ಚೇಸ್ ಮಾಡಿ ಕಿಡ್ನಾಪ್ ಆರೋಪಿಯ ಬಂಧನ
ಆಡುಗೋಡಿ ಇನ್ಸ್ ಪೆಕ್ಟರ್ ಮಂಜುನಾಥ್ ಸಮಯ ಪ್ರಜ್ಙೆಯಿಂದ ಉಳಿತು ಒಂದು ಜೀವ
ಕೋರಮಂಗಲ 100 ಫೀಟ್ ರಸ್ತೆ ಬಳಿ ಚೆಕ್ ಪೋಸ್ಟ್ ನಲ್ಲಿದ್ದ ಇನ್ಸ್ ಪೆಕ್ಟರ್ ಮಂಜುನಾಥ್
ನೈಟ್ ರೌಂಡ್ಸ್ ನಲ್ಲಿದ್ದ ಆಡುಗೋಡಿ ಇನ್ಸ್ ಪೆಕ್ಟರ್ ಮಂಜುನಾಥ್
ಈ ವೇಳೆ ಬಂದ ಹೋಂಡಾ ಸಿಟಿ ಕಾರ್ ಬ್ಯಾರಿಕೇಡ್ ಗೆ ಗುದ್ದಿತ್ತು
ರಾತ್ರಿ 11.40 ರ ಸುಮಾರಿಗೆ ನಡೆದ ಘಟನೆ
ಕಾರಿನಲ್ಲಿದ್ದ ಓರ್ವ ಕಾಪಾಡಿ..ಕಾಪಾಡಿ ಎಂದು ಚೀರಿಕೊಂಡಿದ್ದ
ಬ್ಯಾರಿಕೆಡ್ ಗುದ್ದಿ ಪರಾರಿಯಾದ ಕಾರಿನಲ್ಲಿದ್ದ ಆರೋಪಿಗಳು
ಆ ತಕ್ಷಣ ಕಾರ್ ಸ್ಟಾರ್ಟ್ ಮಾಡಿ ಚೇಸ್ ಮಾಡಿದ ಇನ್ಸ್ ಪೆಕ್ಟರ್
2 ಕಿ.ಮೀ.ಚೇಸ್ ಮಾಡಿ ಕೋರಮಂಗಲ ವಾಟರ್ ಟ್ಯಾಂಕ್ ಜಂಕ್ಷನ್ ಬಳಿ ಆರೋಪಿಯ ಬಂಧನ
ಕಾರಿನಲ್ಲಿ ಒಟ್ಟು ನಾಲ್ವರು ಆರೋಪಿಗಳಿದ್ರು
ಓರ್ವ ನನ್ನ ಕಿಡ್ನಾಪ್ ಮಾಡಿ ಕಾರಿನಲ್ಲಿ ಹಾಕಿಕೊಂಡಿದ್ರು
ತಕ್ಷಣ ಇಳಿದು ಪರಾರಿಯಾದ ಮೂವರು ಆರೋಪಿಗಳು
ಓರ್ವ ಆರೋಪಿಯ ವಶಕ್ಕೆ,ಯುವಕನ ರಕ್ಷಣೆ
ಆರೋಪಿ ಗೋಪಿ ವಶಕ್ಕೆ,ತೌಹಿದ್ ಯುವಕನ ರಕ್ಷಣೆ
ಮೂರು ದಿನದ ಹಿಂದೆ ಬಂಡೆಪಾಳ್ಯ ಬಳಿ ತೌಹಿದ್ ಕಿಡ್ನಾಪ್ ಮಾಡಿದ್ದರಂತೆ
ಮೂರು ದಿನದಿಂದ ಗೌಪ್ಯ ಸ್ಥಳದಲ್ಲಿರಿಸಿಕೊಂಡು ಕುಟುಂಬಸ್ಥರಿಗೆ ಬೆದರಿಕೆ
60 ಸಾವಿರ ಹಣ ನೀಡುವಂತೆ ಬೆದರಿಕೆ ಹಾಕ್ತಿದ್ದ ಆರೋಪಿಗಳು
ಪೊಲೀಸ್ ಠಾಣೆಗೆ ವಿಚಾರ ಮುಟ್ಟಿಸಿದರೆ ಕೊಲೆ ಮಾಡೋದಾಗಿ ಬೆದರಿಕೆ
ಹಾಗಾಗಿ ನಿನ್ನೆ ಸಂಜೆ 4.30 ಕ್ಕೆ 35 ಸಾವಿರ ಹಣ ನೀಡಿದ್ರಂತೆ ತೌಹಿದ್ ತಾಯಿ
ಹಣ ಕೊಟ್ಟ ಮೇಲೂ ತೌಹಿದ್ ಬಿಡದ ಆರೋಪಿಗಳು
ಹಾಗಾಗಿ ಮಡಿವಾಳ ಪೊಲೀಸ್ ಠಾಣೆಗೆ ತಡರಾತ್ರಿ ದೂರು ನೀಡಲು ಆಗಮಿಸಿದ್ದ ಕುಟುಂಬ
ಅಷ್ಟರಲ್ಲಾಗಲೇ ಆರೋಪಿಗಳ ಚೇಸ್ ಮಾಡಿ ಹಿಡಿಯಲಾಗಿತ್ತು
ಕಿಡ್ನಾಪ್ ಆಗಿದ್ದು ಬಂಡೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ
ಹಾಗಾಗಿ ತೌಹಿದ್ ಮತ್ತು ಆರೋಪಿ ಗೋಪಿಯನ್ನ ಬಂಡೇಪಾಳ್ಯ ಠಾಣೆಗೆ ಒಪ್ಪಿಸಿದ ಮಡಿವಾಳ ಪೊಲೀಸರು.
https://play.google.com/store/apps/details?id=com.speed.newskannada