ಮದುವೆಯಾಗುವ ನವ ಜೋಡಿಯ ದಂಪತಿಗಳಿಗೆ ಸಿಹಿ ಸುದ್ದಿ…

ಹೊಸದಾಗಿ ಮದುವೆಯಾಗಿ ತಿರುಪತಿ ತಿಮ್ಮಪ್ಪನ ದರ್ಶನ ಮತ್ತು ಆಶೀರ್ವಾದಕ್ಕಾಗಿ ಹೋಗುವುದು ಇವಾಗ ದುಸ್ತರವಾಗಿದೆ.. ಇದನ್ನರಿತ ಟಿಟಿಡಿ ಕಾರ್ಯಾಲಯವು ಮದುವೆಯಾಗುವ ಜೋಡಿಗಳಿಗೆ ಸಿಹಿಯ ಸುದ್ದಿಯನ್ನು ನೀಡಿದೆ.. ಈ ಹಿಂದೆ ತಿಮ್ಮಪ್ಪನ ಅನುಗ್ರಹ ಆಶೀರ್ವಾದಕ್ಕಾಗಿ ಬಸ್ಸು ರೈಲು ಬುಕ್ ಮಾಡಿ ತಿರುಮಲಕ್ಕೆ ಹೋಗಬೇಕಾಗಿತ್ತು. ಆದರೆ ಈಗ ಅಂಚೆ ಮೂಲಕ ಟಿಟಿಡಿ ಅಧಿಕಾರಿಗಳಿಗೆ ಲಗ್ನಪತ್ರಿಕೆ ಕಳುಹಿಸಿಕೊಟ್ಟರೆ ಸಾಕು.. ಶ್ರೀ ವೆಂಕಟೇಶ್ವರನ ಆಶೀರ್ವಾದ ನಿಮ್ಮ ಮನೆಯ ಬಾಗಿಲಿಗೆ ಬರುತ್ತದೆ.. ಶ್ರೀ ಸ್ವಾಮಿಯ ಕಲ್ಯಾಣೋತ್ಸವ ಸಮಯದಲ್ಲಿ ಸ್ವಾಮಿಗೆ ಮಾಡಿದ ಪೂಜೆಯ ಅರಿಶಿನ-ಕುಂಕುಮ ಮತ್ತು ಮಂತ್ರಾಕ್ಷತೆಯನ್ನು ಮನೆಗೆ ಕಳುಹಿಸಿಕೊಡಲಾಗುತ್ತದೆ.. ಮತ್ತು ಯೋಜನೆಯ ಸಂಪೂರ್ಣ ಉಚಿತವಾಗಿದ್ದು ಭಕ್ತರು ಇದರ ಪ್ರಯೋಜನ ಪಡೆಯಬೇಕಾಗಿ ಟಿಟಿಡಿ ತಿಳಿಸಿದೆ.. ಮದುವೆಯ ಆಮಂತ್ರಣವನ್ನು ದಿನಾಂಕ ನಿಗದಿಯಾದ ಮೊದಲೇ ಕಳುಹಿಸಿದರೆ.. ಮದುವೆಯ ಶುಭದಿನವೇ ಶ್ರೀ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ ಬರುತ್ತದೆ.. ಇದು ನವಜೋಡಿಗಳಿಗೆ ಆಗಿಯೇ ಮಾಡಿರುವ ವಿಶೇಷ ಯೋಜನೆಯಾಗಿದೆ.. ಎಂದು ಟಿಟಿಡಿ ಸಾರ್ವಜನಿಕ ಸಂಪರ್ಕ ಅಧಿಕಾರಿ..ಟಿ. ರವಿ ತಿಳಿಸಿದ್ದಾರೆ…

ಇದನ್ನೂ ಓದಿ:ಅಮಾಯಕರಿಂದ ಹಣ ಲಪಾಟಿಯಿಸಿದ ಖತರ್ನಾಕ್ ದಂಪತಿಗಳು

Please follow and like us:

Leave a Reply

Your email address will not be published. Required fields are marked *

Next Post

ಪ್ರತಿಷ್ಠೆಗಾಗಿ ಹೋರಾಟದ ದೊಂಬರಾಟ..! ಸಚಿವ ಆರ್. ಅಶೋಕ್ ವಾಗ್ದಾಳಿ

Mon Dec 14 , 2020
ಕೋಡಿಹಳ್ಳಿ ಚಂದ್ರಶೇಖರ್ ಗಂಟೆಗೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಸಚಿವ ಆರ್. ಅಶೋಕ್ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಲ ಮುಖಂಡರು ಮುಷ್ಕರ ವಾಪಸ್ ಪಡೆದು ಕರ್ತವ್ಯಕ್ಕೆ ಹಾಜರಾಗಿದ್ದಾರೆ, ಇನ್ನು ಹಲವರು ಮುಷ್ಕರ ಮುಂದುವರೆಸಿದ್ದಾರೆ. ರಾಜ್ಯದ ಜನರು ಈ ದೊಂಬರಾಟವನ್ನು ಗಮನಿಸುತ್ತಿದ್ದಾರೆ ಇಲಾಖೆಗೆ ಸಂಬಂಧಿಸದ ವ್ಯಕ್ತಿಯೊಬ್ಬ ಸ್ವಪ್ರತಿಷ್ಠೆಗಾಗಿ ಸಾರಿಗೆ ನೌಕರರನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ. ಇದರ ಹಿಂದಿನ ಕೈವಾಡದ ಬಗ್ಗೆ ರಾಜ್ಯದ ಜನತೆಗೆ ಗೊತ್ತಾಗಬೇಕಿದೆ. ಸಾರಿಗೆ ನೌಕರರ ಮುಷ್ಕರದಿಂದಾಗಿ ರಾಜ್ಯಾದ್ಯಂತ ರೋಗಿಗಳು, […]

Advertisement

Wordpress Social Share Plugin powered by Ultimatelysocial