ಹೊಸದಾಗಿ ಮದುವೆಯಾಗಿ ತಿರುಪತಿ ತಿಮ್ಮಪ್ಪನ ದರ್ಶನ ಮತ್ತು ಆಶೀರ್ವಾದಕ್ಕಾಗಿ ಹೋಗುವುದು ಇವಾಗ ದುಸ್ತರವಾಗಿದೆ.. ಇದನ್ನರಿತ ಟಿಟಿಡಿ ಕಾರ್ಯಾಲಯವು ಮದುವೆಯಾಗುವ ಜೋಡಿಗಳಿಗೆ ಸಿಹಿಯ ಸುದ್ದಿಯನ್ನು ನೀಡಿದೆ.. ಈ ಹಿಂದೆ ತಿಮ್ಮಪ್ಪನ ಅನುಗ್ರಹ ಆಶೀರ್ವಾದಕ್ಕಾಗಿ ಬಸ್ಸು ರೈಲು ಬುಕ್ ಮಾಡಿ ತಿರುಮಲಕ್ಕೆ ಹೋಗಬೇಕಾಗಿತ್ತು. ಆದರೆ ಈಗ ಅಂಚೆ ಮೂಲಕ ಟಿಟಿಡಿ ಅಧಿಕಾರಿಗಳಿಗೆ ಲಗ್ನಪತ್ರಿಕೆ ಕಳುಹಿಸಿಕೊಟ್ಟರೆ ಸಾಕು.. ಶ್ರೀ ವೆಂಕಟೇಶ್ವರನ ಆಶೀರ್ವಾದ ನಿಮ್ಮ ಮನೆಯ ಬಾಗಿಲಿಗೆ ಬರುತ್ತದೆ.. ಶ್ರೀ ಸ್ವಾಮಿಯ ಕಲ್ಯಾಣೋತ್ಸವ ಸಮಯದಲ್ಲಿ ಸ್ವಾಮಿಗೆ ಮಾಡಿದ ಪೂಜೆಯ ಅರಿಶಿನ-ಕುಂಕುಮ ಮತ್ತು ಮಂತ್ರಾಕ್ಷತೆಯನ್ನು ಮನೆಗೆ ಕಳುಹಿಸಿಕೊಡಲಾಗುತ್ತದೆ.. ಮತ್ತು ಯೋಜನೆಯ ಸಂಪೂರ್ಣ ಉಚಿತವಾಗಿದ್ದು ಭಕ್ತರು ಇದರ ಪ್ರಯೋಜನ ಪಡೆಯಬೇಕಾಗಿ ಟಿಟಿಡಿ ತಿಳಿಸಿದೆ.. ಮದುವೆಯ ಆಮಂತ್ರಣವನ್ನು ದಿನಾಂಕ ನಿಗದಿಯಾದ ಮೊದಲೇ ಕಳುಹಿಸಿದರೆ.. ಮದುವೆಯ ಶುಭದಿನವೇ ಶ್ರೀ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ ಬರುತ್ತದೆ.. ಇದು ನವಜೋಡಿಗಳಿಗೆ ಆಗಿಯೇ ಮಾಡಿರುವ ವಿಶೇಷ ಯೋಜನೆಯಾಗಿದೆ.. ಎಂದು ಟಿಟಿಡಿ ಸಾರ್ವಜನಿಕ ಸಂಪರ್ಕ ಅಧಿಕಾರಿ..ಟಿ. ರವಿ ತಿಳಿಸಿದ್ದಾರೆ…
ಇದನ್ನೂ ಓದಿ:ಅಮಾಯಕರಿಂದ ಹಣ ಲಪಾಟಿಯಿಸಿದ ಖತರ್ನಾಕ್ ದಂಪತಿಗಳು