ಜಗ್ಗೇಶ್, ರಚಿತಾಗೆ ಮಂತ್ರಾಲಯ ಗುರುವೈಭವೋತ್ಸವ ಪ್ರಶಸ್ತಿ ಪ್ರದಾನ.

ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ಗುರುವೈಭವೋತ್ಸವ ಹಿನ್ನೆಲೆ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಹಾಗೂ ನಟಿ ರಚಿತಾರಾಮ್ ಸೇರಿದಂತೆ ಹಲವು ಗಣ್ಯರಿಗೆ ಗುರುವೈಭವೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.ರಾಯರ ಪಟ್ಟಾಭಿಷೇಕ ಹಾಗೂ ಜನ್ಮದಿನ ನಿಮಿತ್ತ ಆರುದಿನಗಳ ಕಾಲ ಆಚರಿಸುವ ಗುರುವೈಭವೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಪ್ರತೀವರ್ಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.ಅಂತೆಯೇ ಈ ವರ್ಷದ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ನಟ ಜಗ್ಗೇಶ್ ದಂಪತಿ ಹಾಗೂ ರಚಿತಾರಾಮ್‍ಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರು.ಇದಕ್ಕೂ ಮೊದಲು ದಂಪತಿ ಸಮೇತವಾಗಿ ರಾಯರ ಮೂಲವೃಂದಾವನ ದರ್ಶನ ಪಡೆದ ಜಗ್ಗೇಶ್ ವಿಶೇಷ ಪೂಜೆ ಸಲ್ಲಿಸಿದರು. ನಟಿ ರಚಿತಾ ರಾಮ್ ಒಂದೇ ದಿನ ಮೂರು ಬಾರಿ ರಾಯರ ವೃಂದಾವನ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೀಲು ನೋವಿಗೆ ಇಲ್ಲಿದೆ ಮನೆ ಮದ್ದು.!

Fri Feb 24 , 2023
ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದರಿಂದ, ಹೆಚ್ಚು ಹೊತ್ತು ವಾಹನ ಚಾಲನೆ ಮಾಡುವುದರಿಂದ ಸಣ್ಣ ಪ್ರಾಯದಲ್ಲೇ ಮೊಣಕಾಲಿನ ಮೇಲೆ ಒತ್ತಡ ಬಿದ್ದು ಕೀಲು ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಪರಿಹಾರಗಳನ್ನು ನೋಡೋಣ.ಶರೀರದಲ್ಲಿ ಮಿನರಲ್ಸ್ ಕಡಿಮೆ ಆಗುವುದರಿಂದ ಇಂತಹ ಸಮಸ್ಯೆಗಳು ಹೆಚ್ಚಾಗುತ್ತವೆ.ಬೆಳ್ಳುಳ್ಳಿಯಲ್ಲಿ ಆಂಟಿ ಇಂಫ್ಲೋಮೆಟರಿ ಇರುತ್ತದೆ ಇದು ಸುಲಭವಾಗಿ ಕೀಲು ನೋವನ್ನು ಹೋಗಲಾಡಿಸುತ್ತದೆ.ಎರಡು ಲೋಟ ನೀರಿಗೆ ಅರ್ಧ ಚಮಚ ಅರಿಷಿಣ ಮತ್ತು ಅರ್ಧ ಚಮಚ ಬೆಳ್ಳುಳ್ಳಿ ಪೇಸ್ಟನ್ನು ಹಾಕಿ 8 ರಿಂದ 9 […]

Advertisement

Wordpress Social Share Plugin powered by Ultimatelysocial