ಸ್ನೇಹಿತನ ಜತೆ ಮದ್ವೆಯಾಗಿ ವರನಿಗೆ ಶಾಕ್​ ಕೊಟ್ಟ ವಧು

ಮದುವೆಯ ಶುಭ ಸಮಯವನ್ನು ಮೀರಿ ಗಂಟೆಗಟ್ಟಲೇ ಕಲ್ಯಾಣ ಮಂಟಪದಲ್ಲೇ ಡಾನ್ಸ್​ ಮಾಡುತ್ತಿದ್ದ ವರನ ವರ್ತನೆಯಿಂದ ಬೇಸತ್ತ ವಧುವೊಬ್ಬಳು ವಿವಾಹವನ್ನೇ ರದ್ದು ಮಾಡಿ ಬೇರೊಬ್ಬನ ಜೊತೆ ಸಪ್ತಪದಿ ತುಳಿದ ವಿಚಿತ್ರ ಘಟನೆ ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ನಡೆದಿದೆ.ಖುಷಿಯನ್ನು ತಡೆಯಲಾರದೇ ತಡರಾತ್ರಿ ತನ್ನದೇ ಮದುವೆ ಸಮಾರಂಭದಲ್ಲಿ ಸಿಕ್ಕಾಪಟ್ಟೆ ಕುಣಿದಿದ್ದು ವರನಿಗೆ ಶಾಪವಾಗಿ ಪರಿಣಮಿಸಿದೆ. ಅದೇ ಮಂಟಪದಲ್ಲಿ ವಧು, ತನ್ನ ಸ್ನೇಹಿತನ ಜೊತೆ ವಿವಾಹ ಮಾಡಿಕೊಂಡಿದ್ದಾರೆ. ಈ ಘಟನೆ ಬುಲ್ಧಾನಾ ಜಿಲ್ಲೆಯ ಮಲ್ಕಪುರ್​ ಪಂಗ್ರಾ ಗ್ರಾಮದಲ್ಲಿ ನಡೆದಿದೆ.ವರದಿಗಳ ಪ್ರಕಾರ ವರ, ಸರಿಯಾದ ಸಮಯಕ್ಕೆ ವಧುವಿನ ಮನೆಯನ್ನು ತಲುಪಬೇಕಿತ್ತು. ಆದರೆ, ಅದಾಗಲೇ ಮದುವೆಯ ಮೆರವಣಿಗೆಯು ತುಂಬಾ ತಡವಾಗಿ ಶುಭ ಮುಹೂರ್ತವನ್ನು ಮೀರಿತ್ತು. ವಧು ಮತ್ತು ಆಕೆಯ ಮನೆಯವರು ಸಾಕಷ್ಟು ಕಾದರೂ ವರನ ಸುಳಿವು ಮಾತ್ರ ಸಿಗಲೇ ಇಲ್ಲ. ಇತ್ತ ಮದುವೆಗೆ ಬಂದಿದ್ದವರು ಕಂಠಪೂರ್ತಿ ಕುಡಿದು ಡಾನ್ಸ್​ನಲ್ಲಿ ಮಗ್ನರಾಗಿದ್ದರು. ಸ್ನೇಹಿತರೆಲ್ಲರು ಡಾನ್ಸ್​ ಮಾಡುವುದನ್ನು ನೋಡಿದ ವರ, ತಾನು ಕೂಡ ಕಾರಿನಿಂದ ಕೆಳಗೆ ಇಳಿದು ಪಾನಮತ್ತ ಸ್ನೇಹಿತರ ಜೊತೆ ಕುಣಿಯಲು ಶುರು ಮಾಡಿದ.ಹಲವಾರು ಗಂಟೆಗಳ ಕಾಲ ಕಾದ ನಂತರ, ವಧುವಿನ ತಂದೆ ನೃತ್ಯವನ್ನು ನಿಲ್ಲಿಸಿ ಮದುವೆಗೆ ಬರುವಂತೆ ವರನನ್ನು ವಿನಂತಿಸಿದಾಗ, ಆತನ ಪಾನಮತ್ತ ಸ್ನೇಹಿತರು ವಧುವಿನ ತಂದೆ ಮತ್ತು ಕುಟುಂಬದ ಇತರ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಗಟಾಲೆ ಜೋರಾಗಿ ನಡೆಯಿತು. ಇದರಿಂದ ಬೇಸತ್ತ ವಧು, ಅಲ್ಲಿಯೇ ಮದುವೆಯನ್ನು ರದ್ದು ಮಾಡಿಕೊಂಡಳು. ವಧುವಿನ ನಿರ್ಧಾರ ವರನ ಕುಟುಂಬವನ್ನು ಶಾಕ್​ಗೆ ದೂಡಿತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾಗಲಕೋಟೆಯಲ್ಲಿ ಲಾರಿ -ಬಸ್ ನಡುವೆ ಮುಖಾಮುಖಿ ಡಿಕ್ಕಿ

Fri Jan 6 , 2023
ಕ್ಯಾಂಟರ್‌ ಲಾರಿ ಹಾಗೂ ಕೆಎಸ್‌ ಆರ್‌ ಟಿಸಿ ಬಸ್‌ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.ಈ ಅವಘಡದಲ್ಲಿ ಸುಮಾರು 14 ಮಂದಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಬಾಗಲಕೋಟೆಯ ಗದ್ದನಕೇರಿ ಬಳಿ ಇಟಗಿ ಭೀಮಮ್ಮ ದೇವಸ್ಥಾನದ ಬಳಿ ಈ ಅಪಘಾತ ಸಂಭವಿಸಿದೆ. ಬಸ್ ನಲ್ಲಿದ್ದ ವಿದ್ಯಾರ್ಥಿ ರಾಹುಲ್ ಪಾಟೀಲ್ ಸಾವನ್ನಪ್ಪಿದ್ದಾನೆ.ಬಸ್‌ ಅಮಲಜರಿಯಿಂದ ಬಾಗಲಕೋಟೆಗೆ ಬರುತ್ತಿತ್ತು. ಈ ವೇಳೆ ಬಾಗಲಕೋಟೆಯಿಂದ ಬೆಳಗಾವಿ ಕಡೆಗೆ ಕ್ಯಾಂಟರ್‌ ಲಾರಿ […]

Advertisement

Wordpress Social Share Plugin powered by Ultimatelysocial