ಪದ್ಮಾ ಕುಮಟಾ ಪ್ರಥಮ ಚಿತ್ರ ಚೋಮನದುಡಿಯಲ್ಲಿಯೇ ಪ್ರತಿಭೆ ತೋರಿ ರಾಷ್ಟ್ರ ಪ್ರಶಸ್ತಿ ಪಡೆದವರು. ಕಣಗಾಲರ ‘ಫಲಿತಾಂಶ’ ಚಿತ್ರದಲ್ಲಿ ಅವರು ಜೈಜಗದೀಶ್ ಮುಂದೆ, “ಅವರೇ ಕಾಳು ಉಪ್ಪಿಟ್ಟು ತಂದಿದೀನಿ ತೊಗೊಳ್ಳಿ” ಅಂತ ಉತ್ಸಾಹದಿಂದ ನುಡಿಯುತ್ತ ಅಭಿನಯಿಸಿದ್ದು ಇನ್ನೂ ನೆನಪಲ್ಲಿದೆ. ಅವರು ಹಲವಾರು ಕಿರುತೆರೆಯ ಧಾರವಾಹಿಗಳಲ್ಲಿದ್ದರು. ಅಭಿನಯಿಸುವ ಸಂದರ್ಭದಲ್ಲೇ ನಿಧನರಾದ ಕರ್ಮಜೀವಿ. ಕೆಲವೊಂದು ಕಲಾವಿದರನ್ನು ಒಂದೆರಡು ಚಿತ್ರಗಳ ಕೆಲವೇ ನಿಮಿಷಗಳಲ್ಲಿ ಕಂಡಿದ್ದರೂ ಅವರು ಉಳಿಸುವ ನೆನಪು ಅಪಾರವಾದದ್ದು. ಅಂತಹ ಕಲಾವಿದರ ಸಾಲಿನಲ್ಲಿ ಪದ್ಮಾ ಕುಮಟ ಸಹಾ ಒಬ್ಬರು.ಪದ್ಮಾ ಕುಮಟಾ 2017 ವರ್ಷ ಈ ಸಮಯದಲ್ಲಿ ಲೋಕದಿಂದ ಅಸ್ತಮಿಸಿದರು. ಒಬ್ಬ ವ್ಯಕ್ತಿ ಜೀವನದಲ್ಲಿ ತಾನು ಮಾಡಿದ ಕೆಲಸ ಎಷ್ಟೇ ದೊಡ್ಡದಿರಲಿ ಚಿಕ್ಕದಿರಲಿ, ತೋರಿದ ಶ್ರದ್ಧೆ ಮಾತ್ರಾ ಅಮರ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: