್ವಾಡಕರ್ ಅವರು ‘ಧ್ರುವ ಮಂಡಲ’ವನ್ನು ಸ್ಥಾಪಿಸಿದರು ಮತ್ತು ‘ನವ ಮನು’ ಎಂಬ ಪತ್ರಿಕೆಯಲ್ಲಿ ಬರೆಯಲು ಪ್ರಾರಂಭಿಸಿದರು. ಅದೇ ವರ್ಷದಲ್ಲಿ ಅವರ ಮೊದಲ ಕವನ ಸಂಕಲನ ‘ಜೀವನಲಹರಿ’ ಪ್ರಕಟವಾಯಿತು. 1934ರಲ್ಲಿ, ಶಿರ್ವಾಡ್ಕರ್ ನಾಸಿಕ್ನ ಎಚ್ಪಿಟಿ ಕಾಲೇಜಿನಿಂದ ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: