ಬಿಜೆಪಿ ಬಿ.ಎಸ್ವೈ ಅವರನ್ನ ಯೂಸ್ ಅಂಡ್ ಥ್ರೋ ಮಾಡಿಕೊಂಡಿದೆ; ಲಕ್ಷ್ಮಣ್

ಬಿಜೆಪಿ ಯಡಿಯೂರಪ್ಪ ಅವರನ್ನು ಯೂಸ್ ಅಂಡ್ ಥ್ರೋ ತರ ಬಳಸಿಕೊಂಡಿದೆ. ಬಿಜೆಪಿ ಕೃತಜ್ಞತೆ ಇಲ್ಲದ ಸರ್ಕಾರ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಮಾತನಾಡಿ ಪರೋಕ್ಷವಾಗಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾರ ಬಗ್ಗೆ ಟೀಕಿಸಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ , ಮೇಲ್ಮಟ್ಟದಲ್ಲಿರುವ ಆ ಇಬ್ಬರಿದ್ದಾರಲ್ಲ ಅವರು ಮಾರ್ವಾಡಿಗಳು. ಅವರು ವ್ಯಾಪಾರ ದೃಷ್ಟಿಯಿಂದಲೇ ನೋಡ್ತಾರೆ. ಉಪಯೋಗಿಸಿಕೊಂಡ ಮೇಲೆ ಮೂಲೆ ಗುಂಪು ಮಾಡ್ತಾರೆ. ಯಡಿಯೂರಪ್ಪ ನವರು ರಿಮೋಟ್ ಕಂಟ್ರೋಲ್ ಅಷ್ಟೇ. ಅವರ ಮಗನಿಗೂ 100% ಟಿಕೆಟ್ ಕೊಡಲ್ಲ.ವೀರಶೈವರು ಈಗಲಾದ್ರೂ ಅರ್ಥ ಮಾಡಿಕೊಳ್ಳಿ ಎಂದು ಹೇಳಿದರು.

ಬಿಜೆಪಿವರು ನೀಚ ಕೆಲಸಕ್ಕೆ ಮುಂದಾಗಿದ್ದಾರೆ. ಕೊಡಗಿನಲ್ಲಿ ಮುಸ್ಲಿಂ ಯುವಕ ಹೆಸರಿನಲ್ಲಿ ಫೇಕ್ ಫೇಸ್ಬುಕ್ ಕ್ರಿಯೇಟ್ ಮಾಡಿದ್ದಾರೆ.ಅದರಲ್ಲಿ ಅಸಹ್ಯಕರವಾದ ಸಂದೇಶಗಳನ್ನ ಹರಿಬಿಟ್ಟಿದ್ದಾರೆ. ಫೇಕ್ ಫೇಸ್ಬುಕ್ ಕ್ರಿಯೇಟ್ ಮಾಡಿರೋದು ಬಿಜೆಪಿ ಮುಖಂಡನ ಪುತ್ರ. ಜಿಲ್ಲೆ ಬಿಜೆಪಿ ಉಪಾಧ್ಯಕ್ಷ ಪೊನ್ನಪ್ಪನ ಮಗ ದಿವಿನ್ ಬೂಪಯ್ಯ ಎಂಬುದು ತನಿಖೆಯಿಂದ ಗೊತ್ತಾಗಿದೆ. ಮುಸ್ಲಿಂ ಯುವಕ ಮಹಮದ್ ಅಸ್ಮಾಕ್ ಹೆಸರಿನಲ್ಲಿ ಫೇಕ್ ಫೇಸ್ ಬುಕ್. ಇವರು ಎಂಎಲ್ಸಿ ರವಿ ಕುಶಾಲಪ್ಪ, ಕೆಜಿ ಬೋಪಯ್ಯ ಮತ್ತು ಪ್ರತಾಪ್ ಸಿಂಹ ಅವರ ಆಪ್ತರಾಗಿದ್ದಾರೆ. ಇವರ ಕುಮ್ಮಕ್ಕಿನಿಂದ ಇಂತಹ ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಇವರ ಮೇಲೆ ಯಾಕೆ ಕೇಸ್ ದಾಖಲಾಗಿಲ್ಲ..? ಇದರ ಹಿಂದೆ ಇರುವ ಕುಮ್ಮಕ್ಕು ನೀಡುವ ಪ್ರತಾಪ್ ಸಿಂಹ, ಕೆಜಿ ಬೋಪಯ್ಯ, ಇವರನ್ನು ಬಂಧಿಸಬೇಕು. ಇವರು ಮುಸ್ಲಿಂ ಸಮುದಾಯವನ್ನೇ ಟಾರ್ಗೆಟ್ ಮಾಡಿ ದ್ವೇಷದ ರಾಜಕೀಯ ಮಾಡ್ತಾ ಇದ್ದಾರೆ ಎಂದು ಎಂ ಲಕ್ಷ್ಮಣ್ ಕಿಡಿಕಾರಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ನವರ ಮೇಲೆ ಆಪಾದನೆ ಬಂದರೆ ವಿಚಾರಣೆಯೇ ಮಾಡಬಾರದು.

Tue Jul 26 , 2022
ಶಿವಮೊಗ್ಗ: ಕಾಂಗ್ರೆಸ್ ನವರ ಮೇಲೆ ಆಪಾದನೆ ಬಂದರೆ ವಿಚಾರಣೆಯೇ ಮಾಡಬಾರದು. ಆದರೆ ಬಿಜೆಪಿಯವರ ಪ್ರಕರಣದಲ್ಲಿ ಕ್ಲೀನ್ ಚಿಟ್ ಬಂದರೆ ಕಾನೂನು ಬಾಹಿರ. ಇದು ಕಾಂಗ್ರೆಸ್ ಧೋರಣೆ. ಈ ರೀತಿ ಕುತಂತ್ರ ರಾಜಕಾರಣ ರಾಜ್ಯದಲ್ಲಿ ನಡೆಯುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮವಾಗಲು ಡಿಕೆಶಿ, ಸಿದ್ದರಾಮಯ್ಯ, ಜಮೀರ್ ಮೂರು ಜನ ಸಾಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆ ಮಾಡಿದರೆ ವಿಪಕ್ಷ ಬದುಕಿದೆ ಎಂದು ಗೊತ್ತಾಗುತ್ತದೆ. ಪ್ರತಿಭಟನೆ ಮಾಡಲಿಲ್ಲವಾದರೆ […]

Advertisement

Wordpress Social Share Plugin powered by Ultimatelysocial