ಮಂಗಳೂರು :ನಿನ್ನೆ ಹತ್ಯೆಗೀಡಾದ ಪ್ರವೀಣ್ ಅಂತಿಮ ಯಾತ್ರೆ ವೇಳೆ ಅಮಾಯಕರ ಮೇಲೆ ಲಾಠಿಚಾರ್ಜ್ಗೆ ಆದೇಶಿಸಿದ ಹಾಗೂ ಲಾಠಿಚಾರ್ಜ್ ಮಾಡಿದ ಅಧಿಕಾರಿಗಳನ್ನು ತಕ್ಷಣ ಸಸ್ಪೆಂಡ್ ಮಾಡುವಂತೆ ವಿಶ್ವಹಿಂದೂಪರಿಷತ್ನ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್ ಗೃಹಮಂತ್ರಿಗಳಿಗೆ ಆಗ್ರಹಿಸಿದ್ದಾರೆ. ಅವರು
ಮಂಗಳೂರು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಪ್ರವೀಣ್ ಕೊಲೆ ನಡೆದು ಎರಡು ದಿನಗಳಾದರೂ ಆರೋಪಿಗಳ ಪತ್ತೆ ಹಚ್ಚಲು ಪೊಲೀಸ್ ಇಲಾಖೆ ವಿಫಲವಾಗಿದೆ.
ಆದ್ದರಿಂದ ಈ ಪ್ರಕರಣವನ್ನು ವಿಶೇಷ ತನಿಖಾ ದಳ (ಎಸ್ಐಟಿ) ರಚಿಸಿ ದಕ್ಷ ಎಸ್ಪಿ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂಬುವುದು ವಿಹೆಚ್ಪಿ ಹಾಗೂ ಬಜರಂಗದಳದ ಮುಖ್ಯಮಂತ್ರಿಯವರಿಗೆ ಆಗ್ರಹಿಸುತ್ತದೆ ಎಂದರು. ಜೊತೆಗೆ ನಿನ್ನೆ ಅಮಾಯಕರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಈ ಹಿಂದಿನ ಗಲಭೆಗಳಾದ ಈ ರೀತಿ ಲಾಠಿ ಚಾರ್ಜ್ ಆಗಿಲ್ಲ. ಒಬ್ಬ ಹಿರಿಯ ವ್ಯಕ್ತಿಯ ಮೇಲೂ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ನಿನ್ನೆಯ ಲಾಠಿಚಾರ್ಜ್ ಅನ್ನು ಅತ್ಯಂತ ಕಠಿಣ ಶಬ್ದಗಳಲ್ಲಿ ಖಂಡಿಸುತ್ತೇವೆ ಹಾಗೂ ಲಾಠಿಚಾರ್ಜ್ಗೆ ಆರ್ಡರ್ ನೀಡಿದ ಪೊಲೀಸ್ ಅಧಿಕಾರಿಯನ್ನು ತಕ್ಷಣ ಸಸ್ಪೆಂಡ್ ಮಾಡಬೇಕು ಎಂದು ಆಗ್ರಹಿಸಿದರು.
ಜೊತೆಗೆ ವಿಶ್ವಹಿಂದೂ ಪರಿಷತ್ ವತಿಯಿಂದ ರಾಜ್ಯಾದಾದ್ಯಂತ ನಾಳೆ ತಾಲೂಕು ಕೇಂದ್ರಗಳಲ್ಲಿ ವಿಹೆಚ್ಪಿ ಹಾಗೂ ಬಜರಂಗದಳದಿಂದ ಶ್ರದ್ದಾಂಜಲಿ ಸಭೆಗೆ ನಿರ್ಧಾರ ಮಾಡಲಾಗಿದೆ ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: