ಕಾರ್ ಬಾಂಬ್ ಸ್ಫೋಟಿಸಿದ ಉಗ್ರರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಧ್ಯ ಸೊಮಾಲಿಯಾದ ಮಹಾಸ್ ಪಟ್ಟಣ ಕಾರ್ ಬಾಂಬ್‌ ಸ್ಫೋಟದಿಂದ ತತ್ತರಿಸಿದೆ. ಸ್ಫೋಟಕಗಳನ್ನು ತುಂಬಿದ್ದ ವಾಹನಗಳೊಂದಿಗೆ ಉಗ್ರರು ದಾಳಿ ನಡೆಸಿದ್ದು, ಎರಡು ಕಾರ್ ಬಾಂಬ್ ಸ್ಫೋಟಗಳಲ್ಲಿ ಒಂಭತ್ತು ಜನರು ಸಾವನ್ನಪ್ಪಿದ್ದಾರೆ.

ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಜನನಿಬಿಡ ಪ್ರದೇಶವನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದಾರೆ ಎಂದು ಸ್ಥಳೀಯ ಭದ್ರತಾ ಅಧಿಕಾರಿ ಅಬ್ದುಲ್ಲಾಹಿ ಅದಾನ್ ಹೇಳಿದ್ದಾರೆ. ಈ ದಾಳಿಯನ್ನು ಭಯೋತ್ಪಾದಕ ಸಂಘಟನೆ ಅಲ್-ಶಬಾಬ್‌ಗೆ ಸೇರಿದ ಜಿಹಾದಿ ಹೋರಾಟಗಾರರು ನಡೆಸಿದ್ದರು ಎಂದು ಹೇಳಲಾಗಿದೆ.

ಮಹಾಸ್ ಪೊಲೀಸ್ ಕಮಾಂಡರ್ ಉಸ್ಮಾನ್ ನೂರ್ ಮಾತನಾಡಿ, ಮಹಾಸ್‌ನಲ್ಲಿರುವ ಜಿಲ್ಲಾಡಳಿತ ಭವನದ ರೆಸ್ಟೋರೆಂಟ್ ಬಳಿ ಸ್ಫೋಟ ಸಂಭವಿಸಿದೆ. ಈ ದಾಳಿಯಲ್ಲಿ ಸತ್ತವರೆಲ್ಲರೂ ಅಮಾಯಕ ನಾಗರಿಕರು. ನಾಗರಿಕರನ್ನು ಹೆದರಿಸಲು ಭಯೋತ್ಪಾದಕರು ಸ್ಫೋಟ ನಡೆಸಿದ್ದಾರೆ, ಆದರೆ ಅಂತಹ ಘಟನೆಗಳಿಂದ ಜನರನ್ನು ಹೆದರಿಸಲು ಸಾಧ್ಯವಿಲ್ಲ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಮೋದಿ ಆಗಮನ ಹಿನ್ನೆಲೆ ಸುಧಾರಣೆ ಕಾಣುತ್ತಿರುವ ರಸ್ತೆಗಳು!

Wed Jan 4 , 2023
ಜ.12ರಿಂದ16ರವರೆಗೆ ಧಾರವಾಡದಲ್ಲಿ ನಡೆಯುವ ರಾಷ್ಟ್ರೀಯ ಯುವಜನೋತ್ಸವಕ್ಕೆ ಮೋದಿ ಆಗಮನ ಹಿನ್ನೆಲೆ ಧಾರವಾಡದ ರಸ್ತೆಗಳಿಗೆ ಸುಧಾರಣೆ ಭಾಗ್ಯ ದೊರೆತಿದೆ. ಯುವಜನೋತ್ಸವ ನೆಪಕ್ಕಾದರೂ ಧಾರವಾಡದಲ್ಲಿ ರಸ್ತೆಗಳಿಗೆ ಕಾಯಕಲ್ಪ ನೀಡಲಾಗುತ್ತಿದೆ… ಪ್ರಧಾನಿ ನರೇಂದ್ರ ಮೋದಿಯಿಂದ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆ ಆಗಲಿದೆ.. ಯುವಜನೋತ್ಸವಕ್ಕೆ ಹೊರ ರಾಜ್ಯದಿಂದ 7ಸಾವಿರಕ್ಕೂ ಪ್ರತಿನಿಧಿಗಳು ಆಗಮಿಸಲಿದ್ದಾರೆ… ಹೀಗಾಗಿ ಯಾವತ್ತೂ ಇಲ್ಲದ ರಸ್ತೆಗಳ ಸುಧಾರಣೆಗೆ ಜಿಲ್ಲಾಡಳಿತ ಮುಂದಾಗಿದೆ…ತಗ್ಗು ದಿನ್ನೆಗಳಿಂದ ನಿತ್ಯ ವಾಹನ ಸವಾರರ ಜೀವ ಹಿಂಡುತ್ತಿದ್ದ ಧಾರವಾಡದ ಪ್ರಮುಖ ರಸ್ತೆಗಳು ಇದೀಗ ಯುವಜನೋತ್ಸವ […]

Advertisement

Wordpress Social Share Plugin powered by Ultimatelysocial