ದೇವಸ್ಥಾನದಲ್ಲಿ ಹೋಮ ಮತ್ತು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ/ ನಿಯರಿಗೆ ಬುಕ್ಸ ಮತ್ತು ರಾಮದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಮಾಡಲಾಗಿತ್ತು .ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸಂಗಪ್ಪ ಸವದಿ ರವರ ಹುಟ್ಟು ಹಬ್ಬದ ಪ್ರಯುಕ್ತ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ವೀರಶೈವ ಸಂಘಟನಾ ವೇದಿಕೆ ಮತ್ತು ಸವದಿರವರ ಅಭಿಮಾನಿ ಬಳಗದಿಂದ ಬಟಕುರ್ಕಿ ಗ್ರಾಮದ ಪ್ರೌಢಶಾಲೆಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನೋಟ್ಬುಕ್ಸ್ ಮತ್ತು ಪೆನ್ ವಿತರಣೆ ಮಾಡಲಾಯಿತು ಅದೇ ರೀತಿಯಲ್ಲಿ ಸರ್ಕಾರಿ ಆಸ್ಪತ್ರೆ ರಾಮದುರ್ಗದಲ್ಲಿ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಣೆ ಮಾಡಲಾಯಿತು. ಮತ್ತು ಲಕ್ಷ್ಮಣ್ ಸವದಿ ಅವರು ಇನ್ನಷ್ಟು ಹೆಚ್ಚು ಕಾಲ ಒಳ್ಳೆಳ್ಳೆ ಸೇವೆಯಲ್ಲಿ ತೊಡಗಿಕೊಂಡು ಹಾಗೂ ಆ ದೇವರು ಆರೋಗ್ಯ ಆಯಸ್ಸು ನೀಡಲೆಂದು ದೇವಸ್ಥಾನದಲ್ಲಿ ಹೋಮ ಮಾಡಿಸಲಾಯಿತು.ಈ ಸಂದರ್ಭದಲ್ಲಿ ರಾಮದುರ್ಗ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಮುಖಂಡರಾದ ಬಾಬುರಾವ ರಾಜನಾಳ ಮಾಧ್ಯಮದವರ ಜೊತೆ ಮಾತನಾಡಿದರುಈ ಸಂದರ್ಭದಲ್ಲಿ ಕಲ್ಮೇಶ್ವರ ಮಹಾಸ್ವಾಮಿಗಳು ಚಿಪ್ಪಲಕಟ್ಟಿ.ಬಸವರಾಜ ಕೋಣಣ್ಣವರ. ಬಾಬುರಾವ ರಾಜನಾಳ ಮತ್ತು ರಾಮದುರ್ಗ ತಾಲೂಕು ಲಕ್ಷ್ಮಣ ಸವದಿ ಅಭಿಮಾನ ಬಳಗ ಉಪಸ್ಥಿತರಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada