ಫಿಸಿಯೋಥೆರಪಿಯ ಮಧುಮೇಹ ಪಾದದ ಚಿಕಿತ್ಸೆಯ ವಿಭಾಗದಲ್ಲಿ ಪಾದಗಳ ನರದೌರ್ಬಲ್ಯಕ್ಕೆ ಲೇಸರ್ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ನರದೌರ್ಬಲ್ಯದ ಲಕ್ಷಣಗಳಾದ ಉರಿ, ಜುಮ್ಮೆನಿಸುವಿಕೆ, ನೋವು, ಸಂವೇದನಶೀಲತೆ ಗಳು ಕಡಿಮೆಯಾಗುತ್ತವೆ. ಈ ಚಿಕಿತ್ಸೆಯಲ್ಲಿ ಉಪಯೋಗಿಸುವ ಲೇಸರ್ ಕಿರಣಗಳು ಸಾಮಾನ್ಯ ಕಿರಣಗಳಾಗಿರದೆ ನೋವುಗಳ ಚಿಕಿತ್ಸೆಗೆಂದೇ ವಿಶೇಷವಾಗಿ ರೂಪುಗೊಂಡದ್ದಾಗಿರುತ್ತವೆ.
ಇವುಗಳಿಂದ ಯಾವುದೇ ವಿಧವಾದ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ.
ಇಪ್ಪತ್ತೂಂದನೇ ಶತಮಾನದಲ್ಲಿ ಪ್ರಪಂಚದಾದ್ಯಂತ ಅಸಾಂಕ್ರಾಮಿಕ ರೋಗಗಳು ಒಂದು ಹೊರೆಯಾಗಿ ಪರಿಣಮಿಸಿವೆ. ಅವುಗಳೆಂದರೆ ರಕ್ತದೊತ್ತಡ, ಹೃದಯ ಸಂಬಂಧಿ ತೊಂದರೆಗಳು, ಕ್ಯಾನ್ಸರ್, ಪಾರ್ಶ್ವವಾಯು, ಮಧುಮೇಹ. ಅಂತಾರಾಷ್ಟ್ರೀಯ ಮಧುಮೇಹ ಪ್ರತಿಷ್ಠಾನದ ಪ್ರಕಾರ ಮಧುಮೇಹವು ಒಂದು ಜಾಗತಿಕ ಹೊರೆಯಾಗಿ ಪರಿಣಮಿಸುತ್ತಿದೆ. ಅಲ್ಲದೆ ಇದು ಆರ್ಥಿಕ ದುಸ್ಥಿತಿಗೂ ಕಾರಣವಾಗಿದೆ. ಮುಂದುವರಿದ ಮತ್ತು ಮುಂದುವರಿಯತ್ತಿರುವ ಎರಡೂ ರಾಷ್ಟ್ರಗಳಲ್ಲಿ ಇದು ಸಮಸ್ಯೆಯನ್ನು ತಂದೊಡ್ಡುತ್ತಿದೆ.
ಮಧುಮೇಹ ಹೊಂದಿರುವವರು ಜೀವಕ್ಕೆ ತೊಂದರೆ ಉಂಟುಮಾಡುವ ವಿವಿಧ ಕಾಯಿಲೆಗಳಿಗೆ ತುತ್ತಾಗುವಅಪಾಯ ಜಾಸ್ತಿ ಇರುತ್ತದೆ. ಹಾಗಾಗಿ ಇವರಿಗೆ ವೈದ್ಯಕೀಯ ಆರೈಕೆಯ ಅಗತ್ಯವು ಹೆಚ್ಚಾಗಿ ಇರುವುದರಿಂದ ಇವರ ಜೀವನ ಮಟ್ಟ ಕುಂದುವುದರೊಂದಿಗೆ ಮನೆಯವರ ಮೇಲೂ ಒತ್ತಡ ಬೀಳುವಂತೆ ಮಾಡುತ್ತದೆ. ಮಧುಮೇಹ ಮತ್ತು ಅದರಿಂದ ಉಂಟಾಗುವ ತೊಂದರೆಗಳಿಗೆ ಸರಿಯಾದ ಚಿಕಿತ್ಸೆ ನೀಡದೆ ಹೋದಲ್ಲಿ ಪದೇ ಪದೆ ಆಸ್ಪತ್ರೆಗೆ ದಾಖಲಾಗುವ ಸಂದರ್ಭ ಉಂಟಾಗುತ್ತದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: