LATEST UPDATES : ತಂದೆ ಸಾವಿನ ಸತ್ಯ ಸಹಿಸಲು ಆಗದೆ ಮಗಳು ಆತ್ಮಹತ್ಯೆ

ತಂದೆ ಸಾವಿನ ಸತ್ಯ ಸಹಿಸಲು ಆಗದೆ ಮಗಳು ಆತ್ಮಹತ್ಯೆ

ತಂದೆ ಸಾವಿನಿಂದ ಮನನೊಂದಿದ್ದ ಯುವತಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನಲ್ಲಿ ನಡೆದಿದೆ.

ಸ್ಪಂದನ (18) ಆತ್ಮಹತ್ಯೆ ಮಾಡಿಕೊಂಡ ಯುವತಿ. ಎನ್. ಆರ್.ಪುರದಲ್ಲಿ ಡಿಗ್ರಿ ಓದುತ್ತಿದ್ದ ಸ್ಪಂದನ ತಾಲೂಕಿನ ಬಾಳೆಕೊಪ್ಪ ಗ್ರಾಮದ ನಿವಾಸಿ.

ಕಳೆದ ಮೂರು ತಿಂಗಳ ಹಿಂದೆ ತಂದೆ ಮೃತಪಟ್ಟಿದ್ದು, ಈ ಘಟನೆಯಿಂದ ಮನನೊಂದಿದ್ದ ಸ್ಪಂದನ ಮೆಣಸೂರು ಗ್ರಾಮದ ಭದ್ರ ಹಿನ್ನೀರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ಎನ್. ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ನಂದಿನಿ ತುಪ್ಪ ತಿನ್ನುವ ಮುನ್ನ ಎಚ್ಚರ: ಡಾಲ್ಡಾ ಬೆರೆಸಿ ನಕಲಿ ತುಪ್ಪ ತಯಾರಿಸುತ್ತಿದ್ದ ಜಾಲ ಪತ್ತೆ!

Fri Dec 17 , 2021
ನಂದಿನಿ ಹೆಸರಿನಲ್ಲಿ ಡಾಲ್ಡಾ ಬೆರೆಸಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು MYSORE ಹೊರವಲಯದಲ್ಲಿ ಪತ್ತೆ ಮಾಡಿದೆ. ರಾಜ್ಯ ಸರಕಾರದ NANDINI ಬ್ರ್ಯಾಂಡ್ ಅನ್ನು ದುರ್ಬಳಕೆ ಮಾಡಿಕೊಂಡು ನಕಲಿ ತುಪ್ಪ ತಯಾರಿಸುತ್ತಿದ್ದ ಘಟಕವನ್ನು ಸಾಂಸ್ಕೃತಿಕ ನಗರಿ ಮೈಸೂರಿನ ಹೊರವಲಯದಲ್ಲಿ ಪತ್ತೆ ಹಚ್ಚಲಾಗಿದೆ. ಚಾಮುಂಡಿಬೆಟ್ಟ ಹಿಂಭಾಗದ ಹೊಸಹುಂಡಿ ಗ್ರಾಮದಲ್ಲಿ ಘಟಕದಲ್ಲಿ ಟನ್ ಗಟ್ಟಲೆ ನಕಲಿ ತುಪ್ಪ ಸಂಗ್ರಹಿಸಿದ್ದ ಗೋದಾಮು ಪತ್ತೆಯಾಗಿದೆ. ನಂದಿನಿ ಲೇಬಲ್ ಗಳ ಮುದ್ರಣ ಘಟಕವೂ ಪತ್ತೆಯಾಗಿದ್ದು, ನಂದಿನಿ ತುಪ್ಪಕ್ಕೆ […]

Advertisement

Wordpress Social Share Plugin powered by Ultimatelysocial