ವೃತ್ತಿಯಲ್ಲಿ ಪೇಂಟರ್ ಆಗಿರುವ ಸದಾನಂದನ್ ಅವರು ಮೂಲತಃ ಕೊಟ್ಟಾಯಂ ನವರು. ಅದೃಷ್ಠ ಅಂದ್ರೆ ಇವ್ರದ್ದು ನೋಡಿ. ೫೦೦ ನೋಟ್ ಮುರಿಸಲು ಹೋಗಿ ಲಾಟರಿಯನ್ನು ಕೊಂಡುಕೊಂಡಿದ್ದಾರೆ. ಮಧ್ಯಾನದ ಹೊತ್ತಿಗೆ ಗೊತ್ತಾಗಿದೆ, ಇವರು ಬರೋಬ್ಬರಿ ೧೨ ಕೋಟಿ ಗೆದ್ದಿದ್ದಾರೆ ಅಂತ. ಇನ್ನು ಈ ಬಗ್ಗೆ , ಮಾತನಾಡಿದ ಸದಾನಂದನ್ ಅವರು ಈ ದುಡ್ಡನ್ನು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಉಪಯೋಗಿಸುವುದಾಗಿ ತಿಳಿಸಿದ್ದಾರೆ. ಸದಾನಂದನ್ ಹಲವು ವರ್ಷಗಳಿಂದ ಲಾಟರಿ ಟಿಕೆಟ್ಗಳನ್ನು ಖರೀದಿಸುತ್ತಿದ್ದಾರೆ. ಆದರೆ ಈ ಬಾರಿ ಮಾತ್ರ ಅವರು ಜಾಕ್ಪಾಟ್ ಹೊಡೆಯುವಲ್ಲಿ ಯಶಸ್ವಿಯಾದರು.