ಹಿರಿಯರಾದ ಡಾ. ಕೆ. ಮರುಳಸಿದ್ದಪ್ಪ ಅವರು ನಮ್ಮ ಕನ್ನಡ ನಾಡಿನ ಮಹತ್ವದ ವಿದ್ವಾಂಸರು, ಪ್ರಾಧ್ಯಾಪಕರು ಮತ್ತು ಬರಹಗಾರರು.
ಮರುಳಸಿದ್ದಪ್ಪನವರು 1940ರ ಜನವರಿ 12ರಂದು ಜನಿಸಿದರು. ಅವರ ಊರು ಚಿಕ್ಕಮಗಳೂರು ಜಿಲ್ಲೆಯ ಕಾರೇಹಳ್ಳಿ.
ತಂದೆ ಉಜ್ಜನಪ್ಪ. ತಾಯಿ ಕಾಳಮ್ಮ.
ಮರುಳಸಿದ್ದಪ್ಪನವರು ‘ಆಧುನಿಕ ಕನ್ನಡ ನಾಟಕ ವಿಮರ್ಶೆ’ ಮಹಾಪ್ರಬಂಧ ಮಂಡಿಸಿ ಡಾಕ್ಟೊರೇಟ್ ಗೌರವ ಗಳಿಸಿದರು. ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರೂ, ಮುಖ್ಯಸ್ಥರೂ ಆಗಿ ಅನೇಕ ಪ್ರತಿಭೆಗಳನ್ನು ಬೆಳಗಿಸಿದರು.
ಮರುಳಸಿದ್ದಪ್ಪನವರಿಂದ ರಂಗಭೂಮಿ, ನಾಟಕ ಮತ್ತು ಜಾನಪದ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ಸಲ್ಲುತ್ತಿದೆ. ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ ಸಹಾ ಅಪಾರ ಕೆಲಸ ಮಾಡಿದ್ದಾರೆ.
ಮರುಳಸಿದ್ದಪ್ಪನವರು ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಸಂಪುಟಗಳಲ್ಲಿ ಷಟ್ಪದಿ ಸಾಹಿತ್ಯ ಮೂಡಿಸಿದ್ದಾರೆ. ಅವರ ಹೆಸರಾಂತ ಸಂಪಾದನೆಗಳಲ್ಲಿ ಕನ್ನಡ ನಾಟಕ: ವಿಮರ್ಶೆ (೧೯೭೮), ಲಾವಣಿಗಳು (೧೯೭೨), ಶತಮಾನದ ನಾಟಕ(೨೦೦೩), ಒಡನಾಟ (೨೦೦೩), ವಚನ ಕಮ್ಮಟ ( ಇತರರೊಂದಿಗೆ), ಗಿರೀಶ್ ಕಾರ್ನಾಡರ ನಾಟಕಗಳು: ಕನ್ನಡದ ಪ್ರತಿಕ್ರಿಯೆ (೨೦೧೦) ಮುಂತಾದವು ಸೇರಿವೆ.
ಮರುಳಸಿದ್ದಪ್ಪನವರ ಅನುವಾದಗಳಲ್ಲಿಮೀಡಿಯಾ (ಯುರಿಪಿಡೀಸನ ನಾಟಕ), ಎಲೆಕ್ಟ್ರ (ಸಾಫೋಕ್ಲಿಸನ ನಾಟಕ), ರಕ್ತಕಣಗೀಲೆ (ರವೀಂದ್ರನಾಥ ಠಾಗೋರ್ ಕೃತಿ), ಭಾರತೀಯ ಜಾನಪದ ಸಮೀಕ್ಷೆ ದುರ್ಗಾ ಭಾಗವತ್ ಕೃತಿ ಸೇರಿವೆ.
ಉಲ್ಲಾಸ (೨೦೧೩), ಲಂಕೇಶ ಬದುಕು ಬರಹ (೨೦೧೯), ಸಂಗಾತಿ ಮುಂತಾದ ಹಲವಾರು ಕೃತಿಗಳನ್ನೂ ಮೂಡಿಸಿದ್ದಾರೆ.
ನೋಟ ನಿಲುವು (೨೦೦೨) ಅವರ ಪ್ರವಾಸ ಕಥನ.
ಮರುಳಸಿದ್ದಪ್ಪನರು ಪ್ರತಿದಿನ ಫೇಸ್ಬುಕ್ಕಿನಲ್ಲಿ ನೀಡುತ್ತಿರುವ ವಚನ ಸಾಹಿತ್ಯದ ಒಳತಿರುಳನ್ನು ಸವಿಯುವ ಭಾಗ್ಯ ನಮದಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: