ಸುಮಾರು ಹದಿನೈದು ಅಡಿ ಎತ್ತರದ ಕಂಬದ ಮೇಲಿರುವ ಸಮತಟ್ಟಾದ ಪೀಠದ ಮೇಲೆ ಆನೆಗಳ ಮೇಲೆ ಗರುಡ. ವೀರರು ಮತ್ತು ಆತನ ಪತ್ನಿಯರ ಶಿಲ್ಪಗಳಿವೆ. ರಾಜರಿಗಾಗಿ ಏಳು ತಲೆಮಾರುಗಳಿಂದ ಲೆಂಕವಾಳಿಯಾಗಿ ಆತ್ಮಾರ್ಪಣೆ ಮಾಡಿಕೊಳ್ಳುವ ವಿವರಗಳು ಅಲ್ಲಿರುವ ಶಾಸನಗಳಲ್ಲಿ ಹಾಗೂ ಶಿಲ್ಪಗಳಲ್ಲಿ ದೊರೆಯುತ್ತದೆ. ಶಾಸನದಲ್ಲಿರುವ ಸಮಗ್ರ ಮಾಹಿತಿಯನ್ನು ಶಿಲ್ಪಗಳಲ್ಲಿ ಬಿಂಬಿಸಲಾಗಿದೆ.ಕಬ್ಬಾಹುನಾಡನ್ನು ಅಳುತ್ತಿದ್ದ ಮತ್ತು ಮೂಲಿಗ ಕುಲಕ್ಕೆ ಸೇರಿದ ಮಹಾಪ್ರಭು ಗಂಡನಾರಾಯಣಸೆಟ್ಟಿ ಮತ್ತು ಮಾಕವ್ವೆ. ಅವರ ಮಗ ಮಹಾಪ್ರಭು ಹೊಯ್ಸಳಸೆಟ್ಟಿ ಮತ್ತು ಅವನ ಪತ್ನಿ ಮಾಚವ್ವೆ ನಾಯಕಿತಿ ಹಾಗೂ ಅವರ ಉತ್ತರಾಧಿಕಾರಿಗಳು ಹೊಯ್ಸಳ ಅರಸರ ಲೆಂಕರಾಗಿದ್ದರುಈ ಮೂಲಿಗ ಕುಲಕ್ಕೆ ಸೇರಿದ ಮಹಾಸಾಮಂತ ಗಂಗತಾಯಿಯ ಗಂಡ ನಾರಾಯಣ ಸೆಟ್ಟಿ. ಮಾಕವ್ವೆ ನಾಯಕಿಯ ಜತೆ ಐವರು ಲೆಂಕರು ಹೊಯ್ಸಳ ರಾಜರಾದ ಮೊದಲನೇ ಬಲ್ಲಾಳ ಮತ್ತು ಮುಮ್ಮಡಿ ನರಸಿಂಹ (೧೧೦೦ – ೧೨೯೧) ಆಳ್ವಿಕೆಯಕಾಲದಲ್ಲಿ ಆತ್ಮಾರ್ಪಣೆ ಮಾಡಿಕೊಳ್ಳುವರು. ನಂತರದ ಕಾಲದಲ್ಲಿ ಮಾರಿ ಸೆಟ್ಟಿ ಮಾರವ್ವೆನಾಯಕಿ ಮತ್ತು ಐವರು ಲೆಂಕರು ಕೊರೆಯನಾಯಕ – ಮಾರವ್ವೆ ನಾಯಕಿ. ಚಿಕ್ಕ ಮಾರೆವ್ವೆ ನಾಯಕಿ. ಸಿವೆ ನಾಯಕಿ. ಲಿಖಿಯನಾಯಕ. ಗಂಗಾದೇವಿ. ಕನ್ನೆಯನಾಯ್ಕ ಮತ್ತು ಅವನ ಪತ್ನಿಯರಾದ ವೋಮವ್ವೆ, ಜವ್ವನವ್ವೆ, ಕಲ್ಲವ್ವೆ ಮತ್ತು ಹತ್ತು ಜನ ಲೆಂಕತಿಯರು. ಇಪ್ಪತ್ತೊಂದು ಜನ ಲೆಂಕರು. ರಂಗನಾಯಕ – ಕೇಕವ್ವೆ. ಹೊನ್ನವ್ವೆ, ಮಂಚವ್ವೆ ಮತ್ತು ಹತ್ತು ಜನ ಲೆಂಕತಿಯರು ಇಪ್ಪತ್ತು ಜನ ಲೆಂಕರು ತಮ್ಮ ದೋರೆಗಾಗಿ ಗರುಡ ಪದ್ದತಿಯನ್ನು ಸ್ವೀಕರಿಸಿ ಆತ್ಮಾರ್ಪಣೆ ಮಾಡಿಕೊಡಿರುವುದಕ್ಕೆ ದಾಖಲೆ ಸಿಗುತ್ತದೆ. ಇಡೀ ಕುಟುಂಬವೇ ಪಾರಂಪರಿಕವಾಗಿ ಲೆಂಕವಾಳಿಯಾಗಿ ತಮ್ಮ ಪತ್ನಿಯರ ಸಮೇತರಾಗಿ ಆತ್ಮ ಬಲಿದಾನಗೈದ ಅಪರೂಪದ ದಾಖಲೆಯನ್ನು ಅಗ್ರಹಾರ ಬಾಚಹಳ್ಳಿಯ ಗರುಡ ಸ್ತಂಭಗಳು ಹೊತ್ತಿವೆ. ಇಲ್ಲಿನ ಪ್ರತಿ ಕಂಬದ ಮೇಲಿರುವ ಆನೆಗಳ ಮೇಲೆ ಗರುಡನ ಶಿಲ್ಪವಿದ್ದು. ಆದರ ಎದುರಿಗೆ ವೀರರ ಶಿಲ್ಪಗಳಿವೆ. ಅನೆಯ ಕೆಳಗಿನ ಪೀಠದಲ್ಲಿ ವೀರರ ಯಾವ ರೀತಿ ಆತ್ಮ ಬಲಿದಾನ ಮಾಡಿಕೊಳ್ಳುತ್ತಿದ್ದರು ಎಂದು ತಿಳಿಸುವ ಶಿಲ್ಪಗಳಿವೆ. ಒಬ್ಬರೂ ಆನೆಯಿಂದ ತುಳಿಸಿಕೊಂಡು ಸತ್ತರೆ. ಮತ್ತೊಬ್ಬ ಭರ್ಜಿಯಿಂದ ಚುಚ್ಚಿಸಿಕೊಂಡು ಮರಣಿಸುತ್ತಾನೆ. ಮಗದೊಬ್ಬ ಗರುಡ ಸ್ತಂಭಕ್ಕೆ ಕತ್ತಿಯನ್ನು ಬಿಗಿದು ಆ ಕತ್ತಿಗೆ ಅಪ್ಪಿಕೊಂಡು ಸಾವನ್ನು ಅಪ್ಪುತ್ತಿರುವುದು ಕಂಡುಬರುತ್ತದೆ. ಇಂತಹ ಅದ್ಬುತವಾದ ಮನ ಮಿಡಿಯುವ ರೋಜಕವಾದ ಇತಿಹಾಸ ಹಿನ್ನಲೆ ಹೊಂದಿದೆ ಅಗ್ರಹಾರ ಬಾಚಹಳ್ಳಿ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada